ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಯುವತಿ ಕೊಲೆ ಪ್ರಕರಣ: ಆರೋಪಿಯ ಪೋಷಕರ ಬಂಧನ

Last Updated 31 ಜುಲೈ 2022, 8:25 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಜುಲೈ 21 ರಂದು ಸಮೀಪದ ಕನ್ನಿ ಬೋರಯ್ಯನಹಟ್ಟಿಯಲ್ಲಿ ನಡೆದಿದ್ದ ನಿರ್ಮಲಾ ಎಂಬ ಯುವತಿಯ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಕಾನಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಹತ್ಯೆ ನಡೆದ ದಿನ ಆರೋಪಿಯ ಕುಟುಂಬದವರು ತಲೆ ಮರೆಸಿಕೊಂಡಿದ್ದರು. ಪೊಲೀಸರು ತನಿಖೆ ಮಾಡಿ ಬಂಧಿಸಿದ್ದಾರೆ.

ಯುವತಿಯ ಹತ್ಯೆಗೈದು ಶರಣಾಗಿದ್ದ ಆರೋಪಿ ಬೋಜರಾಜನ ತಂದೆ ಬಸಣ್ಣ ಕೊಲೆಗೆ ಸಹಕಾರ ನೀಡಿದ್ದ ಆರೋಪದಡಿ ಹಾಗೂ ಬೋಜರಾಜನಿಗೆ ಅಪ್ರಾಪ್ತ ಬಾಲಕಿಯ ಜತೆ ಮದುವೆ ಮಾಡಿಸಿದ್ದ ಆರೋಪದಡಿ ಬಾಲ್ಯವಿವಾಹ ಪ್ರಕರಣದಲ್ಲಿ ತಾಯಿ ಕರಿಬಸಮ್ಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT