<p><strong>ಹೊಸಪೇಟೆ (ವಿಜಯನಗರ):</strong> ಬಜೆಟ್ ತಯಾರಿಯಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಇಡೀ ದಿನ ಹಂಪಿ ಸಮೀಪದ ಮಲಪನಗುಡಿಯ ವಿಜಯಶ್ರೀ ಹೆರಿಟೇಜ್ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಶಿಬಿರ ನಡೆಸಿದ್ದರು. ಹೀಗಾಗಿ ಈ ಬಾರಿಯ ಬಜೆಟ್ನಲ್ಲಿ ಹಂಪಿಯ ಪುರಾತತ್ವ ತಾಣಗಳ ಅಭಿವೃದ್ಧಿಗೆ ಒಂದಿಷ್ಟು ಅನುದಾನ ಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.</p><p>ಪ್ರತಿ ವರ್ಷ ದೇಶದ ಬೇರೆ ಬೇರೆ ಕಡೆಗಳಲ್ಲಿ ಬಜೆಟ್ಗಿಂತ ಮೊದಲು ಇಂತಹ ಚಿಂತನ ಶಿಬಿರಗಳನ್ನು ನಡೆಸುವ ಸಂಪ್ರದಾಯವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸುತ್ತ ಬಂದಿದ್ದಾರೆ, ಈ ಬಾರಿ ಆ ಅವಕಾಶ ಹಂಪಿಗೆ ಒಲಿದಿದೆ, ಇದರಿಂದ ಒಂದಿಷ್ಟು ಆಶಾಭಾವನೆ ಮೂಡುವಂತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.</p><p>ಸಭೆ ಕೊನೆಗೊಳಿಸಿದ ಸಚಿವರು ತಮ್ಮ ತಂಡದೊಂದಿಗೆ ಸಂಜೆ ಹಂಪಿಯ ಆನೆಲಾಯ, ಕುದುರೆಲಾಯ ಪ್ರದೇಶಕ್ಕೆ ಬಂದರು. ಅಲ್ಲಿ ಇಡೀ ತಂಡಕ್ಕೆ ವಿಜಯನಗರ ವೈಭವವನ್ನು ತೋರಿಸಲು ವ್ಯವಸ್ಥೆ ಮಾಡಲಾಗಿತ್ತು. ಆನೆಲಾಯದ ಹಿನ್ನೆಲೆಯಲ್ಲಿ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವವನ್ನು ಕಣ್ತುಂಬಿಕೊಂಡರು.</p><p>ಹಂಪಿ ಉತ್ಸವದ ವೇಳೆ ಪ್ರದರ್ಶಿಸುವ ಧ್ವನಿಬೆಳಕಿನಲ್ಲಿ ಕಲಾವಿದರು ಸ್ವತಃ ನಟಿಸುತ್ತಾರೆ, ಇಲ್ಲಿ ಮುದ್ರಿತ ವಿಡಿಯೊ ಚಿತ್ರಗಳನ್ನು ಅನೆಲಾಯದ ಸ್ಮಾರಕಗಳ ಮೇಲೆ ಹಾಯಿಸಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸಿ ಅತಿಥಿಗಳಿಗೆ ಪರಿಚಯಿಸಲಾಯಿತು.</p><p>ಜತೆಗೆ ಯಕ್ಷಗಾನ, ಡೊಳ್ಳುಕುಣಿತ, ಪಟಕುಣಿತ, ಪೂಜಾ ಕುಣಿತ, ನಂದಿಕೋಲು ಮೊದಲಾದ ರಾಜ್ಯದ ಜಾನಪದ ವೈಭವವನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು.</p><p><strong>ಅತಿ ಗಣ್ಯರು ಭಾಗಿ:</strong> ಬಜೆಟ್ ಚಿಂತನ ಶಿಬಿರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲದೆ, ಹಣಕಾಸು ಖಾತೆ ರಾಜ್ಯ ಸಚಿವ ಎಚ್.ಡಿ.ಮಲ್ಹೋತ್ರಾ, ಹಣಕಾಸು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳು, ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರು, ಮುಖ್ಯ ಹಣಕಾಸು ಸಲಹೆಗಾರರು ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಭಾನುವಾರವೂ ಈ ಚಿಂತನ ಮಂಥನ ಶಿಬಿರ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಬಜೆಟ್ ತಯಾರಿಯಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಇಡೀ ದಿನ ಹಂಪಿ ಸಮೀಪದ ಮಲಪನಗುಡಿಯ ವಿಜಯಶ್ರೀ ಹೆರಿಟೇಜ್ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಶಿಬಿರ ನಡೆಸಿದ್ದರು. ಹೀಗಾಗಿ ಈ ಬಾರಿಯ ಬಜೆಟ್ನಲ್ಲಿ ಹಂಪಿಯ ಪುರಾತತ್ವ ತಾಣಗಳ ಅಭಿವೃದ್ಧಿಗೆ ಒಂದಿಷ್ಟು ಅನುದಾನ ಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.</p><p>ಪ್ರತಿ ವರ್ಷ ದೇಶದ ಬೇರೆ ಬೇರೆ ಕಡೆಗಳಲ್ಲಿ ಬಜೆಟ್ಗಿಂತ ಮೊದಲು ಇಂತಹ ಚಿಂತನ ಶಿಬಿರಗಳನ್ನು ನಡೆಸುವ ಸಂಪ್ರದಾಯವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸುತ್ತ ಬಂದಿದ್ದಾರೆ, ಈ ಬಾರಿ ಆ ಅವಕಾಶ ಹಂಪಿಗೆ ಒಲಿದಿದೆ, ಇದರಿಂದ ಒಂದಿಷ್ಟು ಆಶಾಭಾವನೆ ಮೂಡುವಂತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.</p><p>ಸಭೆ ಕೊನೆಗೊಳಿಸಿದ ಸಚಿವರು ತಮ್ಮ ತಂಡದೊಂದಿಗೆ ಸಂಜೆ ಹಂಪಿಯ ಆನೆಲಾಯ, ಕುದುರೆಲಾಯ ಪ್ರದೇಶಕ್ಕೆ ಬಂದರು. ಅಲ್ಲಿ ಇಡೀ ತಂಡಕ್ಕೆ ವಿಜಯನಗರ ವೈಭವವನ್ನು ತೋರಿಸಲು ವ್ಯವಸ್ಥೆ ಮಾಡಲಾಗಿತ್ತು. ಆನೆಲಾಯದ ಹಿನ್ನೆಲೆಯಲ್ಲಿ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವವನ್ನು ಕಣ್ತುಂಬಿಕೊಂಡರು.</p><p>ಹಂಪಿ ಉತ್ಸವದ ವೇಳೆ ಪ್ರದರ್ಶಿಸುವ ಧ್ವನಿಬೆಳಕಿನಲ್ಲಿ ಕಲಾವಿದರು ಸ್ವತಃ ನಟಿಸುತ್ತಾರೆ, ಇಲ್ಲಿ ಮುದ್ರಿತ ವಿಡಿಯೊ ಚಿತ್ರಗಳನ್ನು ಅನೆಲಾಯದ ಸ್ಮಾರಕಗಳ ಮೇಲೆ ಹಾಯಿಸಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸಿ ಅತಿಥಿಗಳಿಗೆ ಪರಿಚಯಿಸಲಾಯಿತು.</p><p>ಜತೆಗೆ ಯಕ್ಷಗಾನ, ಡೊಳ್ಳುಕುಣಿತ, ಪಟಕುಣಿತ, ಪೂಜಾ ಕುಣಿತ, ನಂದಿಕೋಲು ಮೊದಲಾದ ರಾಜ್ಯದ ಜಾನಪದ ವೈಭವವನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು.</p><p><strong>ಅತಿ ಗಣ್ಯರು ಭಾಗಿ:</strong> ಬಜೆಟ್ ಚಿಂತನ ಶಿಬಿರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲದೆ, ಹಣಕಾಸು ಖಾತೆ ರಾಜ್ಯ ಸಚಿವ ಎಚ್.ಡಿ.ಮಲ್ಹೋತ್ರಾ, ಹಣಕಾಸು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳು, ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರು, ಮುಖ್ಯ ಹಣಕಾಸು ಸಲಹೆಗಾರರು ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಭಾನುವಾರವೂ ಈ ಚಿಂತನ ಮಂಥನ ಶಿಬಿರ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>