ಸಂಡೂರು ರಸ್ತೆ, ಚೆಕ್ ಪೋಸ್ಟ್ ಹಾಗೂ ಜೆಸ್ಕಾಂ ಕಚೇರಿ ರಸ್ತೆಯಲ್ಲಿ ಈ ನೀರಿನ ಅರವಟ್ಟಿಗೆ ಸ್ಥಾಪಿಸಲಾಗಿದೆ. ‘ನೀರಿಲ್ಲದೇ ಯಾವ ಜೀವಿ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಜೀವಿಗೂ ನೀರಿನ ಅವಶ್ಯಕತೆಯಿದೆ. ಬೇಸಿಗೆ ಇನ್ನೇನು ಶುರುವಾಗಲಿದ್ದು, ಸ್ವಲ್ಪ ಓಡಾಡಿದರೂ ಬಾಯಾರಿಕೆ ಆಗುತ್ತದೆ. ಜನರ ದಾಹ ನೀಗಿಸುವುದಕ್ಕಾಗಿ ಈ ಅರಟ್ಟಿಗೆ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಂಘದ ಅಧ್ಯಕ್ಷೆ ಕಾಸೆಟ್ಟಿ ಉಮಾಪತಿ ಹೇಳಿದರು.