ವಿಷಯ ತಿಳಿದು ಸ್ಥಳಕ್ಕೆ ಬಂದ ಶ್ರೀರಾಮ ಸೇನೆಯ ಮುಖಂಡರು, ‘ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಅಖಂಡ ವಿಜಯಪುರದ ಹಿಂದೂಗಳಿಗೆ ಮಾತ್ರ ಸೇರಿದ್ದು, ಆದರೆ ಹಿಂದೂ ಸಂಘಟನೆಗಳ ಬ್ಯಾನರ್ ಕಿತ್ತುಹಾಕುವ ಉದ್ದೇಶವೇನು? ಹಿಂದೂಗಳ ಭಾವನೆಗೆ ಬೆಲೆ ಕೊಡದ ಪದಾಧಿಕಾರಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಬೇಕು’ ಎಂದು ಒತ್ತಾಯಿಸಿದರು. ಕೆಲ ಕ್ಷಣ ವಾಗ್ವಾದ ನಡೆದು, ಬಳಿಕ ಮತ್ತೆ ಬ್ಯಾನರ್ ಯಥಾರೀತಿಯಲ್ಲಿ ಅಳವಡಿಸಲಾಯಿತು.