‘ರೈತರ ಬೇಡಿಕೆ ಇರುವ ಎಲ್ಲ ವಿಧದ ಬಿತ್ತನೆ ಬೀಜ, ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡು, ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಬೀಜ, ಗೊಬ್ಬರದ ಬೇಡಿಕೆ ಇದ್ದಲ್ಲಿ ಕೃಷಿ ಸಚಿವರನ್ನು ಸಂಪರ್ಕಿಸಿ ಕೊಡಿಸುತ್ತೇವೆ. ರೈತರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ ಆಗದಂತೆ ನಿಗಾ ವಹಿಸಿ’ ಎಂದು ಶಾಸಕರು ಸೂಚಿಸಿದರು.