ವಿದ್ವಾನ್ ಶಿವರಾಮ ಭಟ್ಟ ಮೊಟ್ಟೆಗದ್ದೆ ಉಪನ್ಯಾಸ ನೀಡಿ, ‘ನಮ್ಮ ಪರಂಪರೆಯಿಂದ ಬಂದ ವೇದ-ಸಂಸ್ಕೃತವು ಸುಸಂಸ್ಕೃತ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ವೇದದಿಂದ ಜ್ಞಾನ, ಸಂಸ್ಕೃತದಿಂದ ದೃಷ್ಟಿ ಲಭಿಸುತ್ತದೆ. ಇಂತಹ ಶಿಬಿರಗಳು ಯುವಕರಿಗೆ ಉತ್ತಮ ಬದುಕು ರೂಪಿಸುತ್ತವೆ. ಭಾರತದ ಸಂಸ್ಕೃತಿ ವಿಶ್ವಮಾನ್ಯತೆ ಗಳಿಸಿದೆ. ಗೀತೆ, ಭಾರತ, ರಾಮಾಯಣದಂಥ ಗ್ರಂಥಗಳನ್ನು ಹೆಚ್ಚು ಓದಿದಂತೆ ಹೊಸ ಹೊಸ ಚಿಂತನೆಗಳು ಲಭಿಸುತ್ತವೆ. ಆದರೆ, ನಾವಿಂದು ಮೆಕಾಲೆ ಶಿಕ್ಷಣಕ್ಕೆ ಮಾರುಹೋಗಿ ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ವೇದ-ಸಂಸ್ಕೃತ ಸನಾತನ ಸಂಸ್ಕೃತಿಯ ಮೂಲ ಬೇರು ಎಂದರು.