ಹಗರಿಬೊಮ್ಮನಹಳ್ಳಿ: ‘ಅರಿವು, ಆಚಾರ ಮತ್ತು ಅನುಭಾವವನ್ನು ದಾಸೋಹ ಮಾಡಬೇಕಿದೆ’ ಎಂದು ಮನೋವೈದ್ಯ ಅಜಯಕುಮಾರ್ ತಾಂಡೂರ್ ಪ್ರತಿಪಾದಿಸಿದರು.
ಪಟ್ಟಣದ ರೇಣುಕ ವಿದ್ಯಾಮಂದಿರದಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆ, ತಾಲ್ಲೂಕು ಶರಣಸಾಹಿತ್ಯ ಪರಿಷತ್ ಹಾಗೂ ಹೊಸಪೇಟೆಯ ಇಷ್ಟಲಿಂಗ ಅಧ್ಯಯನ ಕೇಂದ್ರದಿಂದ ಇಷ್ಟಲಿಂಗ ಪೂಜೆ ಮತ್ತು ಧ್ಯಾನದ ಪ್ರಾತ್ಯಕ್ಷಿಕೆ, ವೈಚಾರಿಕತೆ ಕುರಿತು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.
‘ಇಷ್ಟಲಿಂಗದ ಮಹತ್ವದ ಕುರಿತು ಜಗಜ್ಯೋತಿ ಬಸವೇಶ್ವರರು ಸತತ ಸಂಶೋಧನೆ ನಡೆಸಿ ಬ್ರಹ್ಮಾಂಡದ ಆಕಾರವನ್ನು ಇಷ್ಟಲಿಂಗಕ್ಕೆ ನೀಡಿದ್ದಾರೆ’ ಎಂದರು.
‘ಲಿಂಗಾಯತ ಧರ್ಮ ಸ್ವತಂತ್ರವಾಗಿ ಬದುಕುವ ಮತ್ತು ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡದ ಧರ್ಮವಾಗಿದೆ, ಯಾರ ಮುಂದೆಯೂ ಕೈಚಾಚುವುದಿಲ್ಲ’ ಎಂದರು.