<p><strong>ಕಾರವಾರ:</strong> ತಾಲ್ಲೂಕಿನ ದೇವಬಾಗದ ಕಡಲತೀರದಲ್ಲಿ ಮಂಗಳವಾರ 47 ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.</p>.<p>ಕಡಲತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆ ಮೊಟ್ಟೆಗಳಿಂದ ಹೊರಗಡೆ ಬಂದ ಈ ವರ್ಷದ ಮೊದಲ ಕಡಲಾಮೆ ಮರಿಗಳಾಗಿದ್ದವು. ಪುಟ್ಟ ಪುಟ್ಟ ಮರಿಗಳು ಸಮುದ್ರ ಸೇರುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವರು ಸಾಕ್ಷಿಯಾದರು.</p>.<p>ಮೊಟ್ಟೆ ಸಂರಕ್ಷಣೆಯ ಗೂಡುಗಳಿಂದ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆಯುತ್ತಿದ್ದಂತೆ ಅವುಗಳ ಚಿನ್ನಾಟ ವೀಕ್ಷಿಸಲು ಮಕ್ಕಳು, ವಿದ್ಯಾರ್ಥಿಗಳು ಕುತೂಹಲ ಭರಿತರಾಗಿ ಗಮನಿಸುತ್ತಿದ್ದರು. ಒಂದೊಂದೇ ಮರಿಗಳನ್ನು ಸುರಕ್ಷಿತವಾಗಿ ಬುಟ್ಟಿಯಿಂದ ಹೊರಕ್ಕೆ ತೆಗೆದು ಮರಳಿನ ಮೇಲೆ ಇಡುತ್ತಿದ್ದಂತೆ ಅವು ಸಮುದ್ರದತ್ತ ಓಡುತ್ತ ಸಾಗಿದ್ದವು.</p>.<p>‘ಈರೆಗೆ ಒಟ್ಟು 26 ಕಡಲಾಮೆ ಗೂಡುಗಳನ್ನು ಪತ್ತೆ ಮಾಡಲಾಗಿದ್ದು, 95 ಮೊಟ್ಟೆಗಳನ್ನು ಸಂರಕ್ಷಣೆ ಮಾಡಿಡಲಾಗಿದೆ. ಮೊಟ್ಟೆ ಇಟ್ಟ 53 ದಿನಕ್ಕೆ ಮರಿಗಳು ಹೊರಬಂದಿವೆ’ ಎಂದು ಎಸಿಎಫ್ ಜಯೇಶ್ ಕೆ.ಸಿ ಮಾಹಿತಿ ನೀಡಿದರು.</p>.<p>ಚಿತ್ತಾಕುಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ತಾಂಡೇಲ, ಡಿಸಿಎಫ್ ಸಿ. ರವಿಶಂಕರ, ಆರ್.ಎಫ್.ಒ ಗಜಾನನ ನಾಯ್ಕ, ಭವ್ಯಾ ನಾಯ್ಕ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ಪಿ.ಆರ್. ನಾಯ್ಕ, ಕಡಲಜೀವಶಾಸ್ತ್ರಜ್ಞ ಶಿವಕುಮಾರ ಹರಗಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ತಾಲ್ಲೂಕಿನ ದೇವಬಾಗದ ಕಡಲತೀರದಲ್ಲಿ ಮಂಗಳವಾರ 47 ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.</p>.<p>ಕಡಲತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆ ಮೊಟ್ಟೆಗಳಿಂದ ಹೊರಗಡೆ ಬಂದ ಈ ವರ್ಷದ ಮೊದಲ ಕಡಲಾಮೆ ಮರಿಗಳಾಗಿದ್ದವು. ಪುಟ್ಟ ಪುಟ್ಟ ಮರಿಗಳು ಸಮುದ್ರ ಸೇರುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವರು ಸಾಕ್ಷಿಯಾದರು.</p>.<p>ಮೊಟ್ಟೆ ಸಂರಕ್ಷಣೆಯ ಗೂಡುಗಳಿಂದ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆಯುತ್ತಿದ್ದಂತೆ ಅವುಗಳ ಚಿನ್ನಾಟ ವೀಕ್ಷಿಸಲು ಮಕ್ಕಳು, ವಿದ್ಯಾರ್ಥಿಗಳು ಕುತೂಹಲ ಭರಿತರಾಗಿ ಗಮನಿಸುತ್ತಿದ್ದರು. ಒಂದೊಂದೇ ಮರಿಗಳನ್ನು ಸುರಕ್ಷಿತವಾಗಿ ಬುಟ್ಟಿಯಿಂದ ಹೊರಕ್ಕೆ ತೆಗೆದು ಮರಳಿನ ಮೇಲೆ ಇಡುತ್ತಿದ್ದಂತೆ ಅವು ಸಮುದ್ರದತ್ತ ಓಡುತ್ತ ಸಾಗಿದ್ದವು.</p>.<p>‘ಈರೆಗೆ ಒಟ್ಟು 26 ಕಡಲಾಮೆ ಗೂಡುಗಳನ್ನು ಪತ್ತೆ ಮಾಡಲಾಗಿದ್ದು, 95 ಮೊಟ್ಟೆಗಳನ್ನು ಸಂರಕ್ಷಣೆ ಮಾಡಿಡಲಾಗಿದೆ. ಮೊಟ್ಟೆ ಇಟ್ಟ 53 ದಿನಕ್ಕೆ ಮರಿಗಳು ಹೊರಬಂದಿವೆ’ ಎಂದು ಎಸಿಎಫ್ ಜಯೇಶ್ ಕೆ.ಸಿ ಮಾಹಿತಿ ನೀಡಿದರು.</p>.<p>ಚಿತ್ತಾಕುಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ತಾಂಡೇಲ, ಡಿಸಿಎಫ್ ಸಿ. ರವಿಶಂಕರ, ಆರ್.ಎಫ್.ಒ ಗಜಾನನ ನಾಯ್ಕ, ಭವ್ಯಾ ನಾಯ್ಕ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ಪಿ.ಆರ್. ನಾಯ್ಕ, ಕಡಲಜೀವಶಾಸ್ತ್ರಜ್ಞ ಶಿವಕುಮಾರ ಹರಗಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>