<p><strong>ಹರಪನಹಳ್ಳಿ (ವಿಜಯನಗರ ಜಿಲ್ಲೆ):</strong> ತಾಲ್ಲೂಕಿನ ಪಂಚಗಣಾಧೀಶ್ವರ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಶನಿವಾರ ಮುಸ್ಲಿಂ ಮುಖಂಡರು ಕುರಾನ್ ಗ್ರಂಥವನ್ನು ಉಡುಗೊರೆ ನೀಡಿ, ಯುಗಾದಿ ಹಬ್ಬದ ಶುಭಾಶಯವನ್ನು ಕೋರಿದರು.</p>.<p>ಮಂಗಳೂರಿನ ಧರ್ಮಗುರು ಮಕ್ಸೂದ್ ಉಮ್ರಿ ಮಾತನಾಡಿ, ‘ಕುರಾನ್ ಗ್ರಂಥವು ಮನುಷ್ಯನ ಜೀವನ ಸಾಗಿಸುವ ಕ್ರಮಗಳ ಬಗ್ಗೆ ತಿಳಿಸುತ್ತದೆ. ಯಾರೂ ಮೇಲಲ್ಲ, ಕೀಳಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ’ ಎಂದರು.</p>.<p>ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದೇವನೊಬ್ಬ ನಾಮ ಹಲವು. ಮುಸ್ಲಿಮರಲ್ಲಿ ಉಪಪಂಗಡಗಳಿವೆ. ಎಲ್ಲರೂ ಕುರಾನ್ ಓದುತ್ತಾರೆ. ರಂಜಾನ್ ಮಾಸಾಚರಣೆಯ ಶಿಸ್ತು, ಉಪವಾಸಕ್ಕೆ ವಿಶೇಷ ಮಹತ್ವ ಇದೆ. ಈದ್ ಶುಭಾಶಯಗಳು’ ಎಂದರು.</p>.<p>ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ, ಕೆರೆಗುಡಿಹಳ್ಳಿ ಹಾಲೇಶ್, ಐ.ಸಲಾಂ, ರಹಮತ್ ಉಲ್ಲಾ, ಅಬ್ದುಲ್ ಫತೀರ್, ಅಬ್ದುಲ್ ಸಮದ್, ರೆಹಮಾನ್, ನವೀದ್, ರೆಹಾನ್ ಮತ್ತು ಎ.ಬಿ.ಮಂಜುನಾಥ ಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ (ವಿಜಯನಗರ ಜಿಲ್ಲೆ):</strong> ತಾಲ್ಲೂಕಿನ ಪಂಚಗಣಾಧೀಶ್ವರ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಶನಿವಾರ ಮುಸ್ಲಿಂ ಮುಖಂಡರು ಕುರಾನ್ ಗ್ರಂಥವನ್ನು ಉಡುಗೊರೆ ನೀಡಿ, ಯುಗಾದಿ ಹಬ್ಬದ ಶುಭಾಶಯವನ್ನು ಕೋರಿದರು.</p>.<p>ಮಂಗಳೂರಿನ ಧರ್ಮಗುರು ಮಕ್ಸೂದ್ ಉಮ್ರಿ ಮಾತನಾಡಿ, ‘ಕುರಾನ್ ಗ್ರಂಥವು ಮನುಷ್ಯನ ಜೀವನ ಸಾಗಿಸುವ ಕ್ರಮಗಳ ಬಗ್ಗೆ ತಿಳಿಸುತ್ತದೆ. ಯಾರೂ ಮೇಲಲ್ಲ, ಕೀಳಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ’ ಎಂದರು.</p>.<p>ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದೇವನೊಬ್ಬ ನಾಮ ಹಲವು. ಮುಸ್ಲಿಮರಲ್ಲಿ ಉಪಪಂಗಡಗಳಿವೆ. ಎಲ್ಲರೂ ಕುರಾನ್ ಓದುತ್ತಾರೆ. ರಂಜಾನ್ ಮಾಸಾಚರಣೆಯ ಶಿಸ್ತು, ಉಪವಾಸಕ್ಕೆ ವಿಶೇಷ ಮಹತ್ವ ಇದೆ. ಈದ್ ಶುಭಾಶಯಗಳು’ ಎಂದರು.</p>.<p>ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ, ಕೆರೆಗುಡಿಹಳ್ಳಿ ಹಾಲೇಶ್, ಐ.ಸಲಾಂ, ರಹಮತ್ ಉಲ್ಲಾ, ಅಬ್ದುಲ್ ಫತೀರ್, ಅಬ್ದುಲ್ ಸಮದ್, ರೆಹಮಾನ್, ನವೀದ್, ರೆಹಾನ್ ಮತ್ತು ಎ.ಬಿ.ಮಂಜುನಾಥ ಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>