ಎಚ್.ಎಲ್.ಸಿ. ಮೂಲಕ 2,700 ಕ್ಯುಸೆಕ್ ನೀರು ಹರಿಸಲಾಗುತ್ತಿತ್ತು. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಕೋಟಾ ಸೇರಿಸಿ ಜುಲೈ 12ರಿಂದ ನೀರು ಹರಿಸಲಾಗುತ್ತಿತ್ತು. ‘ಕಾಲುವೆ ಸಮೀಕ್ಷೆ ನಡೆಸಿದ್ದು, ಸುಸ್ಥಿತಿಯಲ್ಲಿದೆ ಎಂದು ಎಂಜಿನಿಯರ್ಗಳು ಮಾಹಿತಿ ನೀಡಿದ್ದು, ಅದನ್ನು ಆಧರಿಸಿ ನೀರು ಹರಿಸಲಾಗುತ್ತಿದೆ’ ಎಂದು ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್ ತಿಳಿಸಿದ್ದರು. ಕಾಲುವೆ ಒಡೆದಿರುವುದರ ಬಗ್ಗೆ ‘ಪ್ರಜಾವಾಣಿ’ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಇತ್ತೀಚೆಗೆ ಜಲಾಶಯದ ಕ್ರಸ್ಟ್ಗೇಟ್ ಸಂಖ್ಯೆ 21ರಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು.