<p><strong>ಹರಪನಹಳ್ಳಿ:</strong> ತಾಲ್ಲೂಕಿನ 117 ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಉಪಗ್ರಾಮ ಗುರುತಿಸಿ, ಅವುಗಳಿಗೆ ಕಂದಾಯ ಗ್ರಾಮ ಸ್ಥಾನ ಕಲ್ಪಿಸಿರುವುದು.</p>.<p>ಸ್ವಾತಂತ್ರ್ಯಗತಿಸಿ 7 ದಶಕಗಳ ಬಳಿಕ ಒಟ್ಟು 117 ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ದೊರೆತಿದೆ. ಇವುಗಳಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಿ 60 ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನ ದೊರೆತು, ಜನರಿಗೆ ಪ್ರಮಾಣ ಪತ್ರಗಳ ವಿತರಣೆ ಕಾರ್ಯವು ಶುರುವಾಗಿದೆ.</p>.<p>ಪಟ್ಟಣಕ್ಕೆ ಸಮೀಪದ ಹೊಂಬಳಗಟ್ಟಿ ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದರೂ ಕಂದಾಯ ಗ್ರಾಮದ ಸ್ಥಾನ ದೊರೆತಿರಲಿಲ್ಲ, ಈ ಬಾರಿ ಅದು ಸಾಕಾರ ಗೊಂಡಿರುವುದಕ್ಕೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿ, ಸಂಭ್ರಮಿಸಿದ್ದಾರೆ. ಕೆರೆಗುಡಿಹಳ್ಳಿ, ದಡಿಗಾರನಹಳ್ಳಿ, ಗಂಗಾಪುರ, ಹೊನ್ನೇನಹಳ್ಳಿ, ಗುಳೇದಹಟ್ಟಿ ತಾಂಡಗಳಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಶ್ರಮದಿಂದಾಗಿ ನಮ್ಮೂರುಗಳಿಗೆ ಕಂದಾಯ ಸ್ಥಾನಮಾನ ದೊರೆತು, ನಾವು ಅಲೆದಾಡುವುದು ತಪ್ಪಿದಂತಾಗಿದೆ ಎಂದು ಸಂಭ್ರಮಿಸುತ್ತಿದ್ದಾರೆ.</p>.<p>ಎಐಟಿಯುಸಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಶ್ರಮದಿಂದ ಉಪ ಗ್ರಾಮಗಳು ಕಂದಾಯ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ಜನರು ಅಲೆದಾಡುವುದು ತಪ್ಪುತ್ತದೆ. ಇನ್ನುಳಿದ ಹಳ್ಳಿಗಳನ್ನು ಕಂದಾಯ ಗ್ರಾಮವನ್ನಾಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.</p>.<div><blockquote>ಮೊದಲು 80 ಗ್ರಾಮಗಳಿದ್ದವು. ಈಗ ತಾಲ್ಲೂಕಿನಲ್ಲಿ ಒಟ್ಟು 117 ಹಳ್ಳಿಗಳನ್ನು ಗುರುತಿಸಲಾಗಿದೆ. ಈಗಾಗಲೇ 60 ಹಳ್ಳಿ ಕಂದಾಯ ಗ್ರಾಮಗಳಾಗಿವೆ. 57 ಹಳ್ಳಿಗಳು ಹಂತ ಹಂತವಾಗಿ ಕಂದಾಯ ಗ್ರಾಮಗಳಾಗುತ್ತವೆ</blockquote><span class="attribution">ಬಿ.ವಿ.ಗಿರೀಶ್ ಬಾಬು ತಹಶೀಲ್ದಾರ್ ಹರಪನಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ:</strong> ತಾಲ್ಲೂಕಿನ 117 ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಉಪಗ್ರಾಮ ಗುರುತಿಸಿ, ಅವುಗಳಿಗೆ ಕಂದಾಯ ಗ್ರಾಮ ಸ್ಥಾನ ಕಲ್ಪಿಸಿರುವುದು.</p>.<p>ಸ್ವಾತಂತ್ರ್ಯಗತಿಸಿ 7 ದಶಕಗಳ ಬಳಿಕ ಒಟ್ಟು 117 ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ದೊರೆತಿದೆ. ಇವುಗಳಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಿ 60 ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನ ದೊರೆತು, ಜನರಿಗೆ ಪ್ರಮಾಣ ಪತ್ರಗಳ ವಿತರಣೆ ಕಾರ್ಯವು ಶುರುವಾಗಿದೆ.</p>.<p>ಪಟ್ಟಣಕ್ಕೆ ಸಮೀಪದ ಹೊಂಬಳಗಟ್ಟಿ ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದರೂ ಕಂದಾಯ ಗ್ರಾಮದ ಸ್ಥಾನ ದೊರೆತಿರಲಿಲ್ಲ, ಈ ಬಾರಿ ಅದು ಸಾಕಾರ ಗೊಂಡಿರುವುದಕ್ಕೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿ, ಸಂಭ್ರಮಿಸಿದ್ದಾರೆ. ಕೆರೆಗುಡಿಹಳ್ಳಿ, ದಡಿಗಾರನಹಳ್ಳಿ, ಗಂಗಾಪುರ, ಹೊನ್ನೇನಹಳ್ಳಿ, ಗುಳೇದಹಟ್ಟಿ ತಾಂಡಗಳಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಶ್ರಮದಿಂದಾಗಿ ನಮ್ಮೂರುಗಳಿಗೆ ಕಂದಾಯ ಸ್ಥಾನಮಾನ ದೊರೆತು, ನಾವು ಅಲೆದಾಡುವುದು ತಪ್ಪಿದಂತಾಗಿದೆ ಎಂದು ಸಂಭ್ರಮಿಸುತ್ತಿದ್ದಾರೆ.</p>.<p>ಎಐಟಿಯುಸಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಶ್ರಮದಿಂದ ಉಪ ಗ್ರಾಮಗಳು ಕಂದಾಯ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ಜನರು ಅಲೆದಾಡುವುದು ತಪ್ಪುತ್ತದೆ. ಇನ್ನುಳಿದ ಹಳ್ಳಿಗಳನ್ನು ಕಂದಾಯ ಗ್ರಾಮವನ್ನಾಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.</p>.<div><blockquote>ಮೊದಲು 80 ಗ್ರಾಮಗಳಿದ್ದವು. ಈಗ ತಾಲ್ಲೂಕಿನಲ್ಲಿ ಒಟ್ಟು 117 ಹಳ್ಳಿಗಳನ್ನು ಗುರುತಿಸಲಾಗಿದೆ. ಈಗಾಗಲೇ 60 ಹಳ್ಳಿ ಕಂದಾಯ ಗ್ರಾಮಗಳಾಗಿವೆ. 57 ಹಳ್ಳಿಗಳು ಹಂತ ಹಂತವಾಗಿ ಕಂದಾಯ ಗ್ರಾಮಗಳಾಗುತ್ತವೆ</blockquote><span class="attribution">ಬಿ.ವಿ.ಗಿರೀಶ್ ಬಾಬು ತಹಶೀಲ್ದಾರ್ ಹರಪನಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>