ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರ್ ಮಾತನಾಡಿ, ‘ಲಾಕ್ಡೌನ್ ಸಂದರ್ಭದಲ್ಲಿ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಇಲಾಖೆಯು ಸಹಕಾರ ನೀಡುತ್ತಿದೆ. ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ತರಕಾರಿ ಹಂಚುತ್ತಿರುವ ಕಾರ್ಯ ಶ್ಲಾಘನೀಯ. ನಗರದ ವಿವಿಧ ಭಾಗಗಳಿಗೆ ತೆರಳಿ ತರಕಾರಿ ಕಿಟ್ ಹಂಚಲು ನೆರವಾಗುವ ಸಲುವಾಗಿ ಇಲಾಖೆಯಿಂದ ಪಾಸ್ ಸಹ ವಿತರಿಸಲಾಗಿದೆ’ ಎಂದು ತಿಳಿಸಿದರು. ಖದೀರ್, ಪರ್ವೇಜ್, ಮಾಬಾಷ, ಖಾಸಿಂ ಇದ್ದರು.