‘ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಚಂದ್ರಶೇಖರ ಕಂಬಾರ ಅವರ ಎಲ್ಲ ಕನಸು, ಕಾಣ್ಕೆಗಳ ಪ್ರೇರಕ ಶಕ್ತಿ ಸತ್ಯಭಾಮಾ ಕಂಬಾರ ಆಗಿದ್ದರು. ವಿಶ್ವವಿದ್ಯಾಲಯದ ಕೂಡು ಕುಟುಂಬಕ್ಕೆ ತಾಯಿ ಆಗಿದ್ದರು. ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ಕೊಡಲಿ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ಹೇಳಿದರು. ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ ಇದ್ದರು.