ಹೂವಿನಹಡಗಲಿ, ಕುರುವತ್ತಿ, ಹಿರೇಹಡಗಲಿ, ಮಾಗಳದ ಪ್ರಾಚೀನ ದೇವಾಲಯಗಳು ಸುಂದರ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿವೆ. ಮೈಲಾರ ಸುಕ್ಷೇತ್ರ ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರಸಿದ್ಧವಾಗಿದೆ. ನಾಡಿನ ಭವಿಷ್ಯವಾಣಿ ಎಂದೇ ಪ್ರತೀತಿ ಇರುವ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ ಆಲಿಸಲು ಲಕ್ಷಾಂತರ ಭಕ್ತ ಪರಿಷೆ ಸೇರುತ್ತದೆ. ಇಲ್ಲಿನ ಮೈಲಾರಲಿಂಗಸ್ವಾಮಿಯ ಧಾರ್ಮಿಕ ಆಚರಣೆ, ಗೊರವ ಪರಂಪರೆ ವೈಶಿಷ್ಟ್ಯತೆಯಿಂದ ಕೂಡಿದೆ. ಪ್ರವಾಸಿ ಕೇಂದ್ರವಾಗುವ ಎಲ್ಲ ಅರ್ಹತೆ ಮೈಲಾರ ಹೊಂದಿದೆ.