<p><strong>ವಿಜಯಪುರ: </strong>ಪೌರಾಣಿಕ ಕಥೆಗಳು, ಪುರಾಣಗಳ ಪ್ರಕಾರ ದೇವಿ ಪಾರ್ವತಿಯ ಬೆವರಿನಿಂದ ಗಣೇಶ ಜನ್ಮ ತಳೆದ ಕಥೆ ಪ್ರತೀತಿಯಲ್ಲಿದೆ. ಈ ಕಾರಣದಿಂದಾಗಿಯೇ ಮಣ್ಣಿನಿಂದಲೇ ಮೂರ್ತಿವೆತ್ತ ವಿನಾಯಕನನ್ನು ತಲೆತಲಾಂತರದಿಂದ ಭಕ್ತರು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಪೂಜಿಸುತ್ತಾ ಬರುತ್ತಿರುವುದು ಸಂಪ್ರದಾಯ.</p>.<p>ಆಧುನಿಕ ಕಾಲಘಟ್ಟದಲ್ಲಿ ಅದರಲ್ಲೂ ಎರಡು ದಶಕಗಳಿಂದೀಚೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ವೈವಿಧ್ಯಮಯ ಮತ್ತು ಆಕರ್ಷಕ ರೂಪದಲ್ಲಿ ವಿಘ್ನ ನಿವಾರಕನ ಮೂರ್ತಿಗಳು ತಯಾರಾಗಿ ಭಕ್ತರ ಮನೆಗಳಲ್ಲಿ ಪ್ರತಿಷ್ಠಾಪನೆಯಾಗತೊಡಗಿವೆ. ಆದರೆ, ಈ ಪಿಒಪಿ ಮೂರ್ತಿಗಳು ಪರಿಸರಕ್ಕೆ ಅದರಲ್ಲೂ ವಿಶೇಷವಾಗಿ ಜಲಮೂಲಕ್ಕೆ ಮಾರಕ ಎಂಬ ಕಾರಣಕ್ಕೆ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟಕ್ಕೆ ಸರ್ಕಾರವೇ ನಿರ್ಬಂಧ ವಿಧಿಸಿದೆ.</p>.<p>ಅಷ್ಟಾದರೂ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ, ಪೂಜೆ ನಿಂತಿಲ್ಲ. ಪಿಒಪಿ ಮೂರ್ತಿಗಳಬದಲು ಮಣ್ಣಿನ ಗಣೇಶನ ಮೂರ್ತಿ ಕೂರಿಸುವ ಜಾಗೃತಿ ಎಲ್ಲೆಡೆ ನಡೆದಿದೆ. ಈ ನಡುವೆ ಇದೀಗ ಮಣ್ಣು, ಪಿಒಪಿ ಬದಲಿಗೆ ಫೈಬರ್ ರೂಪದಲ್ಲಿ ಗಣೇಶನ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿರುವುದು ವಿಶೇಷ.</p>.<p>ಅದಾಗಲೇ ‘ಗುಮ್ಮಟನಗರಿ’ ವಿಜಯಪುರದಲ್ಲಿ ಈ ವರ್ಷ ಫೈಬರ್ನಿಂದ ತಯಾರಿಸಿದನಾಲ್ಕು ಬೃಹತ್ ಗಣೇಶನ ಮೂರ್ತಿಗಳು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿ ಆರಾಧಿಸತೊಡಗಿದ್ದಾರೆ.</p>.