<p><strong>ವಿಜಯಪುರ</strong>: ಜಮೀನನ್ನು ಮಾರ್ಟ್ಗೇಜ್ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ಚಡಚಣ ತಹಶೀಲ್ದಾರ್ ಕಚೇರಿಯ ಎಫ್.ಡಿ.ಎ ಭ್ರಷ್ಟಾಚಾರ ನಿಗ್ರಹ ದಳದ ಬಲೆ ಬಿದ್ದಿದ್ದಾನೆ.</p>.<p>ಚಡಚಣ ತಾಲ್ಲೂಕಿನ ಚಣೆಗಾಂವ ಗ್ರಾಮದಲ್ಲಿರುವ ವಿಜಯಪುರದ ಸುಧೀಂದ್ರ ಜಹಗೀರದಾರ ಎಂಬುವವರಿಗೆ ಸಂಬಂಧಿಸಿದ 23 ಎಕರೆ 30 ಗುಂಟೆ ಜಮೀನನ್ನು ಮಾರ್ಟ್ಗೇಜ್ ಮಾಡಿಸಲು ‘ಭೂಮಿ’ ಡಾಟಾಬೇಸ್ನಲ್ಲಿ ಸರ್ಕಾರಿ ನಿರ್ಬಂಧ ಎಂಬುದನ್ನು ತೆಗೆದುಹಾಕಲು ಚಡಚಣ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.</p>.<p>ಈ ಕೆಲಸ ಮಾಡಲು ₹ 4 ಸಾವಿರ ನೀಡುವಂತೆ ಕಚೇರಿಯ ವಿಷಯ ನಿರ್ವಾಹಕ ಉದಯಕುಮಾರ ಕಾಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಜುಲೈ 13ರಂದು ₹1 ಸಾವಿರ ಮುಂಗಡವಾಗಿ ಪಡೆದುಕೊಂಡಿದ್ದ ಕಾಳೆ, ಇನ್ನುಳಿದ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸುಧೀಂದ್ರ ಅವರು ಎಸಿಬಿಗೆ ದೂರು ನೀಡಿದ್ದಾರೆ.</p>.<p>ಸೋಮವಾರ ಸಂಜೆ ಲಂಚವನ್ನು ತೆಗೆದುಕೊಳ್ಳುವಾಗ ವಿಜಯಪುರ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪರಮೇಶ್ವರ ಕಮಟಗಿ, ಚಂದ್ರಕಲಾ ಹೊಸಮನಿ ಸಿಬ್ಬಂದಿಗಳಾದ ಶೇಖ್, ಕನ್ನೂರ, ಮಂಜೆ, ಕೊಟ್ಯಾಳ, ಯಾಳವಾರ, ಸಲಗೊಂಡದಾಳಿ ನಡೆಸಿ, ಲಂಚದ ಹಣದ ಸಮೇತ ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಜಮೀನನ್ನು ಮಾರ್ಟ್ಗೇಜ್ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ಚಡಚಣ ತಹಶೀಲ್ದಾರ್ ಕಚೇರಿಯ ಎಫ್.ಡಿ.ಎ ಭ್ರಷ್ಟಾಚಾರ ನಿಗ್ರಹ ದಳದ ಬಲೆ ಬಿದ್ದಿದ್ದಾನೆ.</p>.<p>ಚಡಚಣ ತಾಲ್ಲೂಕಿನ ಚಣೆಗಾಂವ ಗ್ರಾಮದಲ್ಲಿರುವ ವಿಜಯಪುರದ ಸುಧೀಂದ್ರ ಜಹಗೀರದಾರ ಎಂಬುವವರಿಗೆ ಸಂಬಂಧಿಸಿದ 23 ಎಕರೆ 30 ಗುಂಟೆ ಜಮೀನನ್ನು ಮಾರ್ಟ್ಗೇಜ್ ಮಾಡಿಸಲು ‘ಭೂಮಿ’ ಡಾಟಾಬೇಸ್ನಲ್ಲಿ ಸರ್ಕಾರಿ ನಿರ್ಬಂಧ ಎಂಬುದನ್ನು ತೆಗೆದುಹಾಕಲು ಚಡಚಣ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.</p>.<p>ಈ ಕೆಲಸ ಮಾಡಲು ₹ 4 ಸಾವಿರ ನೀಡುವಂತೆ ಕಚೇರಿಯ ವಿಷಯ ನಿರ್ವಾಹಕ ಉದಯಕುಮಾರ ಕಾಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಜುಲೈ 13ರಂದು ₹1 ಸಾವಿರ ಮುಂಗಡವಾಗಿ ಪಡೆದುಕೊಂಡಿದ್ದ ಕಾಳೆ, ಇನ್ನುಳಿದ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸುಧೀಂದ್ರ ಅವರು ಎಸಿಬಿಗೆ ದೂರು ನೀಡಿದ್ದಾರೆ.</p>.<p>ಸೋಮವಾರ ಸಂಜೆ ಲಂಚವನ್ನು ತೆಗೆದುಕೊಳ್ಳುವಾಗ ವಿಜಯಪುರ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪರಮೇಶ್ವರ ಕಮಟಗಿ, ಚಂದ್ರಕಲಾ ಹೊಸಮನಿ ಸಿಬ್ಬಂದಿಗಳಾದ ಶೇಖ್, ಕನ್ನೂರ, ಮಂಜೆ, ಕೊಟ್ಯಾಳ, ಯಾಳವಾರ, ಸಲಗೊಂಡದಾಳಿ ನಡೆಸಿ, ಲಂಚದ ಹಣದ ಸಮೇತ ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>