<p><strong>ಹರಪನಹಳ್ಳಿ:</strong> ಪಟ್ಟಣದ ಹೊಸಪೇಟೆ ರಸ್ತೆ ಆಶ್ರಯ ಕಾಲೊನಿಯ ಸರ್ಕಾರಿ ಮನೆಗಳಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ 50ಕ್ಕೂ ಅಧಿಕ ಕುಟುಂಬಗಳು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದವು.</p>.<p>‘ಆಶ್ರಯ ಕಾಲೊನಿಗಳಲ್ಲಿ 50ಕ್ಕೂ ಅಧಿಕ ಕುಟುಂಬಗಳ ಮನೆಗಳಿವೆ. ಆದರೆ ಇತ್ತೀಚೆಗೆ ಪುರಸಭೆ ಅಧಿಕಾರಿಗಳು ಅನಧಿಕೃತ ನಿವಾಸಿಗಳ ತೆರವು ಅಧಿನಿಯಮ ಅಡಿ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಎಲ್ಲಿಯೂ ಸ್ವಂತ ಮನೆ ಇಲ್ಲ. ಆಶ್ರಯ ಕಾಲೊನಿಯ ಮನೆಗಳಲ್ಲಿರುವ ನಿವಾಸಿಗಳನ್ನೇ ಫಲಾನುಭವಿಗಳೆಂದು ಪರಿಗಣಿಸಿ ಹಕ್ಕು ಅನುಭವಿಸಲು ಅನುಮತಿಸಬೇಕು’ ಎಂದು ಆಗ್ರಹಿಸಿದರು.</p>.<p>ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.</p>.<p>ಮಾಳಗಿ ರಮೇಶ್, ಮಹಮ್ಮದ್ ಶಿರಾಜ್, ಮಾಬುಸಾಹೇಬ್, ಅಖಿಲಾಬಿ, ಸೋಮಣ್ಣ, ಆಟೊ ಮಾಬು, ಬಸವರಾಜ್, ಭಾಷ, ಹನುಮಂತಪ್ಪ, ಇಕ್ಬಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ:</strong> ಪಟ್ಟಣದ ಹೊಸಪೇಟೆ ರಸ್ತೆ ಆಶ್ರಯ ಕಾಲೊನಿಯ ಸರ್ಕಾರಿ ಮನೆಗಳಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ 50ಕ್ಕೂ ಅಧಿಕ ಕುಟುಂಬಗಳು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದವು.</p>.<p>‘ಆಶ್ರಯ ಕಾಲೊನಿಗಳಲ್ಲಿ 50ಕ್ಕೂ ಅಧಿಕ ಕುಟುಂಬಗಳ ಮನೆಗಳಿವೆ. ಆದರೆ ಇತ್ತೀಚೆಗೆ ಪುರಸಭೆ ಅಧಿಕಾರಿಗಳು ಅನಧಿಕೃತ ನಿವಾಸಿಗಳ ತೆರವು ಅಧಿನಿಯಮ ಅಡಿ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಎಲ್ಲಿಯೂ ಸ್ವಂತ ಮನೆ ಇಲ್ಲ. ಆಶ್ರಯ ಕಾಲೊನಿಯ ಮನೆಗಳಲ್ಲಿರುವ ನಿವಾಸಿಗಳನ್ನೇ ಫಲಾನುಭವಿಗಳೆಂದು ಪರಿಗಣಿಸಿ ಹಕ್ಕು ಅನುಭವಿಸಲು ಅನುಮತಿಸಬೇಕು’ ಎಂದು ಆಗ್ರಹಿಸಿದರು.</p>.<p>ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.</p>.<p>ಮಾಳಗಿ ರಮೇಶ್, ಮಹಮ್ಮದ್ ಶಿರಾಜ್, ಮಾಬುಸಾಹೇಬ್, ಅಖಿಲಾಬಿ, ಸೋಮಣ್ಣ, ಆಟೊ ಮಾಬು, ಬಸವರಾಜ್, ಭಾಷ, ಹನುಮಂತಪ್ಪ, ಇಕ್ಬಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>