ತ್ಯಾಜ್ಯದ ನೀರೆಲ್ಲಾ ರಸ್ತೆ ಮೇಲೆ ಆವರಿಸಿಕೊಂಡು ಎಲ್ಲೆಡೆ ದುರ್ಗಂಧ ಹರಡಿತು. ನಗರದ ಹಂಪಿ ರಸ್ತೆ, ಚಿತ್ತವಾಡ್ಗಿ, ಬಳ್ಳಾರಿ ರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಮಳೆ ನಿಲ್ಲುವವರೆಗೆ ಬಹುತೇಕ ರಸ್ತೆಗಳಲ್ಲಿ ಜನರ ಓಡಾಟ ತಗ್ಗಿತು.
ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ನಾಗೇನಹಳ್ಳಿ,ಧರ್ಮದಗುಡ್ಡ, ಇಂಗಳಗಿ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಕಳೆದ ಒಂದು ತಿಂಗಳಿಂದ ಮಳೆಯಾಗಿರಲಿಲ್ಲ. ಬಿತ್ತನೆ ಮಾಡಿದವರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಗುರುವಾರ ಸುರಿದ ಬಿರುಸಿನ ಮಳೆಗೆ ತಾಲ್ಲೂಕಿನ ರೈತರು ಸಂತಸಗೊಂಡಿದ್ದಾರೆ.