<p><strong>ಶಿರಸಿ: </strong>ಬೀದಿನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿಡುವ ಉದ್ದೇಶಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಎಂಟು ದಿನಗಳ ಹಿಂದೆಯೇ ನಗರಸಭೆ ಸುಮಾರು 30ಕ್ಕೂ ಹೆಚ್ಚು ನಾಯಿಗಳನ್ನು ಸೆರೆಹಿಡಿದು ಲಾಲಗೌಡರ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿರಿಸಿದೆ.</p>.<p>ಒಂದೆಡೆ ಬೀದಿನಾಯಿಗಳನ್ನು ವಾರಗಟ್ಟಲೆ ಸೆರೆಹಿಡಿದಿಟ್ಟಿರುವುದಕ್ಕೆ ಪ್ರಾಣಿಪ್ರಿಯರಿಂದ ಆಕ್ಷೇಪ ವ್ಯಕ್ತವಾಗಿದ್ದರೆ, ನಾಯಿ ಉಪಟಳದಿಂದ ಬೇಸತ್ತಿದ್ದ ಜನರು ಕ್ರಮವನ್ನು ಸ್ವಾಗತಿಸಿದ್ದಾರೆ. ಆರಕ್ಕೂ ಹೆಚ್ಚು ಪಂಜರಗಳನ್ನಿಟ್ಟು ಅದರಲ್ಲಿ ಸೆರೆಹಿಡಿಯಲ್ಪಟ್ಟ ನಾಯಿಗಳನ್ನು ಕೂಡಿ ಇಡಲಾಗಿದೆ.</p>.<p>ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗಿದ್ದು, ಹಲವೆಡೆ ನಾಯಿಯು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿದ್ದವು. ಕಳೆದ ವರ್ಷವಷ್ಟೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನೂರಾರು ನಾಯಿಗಳಿಗೆ ನಗರಸಭೆ ಮಾಡಿದ್ದರೂ ಬೀದಿನಾಯಿ ಸಂಖ್ಯೆ ಹೆಚ್ಚಳವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.</p>.<p>ಶಿವಾಜಿಚೌಕ, ಹುಬ್ಬಳ್ಳಿ ರಸ್ತೆ, ಐದು ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ನಗರಸಭೆ ಸೂಚನೆ ಮೇರೆಗೆ ಕಳೆದ ವಾರ ನಾಯಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರು.</p>.<p>‘ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಶೋಷಿಸುವುದು ತಪ್ಪು. ಅದರ ಬದಲು ನಾಯಿಗಳ ಉಪಟಳಕ್ಕೆ ನಗರಸಭೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿತ್ತು. ವಾರಗಟ್ಟಲೆ ತ್ಯಾಜ್ಯ ವಿಲೇವಾರಿ ಘಟಕದಂತ ಸ್ಥಳಗಳಲ್ಲಿ ನಾಯಿಗಳನ್ನು ಕೂಡಿಡುವುದು ಪ್ರಾಣಿ ಹಿಂಸೆ ಮಾಡಿದಂತಾಗುತ್ತದೆ’ ಎಂದು ಪ್ರಾಣಿಪ್ರಿಯೆ ಜ್ಯೋತಿ ಶಿರ್ಸಿಕರ್ ಹೇಳಿದರು.</p>.<p>‘ಬೀದಿನಾಯಿ ಉಪಟಳ ತಡೆಯಲು ಸಾರ್ವಜನಿಕರು ಮಾಡಿದ್ದ ಮನವಿಗೆ ಸ್ಪಂದಿಸಿದ ಕೆಲವು ಬೀದಿನಾಯಿಗಳನ್ನು ತುರ್ತಾಗಿ ಸೆರೆಹಿಡಿಯಲಾಗಿದೆ. ಅವುಗಳನ್ನು ಪ್ರಾಣಿ ಸಂರಕ್ಷಣಾ ಕಾಯ್ದೆಯ ನಿಯಮಾವಳಿ ಅನುಸರಿಸಿ ಸುರಕ್ಷಿತವಾಗಿ ಇಟ್ಟಿದ್ದೇವೆ. ನಿತ್ಯವೂ ಅವುಗಳಿಗೆ ಆಹಾರ, ನೀರು ಒದಗಿಸಲಾಗುತ್ತಿದೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ಪ್ರತಿಕ್ರಿಯಿಸಿದರು.