<p><strong>ವಿಜಯಪುರ: </strong>ಇಡೀ ಜಗತ್ತು ಆಯುರ್ವೇದದತ್ತ ಮುಖ ಮಾಡಿ ನಿಂತಿದೆ. ಇಂದಿನ ಕಾಲದಲ್ಲಿ ಆಯುರ್ವೇದ ವ್ಯೆದ್ಯರಾದ ತಾವುಗಳು ಆಯುರ್ವೇದ ವಿಶೇಷ ಪದ್ದತಿಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಆಯುರ್ವೇದ ಖ್ಯಾತಿಯನ್ನು ಬೆಳೆಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಹ ಕುಲಸಚಿವ ಡಾ.ಸಂತೋಷ ಯಡಹಳ್ಳಿ ಹೇಳಿದರು.</p>.<p>ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭವಿಷ್ಯದ ಮಾದರಿ ವ್ಯೆದ್ಯರಾಗಲು ತಾವು ಆಭ್ಯಸಿಸಿದ ಸಂಸ್ಥೆ ಶಿಕ್ಷಕರು-ಪಾಲಕರು ಪರಿಕಲ್ಪನೆಗಳನ್ನು ಪಾಲಿಸಬೇಕು ಎಂದರು.</p>.<p>ಹೊಸಪೇಟೆಯ ಟಿ.ಎಂ.ಎ.ಇ.ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಐ.ಸಣಕಲ್, ರೋಗಿಗಳ ರೋಗಕ್ಕೆ ಅನುಸಾರ ಸೂಕ್ತ ಚಿಕಿತ್ಸೆ ನೀಡಿ, ನೀವು ನೀಡಿದ ಚಿಕಿತ್ಸೆ ಫಲಕಾರಿಯಾದಾಗ ನೀವು ಪಡೆದ ವೈದ್ಯಕೀಯ ಅಧ್ಯಯನ ಸಾರ್ಥಕವಾಗುತ್ತದೆ ಎಂದು ಹೇಳಿದರು.</p>.<p>ಕಲಿಕೆ ಮುಗಿಯದ ಪಯಣ ಕಾಲಕ್ಕನುಣವಾಗಿ ಪ್ರತಿ ದಿನ ಅಧ್ಯಯನ ಮಾಡಬೇಕು. ವೈದ್ಯರು ರೋಗಿಗಳಿಂದ ಹೆಚ್ಚಿನ ಹಣವನ್ನು ಅಪೇಕ್ಷಿಸದೇ ನೀವು ಸರಿಯಾದ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖರನ್ನಾಗಿಸಿದರೆ ಅದರಲ್ಲಿಯೇ ತೃಪ್ತಿ ಸಿಗಲಿದೆ ಎಂದರು.</p>.<p>ಪದವಿ ಪಡೆದ 60 ವ್ಯೆದ್ಯರಿಗೆ ಮತ್ತು 6 ಸ್ನಾತಕೋತ್ತರ ವ್ಯೆದ್ಯರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.</p>.<p>ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ, ಉಪಪ್ರಾಚಾರ್ಯ ಡಾ.ಶಶಿಧರ ನಾಯಕ, ಡಾ.ಮಲ್ಲಮ್ಮ ಬಿರಾದಾರ, ಡಾ.ಕಾಶೀನಾಥ ಹದಿಮೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಇಡೀ ಜಗತ್ತು ಆಯುರ್ವೇದದತ್ತ ಮುಖ ಮಾಡಿ ನಿಂತಿದೆ. ಇಂದಿನ ಕಾಲದಲ್ಲಿ ಆಯುರ್ವೇದ ವ್ಯೆದ್ಯರಾದ ತಾವುಗಳು ಆಯುರ್ವೇದ ವಿಶೇಷ ಪದ್ದತಿಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಆಯುರ್ವೇದ ಖ್ಯಾತಿಯನ್ನು ಬೆಳೆಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಹ ಕುಲಸಚಿವ ಡಾ.ಸಂತೋಷ ಯಡಹಳ್ಳಿ ಹೇಳಿದರು.</p>.<p>ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭವಿಷ್ಯದ ಮಾದರಿ ವ್ಯೆದ್ಯರಾಗಲು ತಾವು ಆಭ್ಯಸಿಸಿದ ಸಂಸ್ಥೆ ಶಿಕ್ಷಕರು-ಪಾಲಕರು ಪರಿಕಲ್ಪನೆಗಳನ್ನು ಪಾಲಿಸಬೇಕು ಎಂದರು.</p>.<p>ಹೊಸಪೇಟೆಯ ಟಿ.ಎಂ.ಎ.ಇ.ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಐ.ಸಣಕಲ್, ರೋಗಿಗಳ ರೋಗಕ್ಕೆ ಅನುಸಾರ ಸೂಕ್ತ ಚಿಕಿತ್ಸೆ ನೀಡಿ, ನೀವು ನೀಡಿದ ಚಿಕಿತ್ಸೆ ಫಲಕಾರಿಯಾದಾಗ ನೀವು ಪಡೆದ ವೈದ್ಯಕೀಯ ಅಧ್ಯಯನ ಸಾರ್ಥಕವಾಗುತ್ತದೆ ಎಂದು ಹೇಳಿದರು.</p>.<p>ಕಲಿಕೆ ಮುಗಿಯದ ಪಯಣ ಕಾಲಕ್ಕನುಣವಾಗಿ ಪ್ರತಿ ದಿನ ಅಧ್ಯಯನ ಮಾಡಬೇಕು. ವೈದ್ಯರು ರೋಗಿಗಳಿಂದ ಹೆಚ್ಚಿನ ಹಣವನ್ನು ಅಪೇಕ್ಷಿಸದೇ ನೀವು ಸರಿಯಾದ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖರನ್ನಾಗಿಸಿದರೆ ಅದರಲ್ಲಿಯೇ ತೃಪ್ತಿ ಸಿಗಲಿದೆ ಎಂದರು.</p>.<p>ಪದವಿ ಪಡೆದ 60 ವ್ಯೆದ್ಯರಿಗೆ ಮತ್ತು 6 ಸ್ನಾತಕೋತ್ತರ ವ್ಯೆದ್ಯರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.</p>.<p>ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ, ಉಪಪ್ರಾಚಾರ್ಯ ಡಾ.ಶಶಿಧರ ನಾಯಕ, ಡಾ.ಮಲ್ಲಮ್ಮ ಬಿರಾದಾರ, ಡಾ.ಕಾಶೀನಾಥ ಹದಿಮೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>