ಶಿರಸಿ ತಾಲ್ಲೂಕಿನ ತಾರಗೋಡ ಬಳಿ ಕಿರು ಸೇತುವೆ ಕುಸಿದ ಸ್ಥಿತಿಯಲ್ಲಿರುವುದು
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಗರಳ್ಳಿ ಸನಿಹ ಮರದ ಕಾಲುಸಂಕದ ಬದಲು ಕಾಂಕ್ರೀಟ್ ಕಾಲುಸಂಕ ನಿರ್ಮಾಣಕ್ಕೆ ಅಧಿಕಾರಿಗಳು ಪರಿಶೀಲಿಸಿದ್ದರು.
ಗ್ರಾಮೀಣ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಣ್ಣ ಸೇತುವೆ ಕಾಂಕ್ರೀಟ್ ಕಾಲು ಸಂಕ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು ಹಂತ ಹಂತವಾಗಿ ಮಂಜೂರಾಗುತ್ತಿದೆ
ಭೀಮಣ್ಣ ನಾಯ್ಕ ಶಿರಸಿ ಶಾಸಕ
ಊರಾಚೆಯ ತೋಟ ಗದ್ದೆಗಳಿಗೆ ಹೋಗಲು ಸಹ ಕಾಲುಸಂಕಗಳನ್ನು ಬಳಸಬೇಕಾದ ಅನಿವಾರ್ಯತೆಯಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ ಕಾಲುವೆಗಳ ಮೇಲೆ ಅಪಾಯ ಎದುರಿಸುತ್ತ ಸಾಗಬೇಕಾಗುತ್ತದೆ
ದೇವೇಂದ್ರ ನಾಯ್ಕ ಬೆಡಸಗಾಂವ ಗ್ರಾಮಸ್ಥ
ಕೆಲವು ಕಡೆ ಕಾಲುಸಂಕ ನಿರ್ಮಿಸಿದರೂ ಕಾಲುದಾರಿ ಖಾಸಗಿ ಜಾಗದಲ್ಲಿ ಹಾದುಹೋಗುವುದರಿಂದ ಜಾಗದ ಮಾಲೀಕರ ತಕರಾರಿನ ಕಾರಣಕ್ಕೆ ಕಾಲುಸಂಕವೂ ನಿರ್ಮಾಣವಾಗುತ್ತಿಲ್ಲ
ಮಹೇಶ ಗೌಡ ಅಗಸೂರು ಗ್ರಾಮಸ್ಥ
ಮರದಿಂದ ನಿರ್ಮಿತ ಕಾಲುಸಂಕಗಳು ಕೆಲವೊಮ್ಮೆ ಪ್ರವಾಹ ಪ್ರರಿಸ್ಥಿತಿ ತಲೆದೋರಿದಾಗ ಕೊಚ್ಚಿಕೊಂಡು ಹೋದಾಗ ಸಂಪರ್ಕ ಕಡಿತವಾಗಿ ಮಳೆ ಕಡಿಮೆಯಾಗುವ ತನಕ ಒಂದು ಬದಿಯಲ್ಲೇ ನಿಂತುಕಾಯುವ ಸ್ಥಿತಿ ಇದೆ