ಹೌದು, ಇಂತಹದ್ದೊಂದು ಪ್ರಸಂಗಕ್ಕೆ ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಾಕ್ಷಿಯಾಯಿತು. ಕುಲಪತಿ ಪ್ರೊ.ಸ.ಚಿ.ರಮೇಶ ಅವರು ನುಡಿಹಬ್ಬ, ನಾಡೋಜ ಗೌರವ ಪದವಿಗೆ ಆಯ್ಕೆಯಾದವರ ಹೆಸರು ಘೋಷಣೆಗೆ ಸುದ್ದಿಗೋಷ್ಠಿ ಕರೆದಿದ್ದರು. ನುಡಿಹಬ್ಬದ ಕುರಿತು ಎಲ್ಲ ವಿವರಗಳನ್ನು ಹಂಚಿಕೊಂಡ ನಂತರ ಪತ್ರಕರ್ತರು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಅವರು ಯಾವುದೇ ಪ್ರಶ್ನೆಗೂ ಉತ್ತರಿಸಲಿಲ್ಲ. ಬದಲಾಗಿ ಎಲ್ಲ ಪ್ರಶ್ನೆಗಳಿಗೂ ‘ಆಫ್ ದಿ ರೆಕಾರ್ಡ್’ ಎಂದು ಹೇಳುತ್ತ ದೀರ್ಘವಾಗಿ ಮಾತನಾಡಿದರು.