</p>.<p class="Subhead">ಚರ್ಚಿಸುವ ಮೊದಲೇ ಸೆರೆ?</p>.<p>ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಂಬಂಧ ಪಶು ಸಂಗೋಪನಾ ಇಲಾಖೆ ಜತೆ ಚರ್ಚಿಸುವ ಮುನ್ನವೇ ನಗರಸಭೆ ಬೀದಿನಾಯಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದ ವಾರವೇ ನಗರಸಭೆ ಸೂಚನೆ ಮೇರೆಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ನಾಯಿಗಳನ್ನು ಸೆರೆಹಿಡಿದ್ದಾರೆ.</p>.<p>‘ನಗರಸಭೆಯಿಂದ ಮೂರು ದಿನದ ಹಿಂದೆ ಪತ್ರ ಬಂದಿದೆ. ಉಪನಿರ್ದೇಶಕರ ಗಮನಕ್ಕೆ ತಂದ ಬಳಿಕ ನಿರ್ಧರಿಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.</p>.<p>‘ಶಸ್ತ್ರಚಿಕಿತ್ಸೆ ನಡೆಸುವ ಮೂರು ದಿನದ ಮೊದಲು ಸಾಮಾನ್ಯವಾಗಿ ನಾಯಿ ಸೆರೆಹಿಡಿಯಲಾಗುತ್ತದೆ. ವಾರಗಟ್ಟಲೆ ಮೊದಲು ಸೆರೆಹಿಡಿದು ಕೂಡಿಡುವುದು ಸಮಂಜಸವಲ್ಲ’ ಎಂದರು.</p>.<p>--------------------</p>.<p>ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ರೇಬಿಸ್ ಲಸಿಕೆ ನೀಡುವಂತೆಯೂ ವಿನಂತಿಸಿದ್ದೇವೆ.</p>.<p class="Subhead">ಕೇಶವ ಚೌಗುಲೆ, ಪೌರಾಯುಕ್ತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಬೀದಿನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿಡುವ ಉದ್ದೇಶಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಎಂಟು ದಿನಗಳ ಹಿಂದೆಯೇ ನಗರಸಭೆ ಸುಮಾರು 30ಕ್ಕೂ ಹೆಚ್ಚು ನಾಯಿಗಳನ್ನು ಸೆರೆಹಿಡಿದು ಲಾಲಗೌಡರ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿರಿಸಿದೆ.</p>.<p>ಒಂದೆಡೆ ಬೀದಿನಾಯಿಗಳನ್ನು ವಾರಗಟ್ಟಲೆ ಸೆರೆಹಿಡಿದಿಟ್ಟಿರುವುದಕ್ಕೆ ಪ್ರಾಣಿಪ್ರಿಯರಿಂದ ಆಕ್ಷೇಪ ವ್ಯಕ್ತವಾಗಿದ್ದರೆ, ನಾಯಿ ಉಪಟಳದಿಂದ ಬೇಸತ್ತಿದ್ದ ಜನರು ಕ್ರಮವನ್ನು ಸ್ವಾಗತಿಸಿದ್ದಾರೆ. ಆರಕ್ಕೂ ಹೆಚ್ಚು ಪಂಜರಗಳನ್ನಿಟ್ಟು ಅದರಲ್ಲಿ ಸೆರೆಹಿಡಿಯಲ್ಪಟ್ಟ ನಾಯಿಗಳನ್ನು ಕೂಡಿ ಇಡಲಾಗಿದೆ.</p>.<p>ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗಿದ್ದು, ಹಲವೆಡೆ ನಾಯಿಯು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿದ್ದವು. ಕಳೆದ ವರ್ಷವಷ್ಟೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನೂರಾರು ನಾಯಿಗಳಿಗೆ ನಗರಸಭೆ ಮಾಡಿದ್ದರೂ ಬೀದಿನಾಯಿ ಸಂಖ್ಯೆ ಹೆಚ್ಚಳವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.