ಹೊಸಪೇಟೆ: ನಗರದ ಸೆಕ್ರಡ್ ಹಾರ್ಟ್ ಚರ್ಚ್ ಆವರಣದಲ್ಲಿ ಕ್ಯಾಥೊಲಿಕ್ ಕ್ರೈಸ್ತರು ಶನಿವಾರ ಸಂಕ್ರಾಂತಿ ಆಚರಿಸಿದರು.
ಪ್ರಾರ್ಥನಾ ಮಂದಿರ ಒಳಗಿನ ಪೂಜಾ ಪೀಠವನ್ನು ಕಬ್ಬಿನ ದಂಟು, ಹೂವಿನಿಂದ ಸಿಂಗರಿಸಿದ್ದರು. ಚರ್ಚ್ ಆವರಣದಲ್ಲಿ ಗಡಿಪೊಂಗಲ್ ತಯಾರಿಸಿ ವಿತರಿಸಿದರು. ಶುಭಾಶಯ ವಿನಿಮಯ ಮಾಡಿಕೊಂಡರು.
ಧರ್ಮಗುರು ಆರೋಗ್ಯನಾಥನ್, ‘ಪ್ರಕೃತಿ ಬದಲಾವಣೆ ಕಾಲವೇ ಸಂಕ್ರಾಂತಿ. ಸುಗ್ಗಿ ಆಚರಣೆಗೆ ರೈತರು ಕಾಯುತ್ತಾರೆ. ಅವರು ಬೆಳೆದ ಫಸಲು ತಿಂದು ನಾವು ಆರೋಗ್ಯವಾಗಿದ್ದೇವೆ. ಅವರ ಋಣ ದೊಡ್ಡದು’ ಎಂದರು.