ಕೂಡ್ಲಿಗಿ: ತಾಲ್ಲೂಕಿನ ಕ್ಯಾಸನಕೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕೇರಳ ಮೂಲದ ಉನ್ನಿ ಕೃಷ್ಣನ್ (25) ಹಾಗೂ ಪ್ರಜೀತ್ (35) ಮೃತರು.
ಸಹ ಪ್ರಯಾಣಿಕರಾದ ಧೀರು ಮತ್ತು ಅಜೀತ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳ್ಳಾರಿಯ ವಿಮ್ಸ್ಗೆ ಕಳಿಸಲಾಗಿದೆ. ಇವರು ಕೇರಳದಿಂದ ಪೂನಾ ಕಡೆ ಹೊರಟಿದ್ದರು.