<p>ಹೌದು, ಗಜಾನನ ಉತ್ಸವ ಮಹಾಮಂಡಳದಿಂದ ವಿಜಯಪುರ ನಗರದ ಶಿವಾಜಿಚೌಕಿಯಲ್ಲಿ 8 ಅಡಿ ಎತ್ತರದ ಫೈಬರ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂತೆಯೇ, ಡೋಬಳೆ ಗಲ್ಲಿಯಲ್ಲಿ ಮರಾಠ ಸಮಾಜದಿಂದ 10 ಅಡಿ ಎತ್ತರ, ದರ್ಬಾರ್ ಗಲ್ಲಿಯಲ್ಲಿ ಶ್ರೀ ಗಜಾನನ ಮಂಡಳಿಯಿಂದ 9 ಅಡಿ ಹಾಗೂ ಶಿವಾಜಿಪೇಟೆಯಲ್ಲಿ ಭಗತ್ ಸಿಂಗ್ ತರುಣ ಮಂಡಳಿಯಿಂದ 6 ಅಡಿ ಎತ್ತರದ ಫೈಬರ್ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.</p>.<p>‘ಪಿಒಪಿ ಅಥವಾ ಮಣ್ಣಿನ ಮೂರ್ತಿಗಳ ಸಾಗಾಟ, ಪ್ರತಿಷ್ಠಾಪನೆ ಮತ್ತು ವಿಸರ್ಜನೆಯು ಧಾರ್ಮಿಕವಾಗಿ ಬಹಳ ಸೂಕ್ಷ್ಮವಾಗಿತ್ತು. ಸಾಗಾಟದ ವೇಳೆ ಮೂರ್ತಿಯ ಯಾವುದಾದರೂ ಭಾಗಕ್ಕೆ ಭಗ್ನವಾದರೆ ಅಪಶಕುನ ಎಂದೇ ಭಾವಿಸಲಾಗುತ್ತದೆ. ಅಲ್ಲದೇ, ಪಿಒಪಿ ಮೂರ್ತಿಗಳು ಪರಿಸರಕ್ಕೆ ಮಾರಕ ಎಂಬ ವೈಜ್ಞಾನಿಕ ಕಾರಣಗಳೂ ಇವೆ. ಈ ದೃಷ್ಟಿಯಿಂದ ಫೈಬರ್ ಮೂರ್ತಿಗಳನ್ನು ಸುಲಭವಾಗಿ ಸಾಗಾಟ ಮಾಡಬಹುದು, ಪ್ರತಿಷ್ಠಾಪಿಸಬಹುದು. ಇವುಗಳಿಂದ ಪರಿಸರ ಮಾಲಿನ್ಯವೂ ಇಲ್ಲ ಎಂದು ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ, ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಪ್ರತಿ ವರ್ಷ ಹಬ್ಬಕ್ಕೆ ಮಣ್ಣಿನ ಮತ್ತು ಪಿಒಪಿ ಮೂರ್ತಿಗಳು ಬೇಕಾದರೆ ಮೂರ್ನಾಲ್ಕು ತಿಂಗಳ ಮೊದಲೇ ಮೂರ್ತಿ ತಯಾರಕರಲ್ಲಿ ಬುಕ್ಕಿಂಗ್ ಮಾಡಬೇಕಿತ್ತು. ಅವುಗಳ ದರವೂ ಹೆಚ್ಚಿತ್ತು. ಈ ದೃಷ್ಟಿಯಿಂದ ಫೈಬರ್ ಗಣೇಶನ ಮೂರ್ತಿಗಳನ್ನು ಒಮ್ಮೆ ಕೊಂಡು ತಂದರೆ ಹತ್ತಾರು ವರ್ಷ ಬಳಸಬಹುದು’ ಎನ್ನುತ್ತಾರೆ ಅಪ್ಪು ಪಟ್ಟಣಶೆಟ್ಟಿ.</p>.<p>‘ಫೈಬರ್ ಮೂರ್ತಿಯನ್ನು ವಿಸರ್ಜಿಸದೇ ಅದನ್ನು ಹಾಗೆಯೇ ಒಂದೆಡೆ ಇಡಬಹುದು. ಫೈಬರ್ ಮೂರ್ತಿಯ ಪಕ್ಕದಲೇ ಮಣ್ಣಿನ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಯಾವುದೇ ತೊಂದರೆಯಿಲ್ಲ’ ಎಂದು ಹೇಳಿದರು.</p>.