ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 'ಚುನಾವಣೆಯಲ್ಲಿ ಎಷ್ಷು ಹಣ ತೆಗೆದುಕೊಂಡಿದ್ದೀರಿ' ಎಂದು ಪ್ರಶ್ನಿಸಿದರು. ಅದಕ್ಕೆ ಗಾಳೆಪ್ಪ ಕ್ಷಣಕಾಲವೂ ಯೋಚಿಸಿದೆ, 'ಸಾಮಿ ವೋಟಿಗೆ ₹500 ಪಡೆದೆ' ಎಂದರು. ಅದಕ್ಕೆ ಅವಕ್ಕಾದ ಡಿಸಿ, 'ದುಡ್ಡಿಗಾಗಿ ವೋಟು ಮಾರಿಕೊಂಡರೆ ಈ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಹೇಳಿದರು. 'ಇಲ್ಲ ಸಾಮಿ ಮುಂದೆ ಈ ರೀತಿ ಮಾಡೊಲ್ಲ' ಎಂದು ಗಾಳೆಪ್ಪ ಹೇಳಿದರು. ಅದಕ್ಕೆ ಡಿಸಿ, 'ಶೀಘ್ರ ಸರ್ಕಾರದಿಂದ ಮನೆ ಮಂಜೂರು ಮಾಡಿಕೊಡಲು ಪ್ರಯತ್ನಿಸುತ್ತೇನೆ' ಎಂದು ಭರವಸೆ ನೀಡಿದರು.