‘ಸದ್ಯ ವಿದ್ಯಾರ್ಥಿಗಳ ಒಂದಿಷ್ಟು ಸಂಕಷ್ಟ ಪರಿಹರಿಸಿದ ತೃಪ್ತಿ ಇದೆ. ಈಚೆಗೆ ನಗರಕ್ಕೆ ಬಂದಿದ್ದ ಸಮಾಜ ಕಲ್ಯಾಣ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಈ ಅನುದಾನಕ್ಕಾಗಿ ಕೃತಜ್ಞತೆ ಸಲ್ಲಿಸಿದೆ. ವಿಶ್ವವಿದ್ಯಾಲಯಕ್ಕೆ ಬರಬೇಕಾದ ಇತರ ಅನುದಾನಗಳು ಸಹ ಹೀಗೆಯೇ ಬಂದಿದ್ದರೆ ಯಾವ ಚಿಂತೆಯೂ ಇರಲಿಲ್ಲ, ಆದರೆ ಅದು ಕಾರ್ಯಗತವಾಗುತ್ತಲೇ ಇಲ್ಲ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.