<p>‘ಪುಣಿ, ಕೊಲ್ಹಾಪುರ, ಸೋಲಾಪುರದಲ್ಲಿ ನಾಲ್ಕೈದು ವರ್ಷಗಳಿಂದ ಫೈಬರ್ ಗಣೇಶನ ಮೂರ್ತಿಗಳನ್ನೇಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಇದನ್ನು ಒಮ್ಮೆ ನೋಡಿ ನಾವೂ ಸಹ ಪುಣೆಯಲ್ಲಿ ನಮಗೆ ಬೇಕಾದ ಆಕಾರದ ಗಣೇಶನನ್ನು ತಯಾರಿಸಿಕೊಂಡು ತಂದು ವಿಜಯಪುರದಲ್ಲಿ ಪ್ರತಿಷ್ಠಾಪಿಸಿದ್ದೇವೆ’ ಎಂದರು.</p>.<p>‘ಎಂಟು ಅಡಿ ಫೈಬರ್ ಗಣೇಶನ ಮೂರ್ತಿಗೆ ₹1.70 ಲಕ್ಷ ನೀಡಿ ತಂದಿದ್ದೇವೆ. ಇದನ್ನು ಹತ್ತಾರು ವರ್ಷ ಪ್ರತಿಷ್ಠಾಪಿಸಬಹುದಾಗಿದ್ದು, ಅನುಕೂಲವಾಗಿದೆ. ನೋಡಲು ಬಹಳ ಸುಂದರವಾಗಿದೆ’ ಎಂದು ಹೇಳಿದರು.</p>.<p>‘ನಗರದ ಗ್ಯಾಂಗ್ಬಾವಡಿ ಬಳಿ ಇರುವ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ಫೈಬರ್ ಗಣೇಶನ ಮೂರ್ತಿ ಇಡುತ್ತೇವೆ. ಅಲ್ಲಿ ಪ್ರತಿ ಸಂಕಷ್ಟಿಯಂದು ಪೂಜೆ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.</p>.<p>ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಇನ್ನು ಮುಂದೆ ಪರಿಸರಕ್ಕೆ ಮಾರಕವಾದ ಪಿಒಪಿ ಬೃಹತ್ ಗಣೇಶನ ಮೂರ್ತಿಗಳ ಬದಲು ಫೈಬರ್ ಮೂರ್ತಿಗಳನ್ನು ತಂದು ಕೂರಿಸುವುದು ಖರ್ಚು–ವೆಚ್ಚ, ಪರಿಸರ ಮಾಲಿನ್ಯ ತಡೆ ದೃಷ್ಟಿಯಿಂದ ಉತ್ತಮ.</p>.<p>– ಅಪ್ಪು ಪಟ್ಟಣಶೆಟ್ಟಿ, ಅಧ್ಯಕ್ಷ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ</p>.<p>ವಿಸರ್ಜನೆಯಾದ ಪಿಒಪಿ, ಮಣ್ಣಿನ ಗಣೇಶನ ಮೂರ್ತಿಗಳನ್ನು ವಿಲೇವಾರಿ ಮಾಡುವಾಗ ಎಸೆಯುವುದು, ಕೃತಕ ಹೊಂಡಗಳಲ್ಲಿ ಮುಚ್ಚುವುದು ಮಾಡುವಾಗ ಭಕ್ತರ ಭಾವನೆಗೆ ದಕ್ಕೆಯಾಗುತ್ತಿತ್ತು. ಫೈಬರ್ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಇದಕ್ಕೆ ಮುಕ್ತಿ ದೊರೆಯಲಿದೆ.</p>.<p>– ವಿಜಯ್ ಜೋಶಿ, ಸದಸ್ಯ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಪೌರಾಣಿಕ ಕಥೆಗಳು, ಪುರಾಣಗಳ ಪ್ರಕಾರ ದೇವಿ ಪಾರ್ವತಿಯ ಬೆವರಿನಿಂದ ಗಣೇಶ ಜನ್ಮ ತಳೆದ ಕಥೆ ಪ್ರತೀತಿಯಲ್ಲಿದೆ. ಈ ಕಾರಣದಿಂದಾಗಿಯೇ ಮಣ್ಣಿನಿಂದಲೇ ಮೂರ್ತಿವೆತ್ತ ವಿನಾಯಕನನ್ನು ತಲೆತಲಾಂತರದಿಂದ ಭಕ್ತರು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಪೂಜಿಸುತ್ತಾ ಬರುತ್ತಿರುವುದು ಸಂಪ್ರದಾಯ.</p>.<p>ಆಧುನಿಕ ಕಾಲಘಟ್ಟದಲ್ಲಿ ಅದರಲ್ಲೂ ಎರಡು ದಶಕಗಳಿಂದೀಚೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ವೈವಿಧ್ಯಮಯ ಮತ್ತು ಆಕರ್ಷಕ ರೂಪದಲ್ಲಿ ವಿಘ್ನ ನಿವಾರಕನ ಮೂರ್ತಿಗಳು ತಯಾರಾಗಿ ಭಕ್ತರ ಮನೆಗಳಲ್ಲಿ ಪ್ರತಿಷ್ಠಾಪನೆಯಾಗತೊಡಗಿವೆ. ಆದರೆ, ಈ ಪಿಒಪಿ ಮೂರ್ತಿಗಳು ಪರಿಸರಕ್ಕೆ ಅದರಲ್ಲೂ ವಿಶೇಷವಾಗಿ ಜಲಮೂಲಕ್ಕೆ ಮಾರಕ ಎಂಬ ಕಾರಣಕ್ಕೆ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟಕ್ಕೆ ಸರ್ಕಾರವೇ ನಿರ್ಬಂಧ ವಿಧಿಸಿದೆ.</p>.<p>ಅಷ್ಟಾದರೂ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ, ಪೂಜೆ ನಿಂತಿಲ್ಲ. ಪಿಒಪಿ ಮೂರ್ತಿಗಳಬದಲು ಮಣ್ಣಿನ ಗಣೇಶನ ಮೂರ್ತಿ ಕೂರಿಸುವ ಜಾಗೃತಿ ಎಲ್ಲೆಡೆ ನಡೆದಿದೆ. ಈ ನಡುವೆ ಇದೀಗ ಮಣ್ಣು, ಪಿಒಪಿ ಬದಲಿಗೆ ಫೈಬರ್ ರೂಪದಲ್ಲಿ ಗಣೇಶನ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿರುವುದು ವಿಶೇಷ.</p>.<p>ಅದಾಗಲೇ ‘ಗುಮ್ಮಟನಗರಿ’ ವಿಜಯಪುರದಲ್ಲಿ ಈ ವರ್ಷ ಫೈಬರ್ನಿಂದ ತಯಾರಿಸಿದನಾಲ್ಕು ಬೃಹತ್ ಗಣೇಶನ ಮೂರ್ತಿಗಳು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿ ಆರಾಧಿಸತೊಡಗಿದ್ದಾರೆ.</p>.<p>ಹೌದು, ಗಜಾನನ ಉತ್ಸವ ಮಹಾಮಂಡಳದಿಂದ ವಿಜಯಪುರ ನಗರದ ಶಿವಾಜಿಚೌಕಿಯಲ್ಲಿ 8 ಅಡಿ ಎತ್ತರದ ಫೈಬರ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂತೆಯೇ, ಡೋಬಳೆ ಗಲ್ಲಿಯಲ್ಲಿ ಮರಾಠ ಸಮಾಜದಿಂದ 10 ಅಡಿ ಎತ್ತರ, ದರ್ಬಾರ್ ಗಲ್ಲಿಯಲ್ಲಿ ಶ್ರೀ ಗಜಾನನ ಮಂಡಳಿಯಿಂದ 9 ಅಡಿ ಹಾಗೂ ಶಿವಾಜಿಪೇಟೆಯಲ್ಲಿ ಭಗತ್ ಸಿಂಗ್ ತರುಣ ಮಂಡಳಿಯಿಂದ 6 ಅಡಿ ಎತ್ತರದ ಫೈಬರ್ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.