<p><strong>ಕಾರವಾರ</strong>: ಯಾಂತ್ರೀಕೃತ ಮೀನುಗಾರಿಕೆ ಆರಂಭದ ಅವಧಿಯಲ್ಲೇ ಮೀನುಗಳ ಕೊರತೆ ಎದುರಿಸಿದ್ದ ಮೀನುಗಾರರಿಗೆ ಹವಾಮಾನ ವೈಪರೀತ್ಯ ಮತ್ತೆ ಏಟು ನೀಡಿದೆ.</p><p>ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಎರಡು ದಿನಗಳಿಂದ ಇಲ್ಲಿನ ಬೈತಕೋಲ ಮೀನುಗಾರಿಕೆ, ವಾಣಿಜ್ಯ ಬಂದರುಗಳ ಸಮೀಪ ನೂರಾರು ಮೀನುಗಾರಿಕೆ ಬೋಟುಗಳು ಲಂಗರು ಹಾಕಿವೆ.</p><p>ಸ್ಥಳೀಯ ಬೋಟ್ಗಳಲ್ಲದೆ ಮಂಗಳೂರು, ಮಲ್ಪೆ, ನೆರೆಯ ತಮಿಳುನಾಡು, ಕೇರಳದ ರಾಜ್ಯದ ಹತ್ತಾರು ಮೀನುಗಾರಿಕಾ ಬೋಟ್ಗಳೂ ನಿಂತಿವೆ. ಆಗಸ್ಟ್ 2ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದೆ. ಮೀನು ಸಿಗದ ಕಾರಣಕ್ಕೆ ಕೆಲ ದಿನ ಬೋಟ್ಗಳು ಮೀನುಗಾರಿಕೆಗೆ ಇಳಿದಿರಲಿಲ್ಲ.</p><p>‘ಆಳ ಸಮುದ್ರದ ಮೀನುಗಾರಿಕೆಗೆ ಬಂದ ವೇಳೆಯೇ ಸಮುದ್ರ ಪ್ರಕ್ಷುಬ್ಧ ಗೊಳ್ಳುವ ಮುನ್ಸೂಚನೆ ಸಿಕ್ಕಿತು. ಆಗಸ್ಟ್ ಆರಂಭದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಲಭಿಸುತ್ತಿಲ್ಲ’ ಎಂದು ಮಲ್ಪೆಯ ಪರ್ಸಿನ್ ಬೋಟ್ನಲ್ಲಿ ಕೆಲಸ ಮಾಡುವ ಭಟ್ಕಳದ ಮಂಜು ಮೊಗೇರ ತಿಳಿಸಿದರು.</p><p>‘ಇನ್ನೂ 3 ದಿನ ಸಮುದ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇರಲಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ‘ಪ್ರಜಾವಾಣಿ’ಗೆ<br>ಪ್ರತಿಕ್ರಿಯಿಸಿದರು.</p><p>‘ಪರ್ವತಗಳಿಂದ ಆವರಿಸಿರುವ ಕಾರಣ ಕಾರವಾರ ಬಂದರು ನೈಸರ್ಗಿಕವಾಗಿ ಸುರಕ್ಷಿತವಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಾಗಲೆ ಹೊರ ಜಿಲ್ಲೆ ಮತ್ತು ಹೊರರಾಜ್ಯದ ಬೋಟುಗಳು ಇಲ್ಲಿಗೆ ಬಂದರು ಲಂಗರು ಹಾಕುತ್ತವೆ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಯಾಂತ್ರೀಕೃತ ಮೀನುಗಾರಿಕೆ ಆರಂಭದ ಅವಧಿಯಲ್ಲೇ ಮೀನುಗಳ ಕೊರತೆ ಎದುರಿಸಿದ್ದ ಮೀನುಗಾರರಿಗೆ ಹವಾಮಾನ ವೈಪರೀತ್ಯ ಮತ್ತೆ ಏಟು ನೀಡಿದೆ.</p><p>ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಎರಡು ದಿನಗಳಿಂದ ಇಲ್ಲಿನ ಬೈತಕೋಲ ಮೀನುಗಾರಿಕೆ, ವಾಣಿಜ್ಯ ಬಂದರುಗಳ ಸಮೀಪ ನೂರಾರು ಮೀನುಗಾರಿಕೆ ಬೋಟುಗಳು ಲಂಗರು ಹಾಕಿವೆ.</p><p>ಸ್ಥಳೀಯ ಬೋಟ್ಗಳಲ್ಲದೆ ಮಂಗಳೂರು, ಮಲ್ಪೆ, ನೆರೆಯ ತಮಿಳುನಾಡು, ಕೇರಳದ ರಾಜ್ಯದ ಹತ್ತಾರು ಮೀನುಗಾರಿಕಾ ಬೋಟ್ಗಳೂ ನಿಂತಿವೆ. ಆಗಸ್ಟ್ 2ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದೆ. ಮೀನು ಸಿಗದ ಕಾರಣಕ್ಕೆ ಕೆಲ ದಿನ ಬೋಟ್ಗಳು ಮೀನುಗಾರಿಕೆಗೆ ಇಳಿದಿರಲಿಲ್ಲ.</p><p>‘ಆಳ ಸಮುದ್ರದ ಮೀನುಗಾರಿಕೆಗೆ ಬಂದ ವೇಳೆಯೇ ಸಮುದ್ರ ಪ್ರಕ್ಷುಬ್ಧ ಗೊಳ್ಳುವ ಮುನ್ಸೂಚನೆ ಸಿಕ್ಕಿತು. ಆಗಸ್ಟ್ ಆರಂಭದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಲಭಿಸುತ್ತಿಲ್ಲ’ ಎಂದು ಮಲ್ಪೆಯ ಪರ್ಸಿನ್ ಬೋಟ್ನಲ್ಲಿ ಕೆಲಸ ಮಾಡುವ ಭಟ್ಕಳದ ಮಂಜು ಮೊಗೇರ ತಿಳಿಸಿದರು.</p><p>‘ಇನ್ನೂ 3 ದಿನ ಸಮುದ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇರಲಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ‘ಪ್ರಜಾವಾಣಿ’ಗೆ<br>ಪ್ರತಿಕ್ರಿಯಿಸಿದರು.</p><p>‘ಪರ್ವತಗಳಿಂದ ಆವರಿಸಿರುವ ಕಾರಣ ಕಾರವಾರ ಬಂದರು ನೈಸರ್ಗಿಕವಾಗಿ ಸುರಕ್ಷಿತವಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಾಗಲೆ ಹೊರ ಜಿಲ್ಲೆ ಮತ್ತು ಹೊರರಾಜ್ಯದ ಬೋಟುಗಳು ಇಲ್ಲಿಗೆ ಬಂದರು ಲಂಗರು ಹಾಕುತ್ತವೆ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>