ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಜುಲೈ 21 ರಂದು ಸಮೀಪದ ಕನ್ನಿ ಬೋರಯ್ಯನಹಟ್ಟಿಯಲ್ಲಿ ನಡೆದಿದ್ದ ನಿರ್ಮಲಾ ಎಂಬ ಯುವತಿಯ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಕಾನಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯುವತಿಯ ಹತ್ಯೆ ನಡೆದ ದಿನ ಆರೋಪಿಯ ಕುಟುಂಬದವರು ತಲೆ ಮರೆಸಿಕೊಂಡಿದ್ದರು. ಪೊಲೀಸರು ತನಿಖೆ ಮಾಡಿ ಬಂಧಿಸಿದ್ದಾರೆ.
ಯುವತಿಯ ಹತ್ಯೆಗೈದು ಶರಣಾಗಿದ್ದ ಆರೋಪಿ ಬೋಜರಾಜನ ತಂದೆ ಬಸಣ್ಣ ಕೊಲೆಗೆ ಸಹಕಾರ ನೀಡಿದ್ದ ಆರೋಪದಡಿ ಹಾಗೂ ಬೋಜರಾಜನಿಗೆ ಅಪ್ರಾಪ್ತ ಬಾಲಕಿಯ ಜತೆ ಮದುವೆ ಮಾಡಿಸಿದ್ದ ಆರೋಪದಡಿ ಬಾಲ್ಯವಿವಾಹ ಪ್ರಕರಣದಲ್ಲಿ ತಾಯಿ ಕರಿಬಸಮ್ಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.