ದಾಸರಹಳ್ಳಿ ಕಂದಾಯ ಗ್ರಾಮದ ಸ.ನಂ. 229/ಡಿ/1 ವಿಸ್ತೀರ್ಣ 10.36 ಎಕರೆ ಸರ್ಕಾರಿ ಭೂಮಿಯನ್ನು ದಾಸರಹಳ್ಳಿಯ ವಿಶಾಲಾಬಾಯಿಗೆ 4.98 ಎಕರೆ, ಗೌರಿಬಾಯಿಗೆ 3.28, ಕೊಟ್ರಿಬಾಯಿಗೆ 2.10 ಎಕರೆ ಭೂಮಿಯನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಲಾಗಿತ್ತು. ಗ್ರೇಡ್-2 ತಹಶೀಲ್ದಾರ್ ನಟರಾಜ್ ಪ್ರಭಾರದಲ್ಲಿದ್ದಾಗ ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿತ್ತು. ಈ ಕುರಿತು ತನಿಖಾ ತಂಡದ ವರದಿ ಆಧರಿಸಿ ಜಿಲ್ಲಾಧಿಕಾರಿ ಇಬ್ಬರನ್ನು ಅಮಾನತುಗೊಳಿಸಿದ್ದಾರೆ.