‘ಕೆಲ ಶಾಸಕರು ವಿಜಯನಗರ ಜಿಲ್ಲೆಗೆ ಶೇ 5ರಿಂದ 8ರಷ್ಟು ಪಾಲು ನೀಡಲು ಆಗ್ರಹಿಸಿದ್ದರು. ಆದರೆ, ನ್ಯಾಯಬದ್ಧವಾಗಿ ಎಷ್ಟು ಸಿಗಬೇಕಿತ್ತೋ ಅಷ್ಟು ಸಿಕ್ಕಿದೆ. ಹೊಸ ಜಿಲ್ಲೆ ನಂತರ ಕೆಲವರು ಬೆಲೆ ಹೆಚ್ಚಾಗಿದೆ ಎಂದು ಆರೋಪ ಮಾಡಿದ್ದರು. ಆದರೆ, ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಬಳ್ಳಾರಿ ಜಿಲ್ಲೆಗೆ ಸರಿಸಮವಾಗಿ ವಿಜಯನಗರ ಬೆಳೆದು ನಿಲ್ಲಲಿದೆ. ಅಕ್ಟೋಬರ್ 2ರಂದು ಜೋಳದರಾಶಿ ಗುಡ್ಡದ ಮೇಲೆ 45 ಅಡಿ ಎತ್ತರದ ಕೃಷ್ಣದೇವರಾಯನ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಅನಾವರಣಗೊಳಿಸುವರು’ ಎಂದು ತಿಳಿಸಿದರು.