<p><strong>ತಿಮ್ಮಲಾಪುರ (ವಿಜಯನಗರ/ಹೊಸಪೇಟೆ): </strong>'ಎಲೆಕ್ಷನ್ ನಲ್ಲಿ ವೋಟಿಗೆ ₹500 ಪಡೆದೆ'<br />ಹೀಗೆ ಗ್ರಾಮದ ಗಾಳೆಪ್ಪ ಎನ್ನುವ ವ್ತಕ್ತಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಹೇಳಿದಾಗ ಕ್ಷಣಕಾಲ ಅವಕ್ಕಾದರು.</p>.<p>ಗ್ರಾಮ ವಾಸ್ತವ್ಯದ ನಿಮಿತ್ತ ಜಿಲ್ಲಾಧಿಕಾರಿ ಶನಿವಾರ ಗ್ರಾಮದಲ್ಲಿ ಕಾಲ್ನಡಿಗೆಯಲ್ಲಿ ಓಡಾಡುತ್ತ ಗ್ರಾಮಸ್ಥರ ಅಹವಾಲು ಆಲಿಸಿದರು. ಈ ವೇಳೆ ಗಾಳೆಪ್ಪ ಎನ್ನುವ ವ್ಯಕ್ತಿ, 'ನಾವು ಮನೆ ಮಂದಿಯೆಲ್ಲ ಅನೇಕ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವೆ. ಪಂಚಾಯಿತಿಗೆ ಅರ್ಜಿ ಕೊಟ್ಟು ಸಾಕಾಗಿದೆ. ಸರ್ಕಾರದ ಯಾವುದೇ ಸೌಲಭ್ಯಗಳು ನಮ್ಮಂತಹ ಬಡವರಿಗೆ ಸಿಗುತ್ತಿಲ್ಲ' ಎಂದರು.</p>.<p>ಇದನ್ನೂ ಓದಿ.. <a href="https://www.prajavani.net/video/district/bagalkot/district-commissioner-visit-to-hallikonda-village-in-bagalakote-district-807160.html"><strong>VIDEO: ಹಳ್ಳಿಕೊಂಡಕ್ಕೆ ಜಿಲ್ಲಾಧಿಕಾರಿ ಭೇಟಿ | ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ</strong></a></p>.<p>ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 'ಚುನಾವಣೆಯಲ್ಲಿ ಎಷ್ಷು ಹಣ ತೆಗೆದುಕೊಂಡಿದ್ದೀರಿ' ಎಂದು ಪ್ರಶ್ನಿಸಿದರು. ಅದಕ್ಕೆ ಗಾಳೆಪ್ಪ ಕ್ಷಣಕಾಲವೂ ಯೋಚಿಸಿದೆ, 'ಸಾಮಿ ವೋಟಿಗೆ ₹500 ಪಡೆದೆ' ಎಂದರು. ಅದಕ್ಕೆ ಅವಕ್ಕಾದ ಡಿಸಿ, 'ದುಡ್ಡಿಗಾಗಿ ವೋಟು ಮಾರಿಕೊಂಡರೆ ಈ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಹೇಳಿದರು. 'ಇಲ್ಲ ಸಾಮಿ ಮುಂದೆ ಈ ರೀತಿ ಮಾಡೊಲ್ಲ' ಎಂದು ಗಾಳೆಪ್ಪ ಹೇಳಿದರು. ಅದಕ್ಕೆ ಡಿಸಿ, 'ಶೀಘ್ರ ಸರ್ಕಾರದಿಂದ ಮನೆ ಮಂಜೂರು ಮಾಡಿಕೊಡಲು ಪ್ರಯತ್ನಿಸುತ್ತೇನೆ' ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಮ್ಮಲಾಪುರ (ವಿಜಯನಗರ/ಹೊಸಪೇಟೆ): </strong>'ಎಲೆಕ್ಷನ್ ನಲ್ಲಿ ವೋಟಿಗೆ ₹500 ಪಡೆದೆ'<br />ಹೀಗೆ ಗ್ರಾಮದ ಗಾಳೆಪ್ಪ ಎನ್ನುವ ವ್ತಕ್ತಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಹೇಳಿದಾಗ ಕ್ಷಣಕಾಲ ಅವಕ್ಕಾದರು.</p>.<p>ಗ್ರಾಮ ವಾಸ್ತವ್ಯದ ನಿಮಿತ್ತ ಜಿಲ್ಲಾಧಿಕಾರಿ ಶನಿವಾರ ಗ್ರಾಮದಲ್ಲಿ ಕಾಲ್ನಡಿಗೆಯಲ್ಲಿ ಓಡಾಡುತ್ತ ಗ್ರಾಮಸ್ಥರ ಅಹವಾಲು ಆಲಿಸಿದರು. ಈ ವೇಳೆ ಗಾಳೆಪ್ಪ ಎನ್ನುವ ವ್ಯಕ್ತಿ, 'ನಾವು ಮನೆ ಮಂದಿಯೆಲ್ಲ ಅನೇಕ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವೆ. ಪಂಚಾಯಿತಿಗೆ ಅರ್ಜಿ ಕೊಟ್ಟು ಸಾಕಾಗಿದೆ. ಸರ್ಕಾರದ ಯಾವುದೇ ಸೌಲಭ್ಯಗಳು ನಮ್ಮಂತಹ ಬಡವರಿಗೆ ಸಿಗುತ್ತಿಲ್ಲ' ಎಂದರು.</p>.<p>ಇದನ್ನೂ ಓದಿ.. <a href="https://www.prajavani.net/video/district/bagalkot/district-commissioner-visit-to-hallikonda-village-in-bagalakote-district-807160.html"><strong>VIDEO: ಹಳ್ಳಿಕೊಂಡಕ್ಕೆ ಜಿಲ್ಲಾಧಿಕಾರಿ ಭೇಟಿ | ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ</strong></a></p>.<p>ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 'ಚುನಾವಣೆಯಲ್ಲಿ ಎಷ್ಷು ಹಣ ತೆಗೆದುಕೊಂಡಿದ್ದೀರಿ' ಎಂದು ಪ್ರಶ್ನಿಸಿದರು. ಅದಕ್ಕೆ ಗಾಳೆಪ್ಪ ಕ್ಷಣಕಾಲವೂ ಯೋಚಿಸಿದೆ, 'ಸಾಮಿ ವೋಟಿಗೆ ₹500 ಪಡೆದೆ' ಎಂದರು. ಅದಕ್ಕೆ ಅವಕ್ಕಾದ ಡಿಸಿ, 'ದುಡ್ಡಿಗಾಗಿ ವೋಟು ಮಾರಿಕೊಂಡರೆ ಈ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಹೇಳಿದರು. 'ಇಲ್ಲ ಸಾಮಿ ಮುಂದೆ ಈ ರೀತಿ ಮಾಡೊಲ್ಲ' ಎಂದು ಗಾಳೆಪ್ಪ ಹೇಳಿದರು. ಅದಕ್ಕೆ ಡಿಸಿ, 'ಶೀಘ್ರ ಸರ್ಕಾರದಿಂದ ಮನೆ ಮಂಜೂರು ಮಾಡಿಕೊಡಲು ಪ್ರಯತ್ನಿಸುತ್ತೇನೆ' ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>