<p><strong>ವಿಜಯಪುರ:</strong> ‘ಮುಂದುವರೆದ ಹಾಗೂ ಸಮಾಜದಲ್ಲಿ ಮೇಲಕ್ಕೇರಿದ ಮಹಿಳೆಯರು ದುರ್ಬಲ ಹಾಗೂ ಅವಕಾಶ ವಂಚಿತ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಮುಂದೆ ಬರಬೇಕು’ ಎಂದು ಹೈದರಾಬಾದ್ನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶಬಾನಾ ಕೇಸರ ಸೂರಿ ಹೇಳಿದರು.</p>.<p>ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಪುರುಷರು ಜೊತೆ ಸ್ಪರ್ಧೆ ಮಾಡುವ ಪರಿಸ್ಥಿತಿ ಇಲ್ಲ, ಅವರ ಸ್ಪರ್ಧೆ ತಮ್ಮ ತಮ್ಮಲ್ಲಿ ಇದ್ದು ದೃಢನಿರ್ಧಾರದಿಂದ ಮುನ್ನಡೆಯಬೇಕಾಗಿದೆ’ ಎಂದರು.</p>.<p>ಕರ್ನಾಟಕದಲ್ಲಿ ಮಹಿಳೆಯರ ಅಭಿವೃದ್ಧಿ ಮಟ್ಟವು ಇತರ ರಾಜ್ಯಗಳಿಗಿಂತ ತೃಪಿಕರವಾಗಿದೆ ಎಂದರು.</p>.<p>ಲಂಡನ್ನ ಮಿದುಳು ರಕ್ತನಾಳ ತಜ್ಞರಾದ ಡಾ.ಶುಜಾ ಪುಣೇಕರ ಮಾತನಾಡಿ, ‘ಪ್ರತಿ ಪುರುಷರಲ್ಲಿ ಅವನ ತಾಯಿಯ ಪ್ರತಿರೂಪ ಇರುತ್ತದೆ. ಸ್ತ್ರೀ-ಪುರುಷರು ಪ್ರಕೃತಿಯ ಎರಡು ಅವಿಭಾಜ್ಯ ಅಂಗಗಳಾಗಿದ್ದು, ಸಮತೋಲನ ಬದುಕು ಅವಶ್ಯ’ ಎಂದು ಹೇಳಿದರು.</p>.<p>ಕಾಲೇಜು ಆಡಳಿತ ಮಂಡಳಿಯ ಚೇರ್ಮನ್ ರಿಯಾಜ್ ಫಾರೂಖಿ ಮಾತನಾಡಿ, ‘ಮಾನವೀಯತೆಯ ಸೇವೆ ಎಂದರೆ ನಿಸ್ವಾರ್ಥ ಸೇವೆ. ಈ ಗುಣ ಮಹಿಳೆಯದಲ್ಲಿ ಜನ್ಮತಃ ಬಂದಿರುತ್ತದೆ. ತಾಂತ್ರಿಕತೆ ಸುಧಾರಣೆಗಳು ನಮ್ಮನ್ನು ಪರಸ್ಪರ ಒಗ್ಗೂಡಿಸಬೇಕೆ ವಿನಃ ಅವು ನಮ್ಮನ್ನು ಒಡೆಯಬಾರದು’ ಎಂದರು. </p>.<p>ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ ಯಡಹಳ್ಳಿ, ಡಾ. ಹಾಜಿರಾ ಪರವೀನ, ಡಾ. ಮಲ್ಲಿಕಾರ್ಜುನ, ಆಸ್ಮಾ ನಾಗರದಿನ್ನಿ, ಪ್ರೊ.ವಿದ್ಯಾವತಿ ಬೆನ್ನೂರ, ಮಿನಾಜ ಹಳ್ಳಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಮುಂದುವರೆದ ಹಾಗೂ ಸಮಾಜದಲ್ಲಿ ಮೇಲಕ್ಕೇರಿದ ಮಹಿಳೆಯರು ದುರ್ಬಲ ಹಾಗೂ ಅವಕಾಶ ವಂಚಿತ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಮುಂದೆ ಬರಬೇಕು’ ಎಂದು ಹೈದರಾಬಾದ್ನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶಬಾನಾ ಕೇಸರ ಸೂರಿ ಹೇಳಿದರು.</p>.<p>ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಪುರುಷರು ಜೊತೆ ಸ್ಪರ್ಧೆ ಮಾಡುವ ಪರಿಸ್ಥಿತಿ ಇಲ್ಲ, ಅವರ ಸ್ಪರ್ಧೆ ತಮ್ಮ ತಮ್ಮಲ್ಲಿ ಇದ್ದು ದೃಢನಿರ್ಧಾರದಿಂದ ಮುನ್ನಡೆಯಬೇಕಾಗಿದೆ’ ಎಂದರು.</p>.<p>ಕರ್ನಾಟಕದಲ್ಲಿ ಮಹಿಳೆಯರ ಅಭಿವೃದ್ಧಿ ಮಟ್ಟವು ಇತರ ರಾಜ್ಯಗಳಿಗಿಂತ ತೃಪಿಕರವಾಗಿದೆ ಎಂದರು.</p>.<p>ಲಂಡನ್ನ ಮಿದುಳು ರಕ್ತನಾಳ ತಜ್ಞರಾದ ಡಾ.ಶುಜಾ ಪುಣೇಕರ ಮಾತನಾಡಿ, ‘ಪ್ರತಿ ಪುರುಷರಲ್ಲಿ ಅವನ ತಾಯಿಯ ಪ್ರತಿರೂಪ ಇರುತ್ತದೆ. ಸ್ತ್ರೀ-ಪುರುಷರು ಪ್ರಕೃತಿಯ ಎರಡು ಅವಿಭಾಜ್ಯ ಅಂಗಗಳಾಗಿದ್ದು, ಸಮತೋಲನ ಬದುಕು ಅವಶ್ಯ’ ಎಂದು ಹೇಳಿದರು.</p>.<p>ಕಾಲೇಜು ಆಡಳಿತ ಮಂಡಳಿಯ ಚೇರ್ಮನ್ ರಿಯಾಜ್ ಫಾರೂಖಿ ಮಾತನಾಡಿ, ‘ಮಾನವೀಯತೆಯ ಸೇವೆ ಎಂದರೆ ನಿಸ್ವಾರ್ಥ ಸೇವೆ. ಈ ಗುಣ ಮಹಿಳೆಯದಲ್ಲಿ ಜನ್ಮತಃ ಬಂದಿರುತ್ತದೆ. ತಾಂತ್ರಿಕತೆ ಸುಧಾರಣೆಗಳು ನಮ್ಮನ್ನು ಪರಸ್ಪರ ಒಗ್ಗೂಡಿಸಬೇಕೆ ವಿನಃ ಅವು ನಮ್ಮನ್ನು ಒಡೆಯಬಾರದು’ ಎಂದರು. </p>.<p>ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ ಯಡಹಳ್ಳಿ, ಡಾ. ಹಾಜಿರಾ ಪರವೀನ, ಡಾ. ಮಲ್ಲಿಕಾರ್ಜುನ, ಆಸ್ಮಾ ನಾಗರದಿನ್ನಿ, ಪ್ರೊ.ವಿದ್ಯಾವತಿ ಬೆನ್ನೂರ, ಮಿನಾಜ ಹಳ್ಳಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>