<p><strong>ಸವದತ್ತಿ: </strong>ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾತಾಣವಾದ ಶ್ರೀ ರೇಣುಕಾದೇವಿಯ ಯಲ್ಲಮ್ಮನಗುಡ್ಡದಲ್ಲಿ ಜಮಖಂಡಿ ತಾಲ್ಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ಅನ್ನದಾನೇಶ್ವರರು ಆಯೋಜಿಸಿದ್ದ ದಾಸೋಹ ಕೇಂದ್ರಗಳಲ್ಲಿ ಲಕ್ಷಾಂತರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.<br /> <br /> ಎಲ್ಲಿಯೇ ಜಾತ್ರೆ, ಉತ್ಸವಗಳು ನಡೆಯಲಿ ಅಲ್ಲಿ ನೀಲಮಾಣಿಕಮಠದ ದಾಸೋಹ ಕೇಂದ್ರದಲ್ಲಿ ಮಹಾಪ್ರಸಾದ ವ್ಯವಸ್ಥೆ ನಡೆಯುವುದು. 1970ರಲ್ಲಿ ಆರಂಭವಾದ ದಾಸೋಹ ಕಾರ್ಯಕ್ರಮ ಇಲ್ಲಿಯವರೆಗೆ ಭಾರಿ ಪ್ರಮಾಣದಲ್ಲಿ ಮುಂದುವರಿದಿದ್ದರಿಂದ ಅನ್ನದಾನೇಶ್ವರರನ್ನು ಕಲಿಯುಗದ ದಾಸೋಹಿ, ಬಸವಣ್ಣನೆಂದೇ ಪ್ರಚಲಿತರಾಗಿದ್ದಾರೆ.<br /> <br /> ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಮೂರು ದಿನದಿಂದ, ಮೂರು ಕಡೆಗಳಲ್ಲಿ ದಾಸೋಹ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ಸುಮಾರು 6 ರಿಂದ 7 ಲಕ್ಷ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಇಷ್ಟೊಂದು ಜನರಿಗೆ ವ್ಯವಸ್ಥಿತವಾಗಿ ಊಟದ ವ್ಯವಸ್ಥೆ ಮಾಡುವುದು. ಯಾವುದೇ ಸರ್ಕಾರ ಹಾಗೂ ಆಡಳಿತ ಮಂಡಳಿಯಿಂದ ಸಾಧ್ಯವಿಲ್ಲ.<br /> <br /> ಅನ್ನದಾನದಂತಹ ಪುಣ್ಯದ ಕೆಲಸ ಬಂಡಿಗಣಿಯ ಶ್ರೀಮಠ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಮೂಡಲಗಿಯ ಹಳ್ಳೂರು ಗ್ರಾಮದ ಭಕ್ತ ಮುರಿಗೆಪ್ಪ ಮಾಲಗಾರ ಹೇಳಿದರು. ‘ಮೊದಲು ಪೇಠೋಬಾ, ನಂತರ್ ವಿಠೋಬಾ’ ಎಂಬ ನಾಣ್ಣುಡಿಯಂತೆ ಬಂಡಿಗಣಿಯ ಶ್ರೀಮಠ ಅನ್ನ ದಾಸೋಹದಲ್ಲಿ ತೊಡಗಿದೆ ಎಂದು ಅನ್ನದಾನೇಶ್ವರರು ತಿಳಿಸಿದರು.<br /> <br /> <strong>೧೫೨ ಕಡೆ ದಾಸೋಹ:</strong> ಬಂಡಿಗಣಿಯ ನೀಲಮಾಣಿಕಮಠವು ರಾಜ್ಯದ ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳನಾಡುಗಳಲ್ಲಿನ ಪ್ರಮುಖ ಯಾತ್ರಾತಾಣಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಯಾರದೇ ಸಹಕಾರವಿಲ್ಲದೆ. ಇಡೀ ವರ್ಷದಲ್ಲಿ ಸುಮಾರು 152 ಕಡೆಗಳಲ್ಲಿ ಉಚಿತ ಅನ್ನ ದಾಸೋಹ ನಡೆಯುತ್ತಿದೆ.<br /> <br /> ರಾಜ್ಯದ ಯಲ್ಲಮ್ಮನಗುಡ್ಡ, ಶಿರಸಂಗಿ, ಚಿಕ್ಕೂಡಿಯ ಯಡಿಯೂರ ವೀರಭದ್ರೇಶ್ವರ ಜಾತ್ರೆ, ಚಿಂಚಲಿ ಮಾಯಕ್ಕಾದೇವಿ ಜಾತ್ರೆ, ಸಂಡೂರಿನ ಶಣಮುಖಸ್ವಾಮಿ ಜಾತ್ರೆ, ಸೋಗಲದ ಶ್ರೀಸೋಮೆಶ್ವರ ಜಾತ್ರೆ, ಜಮಖಂಡಿ ಹನಮಂತದೇವರ ಹಾಗೂ ಕಲ್ಲೂಳ್ಳಿ ಹನಮಂತದೇವರ ಜಾತ್ರೆ ಅನ್ನ ದಾಸೋಹ ನಡೆಯುತ್ತಿದೆ.