ಹರಪನಹಳ್ಳಿ ತಾಲ್ಲೂಕು ಅರಸೀಕೆರೆಯಲ್ಲಿ ಬಸ್ ನಿಲ್ದಾಣದಲ್ಲಿ ಅಪೂರ್ಣ ಕಾಮಗಾರಿ
ಗ್ರಂಥಾಲಯ ವಿದ್ಯುತ್ ಪರಿವರ್ತಕ ಘಟಕ ಉದ್ಘಾಟಿಸಬೇಕು. ವಸತಿ ನಿಲಯ ನಾಡಕಚೇರಿ ಕಟ್ಟಡ ಮಂಜೂರಾತಿಗಾಗಿ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗೆ ನಿರ್ಲಕ್ಷಿಸಿದರೆ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ
ಗುಡಿಹಳ್ಳಿ ಹಾಲೇಶ್ ಕಾರ್ಯದರ್ಶಿ ಸಿಪಿಐ ತಾಲ್ಲೂಕು ಮಂಡಳಿ. ಹರಪನಹಳ್ಳಿ
ನಾಡಕಚೇರಿ ಗ್ರಾಮ ಆಡಳಿತ ಕಚೇರಿಗಳು ಹಳೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ನೂತನ ಕಟ್ಟಡ ನಿರ್ಮಿಸಲು ಒಂದು ಎಕರೆ ಜಾಗ ಗುರುತಿಸಲಾಗಿದೆ. ಸರ್ಕಾರದ ಅನುದಾನ ಬಿಡುಗಡೆಗೆ ಕಾಯುತ್ತಿದ್ದೇವೆ
ಬಿ.ವಿ.ಗಿರೀಶ್ ಬಾಬು ತಹಶೀಲ್ದಾರರು ಹರಪನಹಳ್ಳಿ
ಜಗಳೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ಅರಸೀಕೆರೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಸರ್ಕಾರದಿಂದ ಏಳು ಗ್ರಾಮ ಪಂಚಾಯಿಗಳ ವ್ಯಾಪ್ತಿಗೆ ಆಶ್ರಯ ಯೋಜನೆಯಡಿ ಮನೆಗಳು ಮಂಜೂರಾಗಿಲ್ಲ
ರಂಗಪ್ಪ ಕಾರ್ಮಿಕ ಅರಸೀಕೆರೆ
ಹೆಚ್ಚುವರಿ ಹಾಸ್ಟೆಲ್ ಗೆ ಬೇಡಿಕೆ
ಅರಸೀಕೆರೆಯಲ್ಲಿ 2 ಪ್ರಥಮ ದರ್ಜೆ 2 ಪಿಯು ಕಾಲೇಜು 5 ಪ್ರಾಥಮಿಕ ಶಾಲೆಗಳು ಹೈಸ್ಕೂಲ್ ಐಟಿಐ ಕಾಲೇಜುಗಳಿವೆ. ಸಾವಿರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಸಮಾಜಕಲ್ಯಾಣ ಇಲಾಖೆಯಡಿ ಇರುವ ಒಂದು ಹಾಸ್ಟೆಲ್ನಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಹೆಚ್ಚುವರಿಯಾಗಿ ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಪೂರ್ವ ಹಾಸ್ಟೆಲ್ ಆರಂಭಿಸಲು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಈಡೇರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.