‘ಪುನೀತ್ ರಾಜಕುಮಾರ್ ಪುತ್ಥಳಿ ಸ್ಥಾಪನೆ’
‘ಹೊಸಪೇಟೆ ನಗರದಲ್ಲಿ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಸ್ಥಾಪಿಸುವ ಯೋಜನೆ ಇದೆ’ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
‘ಕಾಟಾಚಾರಕ್ಕೆ ಯಾವುದೋ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಿದರೆ ಪ್ರಯೋಜನವಿಲ್ಲ. ಅದರ ಸೂಕ್ತ ನಿರ್ವಹಣೆ ಆಗಬೇಕು. ಎಲ್ಲಾದರೂ ಒಂದು ಉದ್ಯಾನವನ ನಿರ್ಮಿಸಿ, ಅಲ್ಲಿ ಪುತ್ಥಳಿ ಸ್ಥಾಪಿಸುವ ಯೋಚನೆ ಇದೆ. ಅದಕ್ಕಾಗಿ ಎಲ್ಲ ಸಂಘ ಸಂಸ್ಥೆಗಳ ಸಭೆ ಕರೆದು, ಅಭಿಪ್ರಾಯ ಆಲಿಸಿ ಮುಂದುವರೆಯಲಾಗುವುದು’ ಎಂದರು.
‘ಪುನೀತ್ ಅವರ ಸಾವಿನಿಂದ ವೈಯಕ್ತಿಕವಾಗಿ ನನಗೆ ಬಹಳ ಆಘಾತ, ನೋವಾಗಿದೆ. ಸಣ್ಣ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು. ದೊಡ್ಡ ನಟನಾಗಿ, ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದರು. ಡಾ. ರಾಜ್ ಕುಮಾರ್ ಕುಟುಂಬ ಸದಸ್ಯರ ವ್ಯಕ್ತಿತ್ವವೇ ಬೇರೆ. ಅವರು ಎಲ್ಲರಿಗೂ ಮಾದರಿ’ ಎಂದು ಕೊಂಡಾಡಿದರು.