<br /> <br /> ಮಹಾರಾಷ್ಟ್ರದ ಪಂಢರಪುರದಲ್ಲಿ ಆರು ದಿನ, ಉಲಜಂತಿಯ ಮಾನಿಂಗರಾಯ, ಗುಡ್ಡಾಪುರ ದಾನಮ್ಮನ ಜಾತ್ರೆ, ಕೀಳೆಗಾಂವ ಬಸವಣ್ಣ, ತುಳಜಾಪುರದ ಅಂಬಾಭವಾನಿ ಜಾತ್ರೆ, ಆಂಧ್ರದ ಶ್ರೀಶೈಲಂನಲ್ಲಿ 7 ದಿನಗಳ ದಾಸೋಹ ಹಾಗೂ ತಮಿಳನಾಡಿನಲ್ಲಿಯೂ ಅನ್ನದಾಸೋಹ ವ್ಯವಸ್ಥೆ ಮಾಡುತ್ತಾರೆ.<br /> <br /> <strong>ವಿಶೇಷ ಊಟ:</strong> ಪ್ರತಿದಿನ ಒಂದೊಂದು ತರಹದ ಊಟದ ವ್ಯವಸ್ಥೆ ಮಾಡುತ್ತಾರೆ. ಗೋಧಿ ಹುಗ್ಗಿ, ಬೂಂದಿ, ಹೋಳಿಗೆ, ಕಡಬು (ಕರ್ಚಿಕಾಯಿ), ಮಾದಲಿ, ತುಪ್ಪ, ಸಂಡಿಗೆ, ಮಸಾಲಿ ಹಾಗೂ ಬಿಳಿ ಅನ್ನ, ಸಾಂಬಾರ, ತರಕಾರಿ ಇರುವುದು.<br /> ಲಕ್ಷಾಂತರ ಭಕ್ತರ ಊಟದ ತಯಾರಿಯನ್ನು 25 ಜನರು ಅಡುಗೆ ಮಾಡುವರು, ಊಟ ಬಡಿಸಲು 450 ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸಿದ್ದಾರೆ. ದಾಸೋಹ ಆರಂಭವಾಗುತ್ತಿದ್ದಂತೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು, ಅಲ್ಲದೇ ಸಾವಿರಾರು ಮಹಿಳೆಯರಿಗೆ ವಸ್ತ್ರದಾನ ಸಹ ನಡೆಯುವುದು.<br /> ಸದಾಶಿವ ಮಿರಜಕರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ: </strong>ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾತಾಣವಾದ ಶ್ರೀ ರೇಣುಕಾದೇವಿಯ ಯಲ್ಲಮ್ಮನಗುಡ್ಡದಲ್ಲಿ ಜಮಖಂಡಿ ತಾಲ್ಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ಅನ್ನದಾನೇಶ್ವರರು ಆಯೋಜಿಸಿದ್ದ ದಾಸೋಹ ಕೇಂದ್ರಗಳಲ್ಲಿ ಲಕ್ಷಾಂತರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.<br /> <br /> ಎಲ್ಲಿಯೇ ಜಾತ್ರೆ, ಉತ್ಸವಗಳು ನಡೆಯಲಿ ಅಲ್ಲಿ ನೀಲಮಾಣಿಕಮಠದ ದಾಸೋಹ ಕೇಂದ್ರದಲ್ಲಿ ಮಹಾಪ್ರಸಾದ ವ್ಯವಸ್ಥೆ ನಡೆಯುವುದು. 1970ರಲ್ಲಿ ಆರಂಭವಾದ ದಾಸೋಹ ಕಾರ್ಯಕ್ರಮ ಇಲ್ಲಿಯವರೆಗೆ ಭಾರಿ ಪ್ರಮಾಣದಲ್ಲಿ ಮುಂದುವರಿದಿದ್ದರಿಂದ ಅನ್ನದಾನೇಶ್ವರರನ್ನು ಕಲಿಯುಗದ ದಾಸೋಹಿ, ಬಸವಣ್ಣನೆಂದೇ ಪ್ರಚಲಿತರಾಗಿದ್ದಾರೆ.<br /> <br /> ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಮೂರು ದಿನದಿಂದ, ಮೂರು ಕಡೆಗಳಲ್ಲಿ ದಾಸೋಹ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ಸುಮಾರು 6 ರಿಂದ 7 ಲಕ್ಷ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಇಷ್ಟೊಂದು ಜನರಿಗೆ ವ್ಯವಸ್ಥಿತವಾಗಿ ಊಟದ ವ್ಯವಸ್ಥೆ ಮಾಡುವುದು. ಯಾವುದೇ ಸರ್ಕಾರ ಹಾಗೂ ಆಡಳಿತ ಮಂಡಳಿಯಿಂದ ಸಾಧ್ಯವಿಲ್ಲ.