‘ತಾಲ್ಲೂಕಿನ ಮಲಪನಗುಡಿಯಿಂದ ಸಂಡೂರು ಜಿಲ್ಲೆಯ ತೋರಣಗಲ್ಲಿಗೆ ಒಂದೇ ಕುಟುಂಬದ ಐದು ಜನ ಆಟೊದಲ್ಲಿ ಹೋಗುತ್ತಿದ್ದರು. ವಡ್ಡರಹಳ್ಳಿಯ ನಾಗಪ್ಪ ಕ್ಯಾಂಪ್ ಬಳಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಆಟೊ ರಸ್ತೆ ಬದಿಮುಗುಚಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಗಾಯಗೊಂಡವರನ್ನು ಆಟೊದಿಂದ ಹೊರತಂದಿದ್ದಾರೆ. ಬಳಿಕ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಬಳ್ಳಾರಿಯ ವಿಮ್ಸ್ಗೆ ಕಳುಹಿಸಿಕೊಡಲು ನೆರವಾಗಿದ್ದಾರೆ. ಯಾರಿಗೂ ಪ್ರಾಣಾಪಾಯವಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.