<p><strong>ಹೂವಿನಹಡಗಲಿ (ವಿಜಯನಗರ ಜಿಲ್ಲೆ):</strong> ‘ಪಟ್ಟಣದ ಮದಲಗಟ್ಟಿ ವೃತ್ತದ ಬಳಿ ಇರುವ ಕರ್ನಾಟಕ ಆಗ್ರೋ ಕೇಂದ್ರದಲ್ಲಿ ಯೂರಿಯಾ ಗೊಬ್ಬರ ಕಡಿಮೆ ಇರುವುದಾಗಿ ಸುಳ್ಳು ಹೇಳಿ, ಅನ್ಯಾಯ ಮಾಡಲಾಗಿದೆ’ ಎಂದು ರೈತರು ಆರೋಪಿಸಿದರು.</p>.<p>‘ಶನಿವಾರ ಕೇಂದ್ರದ ಮಾಲೀಕರು 40 ಚೀಲ ಮಾತ್ರ ಗೊಬ್ಬರವಿದೆ ಎಂಬುದಾಗಿ ಹೇಳಿದರು. ಗೋದಾಮು ಬೀಗ ತೆಗೆಸಿದಾಗ 320 ಚೀಲ ಯೂರಿಯಾ ದಾಸ್ತಾನು ಪತ್ತೆಯಾಯಿತು’ ಎಂದು ತಿಳಿಸಿದರು.</p>.<p>‘ತಾಲ್ಲೂಕಿನಲ್ಲಿನ ಮುಂಗಾರು ಬೆಳೆಗಳಿಗೆ 11,000 ಟನ್ ಯೂರಿಯಾ ಗೊಬ್ಬರದ ಬೇಡಿಕೆ ಇದ್ದು, 10,000 ಟನ್ಗೂ ಹೆಚ್ಚು ಗೊಬ್ಬರ ಪೂರೈಕೆಯಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ. ವರ್ತಕರು ಗೊಬ್ಬರ ದಾಸ್ತಾನು ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ’ ಎಂದು ರೈತ ಎಂ. ಶಿವರಾಜು ಹೇಳಿದರು.</p>.<p>ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ, ಕೆಲವು ರೈತರಿಗೆ ತಲಾ ಒಂದು ಚೀಲದಂತೆ ಗೊಬ್ಬರ ಕೊಡಿಸಿದರು. ಆದರೆ, ಸಾಲಿನ ಕೊನೆಯಲ್ಲಿದ್ದವರಿಗೆ ಗೊಬ್ಬರ ಸಿಗದೆ ವಾಪಸ್ಸಾದರು. </p>.<p>‘ತಾಲ್ಲೂಕಿನ ಬೇಡಿಕೆಯಷ್ಟು ಗೊಬ್ಬರ ಪೂರೈಕೆಯಾಗಿದೆ. ರೈತರು ಯೂರಿಯಾ ಹೆಚ್ಚು ಬಳಸುತ್ತಿರುವುದರಿಂದ ಕೊರತೆ ಉಂಟಾಗಿದೆ. ಕೃತಕ ಅಭಾವ ಸೃಷ್ಟಿಸಿದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ <strong>ಮಹ್ಮದ್ ಆಶ್ರಫ್ ಹೇಳಿದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ (ವಿಜಯನಗರ ಜಿಲ್ಲೆ):</strong> ‘ಪಟ್ಟಣದ ಮದಲಗಟ್ಟಿ ವೃತ್ತದ ಬಳಿ ಇರುವ ಕರ್ನಾಟಕ ಆಗ್ರೋ ಕೇಂದ್ರದಲ್ಲಿ ಯೂರಿಯಾ ಗೊಬ್ಬರ ಕಡಿಮೆ ಇರುವುದಾಗಿ ಸುಳ್ಳು ಹೇಳಿ, ಅನ್ಯಾಯ ಮಾಡಲಾಗಿದೆ’ ಎಂದು ರೈತರು ಆರೋಪಿಸಿದರು.</p>.<p>‘ಶನಿವಾರ ಕೇಂದ್ರದ ಮಾಲೀಕರು 40 ಚೀಲ ಮಾತ್ರ ಗೊಬ್ಬರವಿದೆ ಎಂಬುದಾಗಿ ಹೇಳಿದರು. ಗೋದಾಮು ಬೀಗ ತೆಗೆಸಿದಾಗ 320 ಚೀಲ ಯೂರಿಯಾ ದಾಸ್ತಾನು ಪತ್ತೆಯಾಯಿತು’ ಎಂದು ತಿಳಿಸಿದರು.</p>.<p>‘ತಾಲ್ಲೂಕಿನಲ್ಲಿನ ಮುಂಗಾರು ಬೆಳೆಗಳಿಗೆ 11,000 ಟನ್ ಯೂರಿಯಾ ಗೊಬ್ಬರದ ಬೇಡಿಕೆ ಇದ್ದು, 10,000 ಟನ್ಗೂ ಹೆಚ್ಚು ಗೊಬ್ಬರ ಪೂರೈಕೆಯಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ. ವರ್ತಕರು ಗೊಬ್ಬರ ದಾಸ್ತಾನು ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ’ ಎಂದು ರೈತ ಎಂ. ಶಿವರಾಜು ಹೇಳಿದರು.</p>.<p>ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ, ಕೆಲವು ರೈತರಿಗೆ ತಲಾ ಒಂದು ಚೀಲದಂತೆ ಗೊಬ್ಬರ ಕೊಡಿಸಿದರು. ಆದರೆ, ಸಾಲಿನ ಕೊನೆಯಲ್ಲಿದ್ದವರಿಗೆ ಗೊಬ್ಬರ ಸಿಗದೆ ವಾಪಸ್ಸಾದರು. </p>.<p>‘ತಾಲ್ಲೂಕಿನ ಬೇಡಿಕೆಯಷ್ಟು ಗೊಬ್ಬರ ಪೂರೈಕೆಯಾಗಿದೆ. ರೈತರು ಯೂರಿಯಾ ಹೆಚ್ಚು ಬಳಸುತ್ತಿರುವುದರಿಂದ ಕೊರತೆ ಉಂಟಾಗಿದೆ. ಕೃತಕ ಅಭಾವ ಸೃಷ್ಟಿಸಿದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ <strong>ಮಹ್ಮದ್ ಆಶ್ರಫ್ ಹೇಳಿದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>