<br /> <br /> ಅನ್ನದಾನದಂತಹ ಪುಣ್ಯದ ಕೆಲಸ ಬಂಡಿಗಣಿಯ ಶ್ರೀಮಠ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಮೂಡಲಗಿಯ ಹಳ್ಳೂರು ಗ್ರಾಮದ ಭಕ್ತ ಮುರಿಗೆಪ್ಪ ಮಾಲಗಾರ ಹೇಳಿದರು. ‘ಮೊದಲು ಪೇಠೋಬಾ, ನಂತರ್ ವಿಠೋಬಾ’ ಎಂಬ ನಾಣ್ಣುಡಿಯಂತೆ ಬಂಡಿಗಣಿಯ ಶ್ರೀಮಠ ಅನ್ನ ದಾಸೋಹದಲ್ಲಿ ತೊಡಗಿದೆ ಎಂದು ಅನ್ನದಾನೇಶ್ವರರು ತಿಳಿಸಿದರು.<br /> <br /> <strong>೧೫೨ ಕಡೆ ದಾಸೋಹ:</strong> ಬಂಡಿಗಣಿಯ ನೀಲಮಾಣಿಕಮಠವು ರಾಜ್ಯದ ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳನಾಡುಗಳಲ್ಲಿನ ಪ್ರಮುಖ ಯಾತ್ರಾತಾಣಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಯಾರದೇ ಸಹಕಾರವಿಲ್ಲದೆ. ಇಡೀ ವರ್ಷದಲ್ಲಿ ಸುಮಾರು 152 ಕಡೆಗಳಲ್ಲಿ ಉಚಿತ ಅನ್ನ ದಾಸೋಹ ನಡೆಯುತ್ತಿದೆ.<br /> <br /> ರಾಜ್ಯದ ಯಲ್ಲಮ್ಮನಗುಡ್ಡ, ಶಿರಸಂಗಿ, ಚಿಕ್ಕೂಡಿಯ ಯಡಿಯೂರ ವೀರಭದ್ರೇಶ್ವರ ಜಾತ್ರೆ, ಚಿಂಚಲಿ ಮಾಯಕ್ಕಾದೇವಿ ಜಾತ್ರೆ, ಸಂಡೂರಿನ ಶಣಮುಖಸ್ವಾಮಿ ಜಾತ್ರೆ, ಸೋಗಲದ ಶ್ರೀಸೋಮೆಶ್ವರ ಜಾತ್ರೆ, ಜಮಖಂಡಿ ಹನಮಂತದೇವರ ಹಾಗೂ ಕಲ್ಲೂಳ್ಳಿ ಹನಮಂತದೇವರ ಜಾತ್ರೆ ಅನ್ನ ದಾಸೋಹ ನಡೆಯುತ್ತಿದೆ.<br /> <br /> ಮಹಾರಾಷ್ಟ್ರದ ಪಂಢರಪುರದಲ್ಲಿ ಆರು ದಿನ, ಉಲಜಂತಿಯ ಮಾನಿಂಗರಾಯ, ಗುಡ್ಡಾಪುರ ದಾನಮ್ಮನ ಜಾತ್ರೆ, ಕೀಳೆಗಾಂವ ಬಸವಣ್ಣ, ತುಳಜಾಪುರದ ಅಂಬಾಭವಾನಿ ಜಾತ್ರೆ, ಆಂಧ್ರದ ಶ್ರೀಶೈಲಂನಲ್ಲಿ 7 ದಿನಗಳ ದಾಸೋಹ ಹಾಗೂ ತಮಿಳನಾಡಿನಲ್ಲಿಯೂ ಅನ್ನದಾಸೋಹ ವ್ಯವಸ್ಥೆ ಮಾಡುತ್ತಾರೆ.<br /> <br /> <strong>ವಿಶೇಷ ಊಟ:</strong> ಪ್ರತಿದಿನ ಒಂದೊಂದು ತರಹದ ಊಟದ ವ್ಯವಸ್ಥೆ ಮಾಡುತ್ತಾರೆ. ಗೋಧಿ ಹುಗ್ಗಿ, ಬೂಂದಿ, ಹೋಳಿಗೆ, ಕಡಬು (ಕರ್ಚಿಕಾಯಿ), ಮಾದಲಿ, ತುಪ್ಪ, ಸಂಡಿಗೆ, ಮಸಾಲಿ ಹಾಗೂ ಬಿಳಿ ಅನ್ನ, ಸಾಂಬಾರ, ತರಕಾರಿ ಇರುವುದು.<br /> ಲಕ್ಷಾಂತರ ಭಕ್ತರ ಊಟದ ತಯಾರಿಯನ್ನು 25 ಜನರು ಅಡುಗೆ ಮಾಡುವರು, ಊಟ ಬಡಿಸಲು 450 ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸಿದ್ದಾರೆ. ದಾಸೋಹ ಆರಂಭವಾಗುತ್ತಿದ್ದಂತೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು, ಅಲ್ಲದೇ ಸಾವಿರಾರು ಮಹಿಳೆಯರಿಗೆ ವಸ್ತ್ರದಾನ ಸಹ ನಡೆಯುವುದು.<br /> ಸದಾಶಿವ ಮಿರಜಕರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>