</p>.<p>ಶಿವಾಜಿಚೌಕ, ಹುಬ್ಬಳ್ಳಿ ರಸ್ತೆ, ಐದು ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ನಗರಸಭೆ ಸೂಚನೆ ಮೇರೆಗೆ ಕಳೆದ ವಾರ ನಾಯಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರು.</p>.<p>‘ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಶೋಷಿಸುವುದು ತಪ್ಪು. ಅದರ ಬದಲು ನಾಯಿಗಳ ಉಪಟಳಕ್ಕೆ ನಗರಸಭೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿತ್ತು. ವಾರಗಟ್ಟಲೆ ತ್ಯಾಜ್ಯ ವಿಲೇವಾರಿ ಘಟಕದಂತ ಸ್ಥಳಗಳಲ್ಲಿ ನಾಯಿಗಳನ್ನು ಕೂಡಿಡುವುದು ಪ್ರಾಣಿ ಹಿಂಸೆ ಮಾಡಿದಂತಾಗುತ್ತದೆ’ ಎಂದು ಪ್ರಾಣಿಪ್ರಿಯೆ ಜ್ಯೋತಿ ಶಿರ್ಸಿಕರ್ ಹೇಳಿದರು.</p>.<p>‘ಬೀದಿನಾಯಿ ಉಪಟಳ ತಡೆಯಲು ಸಾರ್ವಜನಿಕರು ಮಾಡಿದ್ದ ಮನವಿಗೆ ಸ್ಪಂದಿಸಿದ ಕೆಲವು ಬೀದಿನಾಯಿಗಳನ್ನು ತುರ್ತಾಗಿ ಸೆರೆಹಿಡಿಯಲಾಗಿದೆ. ಅವುಗಳನ್ನು ಪ್ರಾಣಿ ಸಂರಕ್ಷಣಾ ಕಾಯ್ದೆಯ ನಿಯಮಾವಳಿ ಅನುಸರಿಸಿ ಸುರಕ್ಷಿತವಾಗಿ ಇಟ್ಟಿದ್ದೇವೆ. ನಿತ್ಯವೂ ಅವುಗಳಿಗೆ ಆಹಾರ, ನೀರು ಒದಗಿಸಲಾಗುತ್ತಿದೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ಪ್ರತಿಕ್ರಿಯಿಸಿದರು.</p>.<p class="Subhead">ಚರ್ಚಿಸುವ ಮೊದಲೇ ಸೆರೆ?</p>.<p>ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಂಬಂಧ ಪಶು ಸಂಗೋಪನಾ ಇಲಾಖೆ ಜತೆ ಚರ್ಚಿಸುವ ಮುನ್ನವೇ ನಗರಸಭೆ ಬೀದಿನಾಯಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದ ವಾರವೇ ನಗರಸಭೆ ಸೂಚನೆ ಮೇರೆಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ನಾಯಿಗಳನ್ನು ಸೆರೆಹಿಡಿದ್ದಾರೆ.</p>.<p>‘ನಗರಸಭೆಯಿಂದ ಮೂರು ದಿನದ ಹಿಂದೆ ಪತ್ರ ಬಂದಿದೆ. ಉಪನಿರ್ದೇಶಕರ ಗಮನಕ್ಕೆ ತಂದ ಬಳಿಕ ನಿರ್ಧರಿಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.</p>.<p>‘ಶಸ್ತ್ರಚಿಕಿತ್ಸೆ ನಡೆಸುವ ಮೂರು ದಿನದ ಮೊದಲು ಸಾಮಾನ್ಯವಾಗಿ ನಾಯಿ ಸೆರೆಹಿಡಿಯಲಾಗುತ್ತದೆ. ವಾರಗಟ್ಟಲೆ ಮೊದಲು ಸೆರೆಹಿಡಿದು ಕೂಡಿಡುವುದು ಸಮಂಜಸವಲ್ಲ’ ಎಂದರು.</p>.<p>--------------------</p>.<p>ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ರೇಬಿಸ್ ಲಸಿಕೆ ನೀಡುವಂತೆಯೂ ವಿನಂತಿಸಿದ್ದೇವೆ.</p>.<p class="Subhead">ಕೇಶವ ಚೌಗುಲೆ, ಪೌರಾಯುಕ್ತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>