ಹೊಸಪೇಟೆಯಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ಎಚ್.ಆರ್.ಗವಿಯಪ್ಪ ಅವರು ನೀರಿನ ರಾಜಕೀಯ ನಡೆಸುತ್ತಿದ್ದಾರೆಯೇ ಎಂಬ ಗುಮಾನಿ ಬರುವ ರೀತಿಯ ಬೆಳವಣಿಗೆಗಳು ಮೂರು ದಿನಗಳ ಹಿಂದೆ ನಡೆದವು. ಸಿಂಗ್ ಅವರ ನೀರಿನ ಟ್ಯಾಂಕರ್ಗೆ ನೀರು ಕೊಡಬೇಡಿ ಎಂದು ಶಾಸಕರು ಹೇಳಿದ್ದು ವಿವಾದ ಭುಗಿಲೇಳುವಂತೆ ಮಾಡಿತು. ನಗರದ ನೀರನ್ನು ಗ್ರಾಮಾಂತರ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕಾರಣಕ್ಕೂ ಈ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಬಿಕ್ಕಟ್ಟು ಬಗೆಹರಿಸಲು ನಗರಸಭೆಯ ವಿಶೇಷ ಸಭೆ ಕರೆದು, ಖಾಸಗಿ ಟ್ಯಾಂಕರ್ಗಳಿಗೂ ನಗರಸಭೆಯ ನೀರನ್ನು ನೀಡಬೇಕು ಎಂಬ ನಿರ್ಣಯ ಅಂಗೀಕಾರವಾಗಿದೆ.
ಎಚ್.ಆರ್.ಗವಿಯಪ್ಪ
ಪೈಪ್ಲೈನ್ ಹಾಕಲು ನಡೆದ ಕಾಮಗಾರಿ (ಸಂಗ್ರಹ ಚಿತ್ರ)
ಸ್ವಂತ ಹಣವೋ ಸರ್ಕಾರದ್ದೋ ಎಂಬ ಚಿಂತೆ ಮಾಡಿಲ್ಲ ಮೊದಲು ಜನರಿಗೆ ನೀರು ಸಿಗಬೇಕು ಎಂಬುದಷ್ಟೇ ನನ್ನ ಚಿಂತನೆಯಾಗಿದೆ