ವಿಜಯಪುರ: ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಅವರು ಕಾರಜೋಳದ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿ, ಸಕ್ಕರೆ ದಾಸ್ತಾನು ಪರಿಶೀಲನೆ ಮಾಡಿದರು.
ಪ್ರಸ್ತುತ ವರ್ಷದಲ್ಲಿ ಈ ಸಕ್ಕರೆ ಕಾರ್ಖಾನೆ 62,860 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಮಾಡಿದ್ದು, 61,251 ಮೆಟ್ರಿಕ್ ಟನ್ ಸಕ್ಕರೆ ಮಾರಾಟ ಮಾಡಲಾಗಿದೆ. ಸದ್ಯ ಕಾರ್ಖಾನೆಯ ಗೋದಾಮಿನಲ್ಲಿ 1,764 ಮೆಟ್ರಿಕ್ ಟನ್ ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ಕಾರ್ಖಾನೆಡಿ.ಜಿ.ಎಂ ಶ್ರೀ ಶಂಕರ್ ಮಾಹಿತಿ ನೀಡಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಸಿದ್ರಾಮ ಮಾರಿಹಾಳ ಮತ್ತು ಆಹಾರ ಶಿರಸ್ತೇದಾರ ಅಮರೇಶ ತಾಂಡೂರ, ಕಾರ್ಖಾನೆಯ ಎಚ್ ಆರ್. ಮಹೇಶ ಇದ್ದರು.