ಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ವ್ಯಕ್ತಿ ಅನಿಲ್.ಆರ್. ನಾಯ್ಕ ಮಾತನಾಡಿ, ‘ಉಪಗ್ರಹ, ರಿಮೋಟ್ ಸೆನ್ಸಿಂಗ್, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿ.ಪಿ.ಎಸ್) ಮೂಲಕ ಭೂಮಿಯ ರಚನೆಯ ವಿನ್ಯಾಸ ಹಾಗೂ ನೀರಿನ ಮೂಲವನ್ನು ಗುರುತಿಸಬೇಕು. ಉದ್ಯೋಗ ಖಾತ್ರಿಯಡಿ ವಿವಿಧ ಜಲ ಸಂರಕ್ಷಣಾ ಕಾಮಗಾರಿಗಳನ್ನು ಆಯ್ಕೆ ಮಾಡಬೇಕು. ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿಗಳು ಸಾಮೂಹಿಕವಾಗಿ ಚರ್ಚಿಸಿ
ವೈಜ್ಞಾನಿಕ ಕ್ರಮದಲ್ಲಿ ಕಾಮಗಾರಿಗಳ ರೂಪರೇಷೆಗಳನ್ನು ತಯಾರಿಸಬೇಕು’ ಎಂದು ಹೇಳಿದರು.