</p>.<p>‘ಪಿಒಪಿ ಅಥವಾ ಮಣ್ಣಿನ ಮೂರ್ತಿಗಳ ಸಾಗಾಟ, ಪ್ರತಿಷ್ಠಾಪನೆ ಮತ್ತು ವಿಸರ್ಜನೆಯು ಧಾರ್ಮಿಕವಾಗಿ ಬಹಳ ಸೂಕ್ಷ್ಮವಾಗಿತ್ತು. ಸಾಗಾಟದ ವೇಳೆ ಮೂರ್ತಿಯ ಯಾವುದಾದರೂ ಭಾಗಕ್ಕೆ ಭಗ್ನವಾದರೆ ಅಪಶಕುನ ಎಂದೇ ಭಾವಿಸಲಾಗುತ್ತದೆ. ಅಲ್ಲದೇ, ಪಿಒಪಿ ಮೂರ್ತಿಗಳು ಪರಿಸರಕ್ಕೆ ಮಾರಕ ಎಂಬ ವೈಜ್ಞಾನಿಕ ಕಾರಣಗಳೂ ಇವೆ. ಈ ದೃಷ್ಟಿಯಿಂದ ಫೈಬರ್ ಮೂರ್ತಿಗಳನ್ನು ಸುಲಭವಾಗಿ ಸಾಗಾಟ ಮಾಡಬಹುದು, ಪ್ರತಿಷ್ಠಾಪಿಸಬಹುದು. ಇವುಗಳಿಂದ ಪರಿಸರ ಮಾಲಿನ್ಯವೂ ಇಲ್ಲ ಎಂದು ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ, ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಪ್ರತಿ ವರ್ಷ ಹಬ್ಬಕ್ಕೆ ಮಣ್ಣಿನ ಮತ್ತು ಪಿಒಪಿ ಮೂರ್ತಿಗಳು ಬೇಕಾದರೆ ಮೂರ್ನಾಲ್ಕು ತಿಂಗಳ ಮೊದಲೇ ಮೂರ್ತಿ ತಯಾರಕರಲ್ಲಿ ಬುಕ್ಕಿಂಗ್ ಮಾಡಬೇಕಿತ್ತು. ಅವುಗಳ ದರವೂ ಹೆಚ್ಚಿತ್ತು. ಈ ದೃಷ್ಟಿಯಿಂದ ಫೈಬರ್ ಗಣೇಶನ ಮೂರ್ತಿಗಳನ್ನು ಒಮ್ಮೆ ಕೊಂಡು ತಂದರೆ ಹತ್ತಾರು ವರ್ಷ ಬಳಸಬಹುದು’ ಎನ್ನುತ್ತಾರೆ ಅಪ್ಪು ಪಟ್ಟಣಶೆಟ್ಟಿ.</p>.<p>‘ಫೈಬರ್ ಮೂರ್ತಿಯನ್ನು ವಿಸರ್ಜಿಸದೇ ಅದನ್ನು ಹಾಗೆಯೇ ಒಂದೆಡೆ ಇಡಬಹುದು. ಫೈಬರ್ ಮೂರ್ತಿಯ ಪಕ್ಕದಲೇ ಮಣ್ಣಿನ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಯಾವುದೇ ತೊಂದರೆಯಿಲ್ಲ’ ಎಂದು ಹೇಳಿದರು.</p>.<p>‘ಪುಣಿ, ಕೊಲ್ಹಾಪುರ, ಸೋಲಾಪುರದಲ್ಲಿ ನಾಲ್ಕೈದು ವರ್ಷಗಳಿಂದ ಫೈಬರ್ ಗಣೇಶನ ಮೂರ್ತಿಗಳನ್ನೇಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಇದನ್ನು ಒಮ್ಮೆ ನೋಡಿ ನಾವೂ ಸಹ ಪುಣೆಯಲ್ಲಿ ನಮಗೆ ಬೇಕಾದ ಆಕಾರದ ಗಣೇಶನನ್ನು ತಯಾರಿಸಿಕೊಂಡು ತಂದು ವಿಜಯಪುರದಲ್ಲಿ ಪ್ರತಿಷ್ಠಾಪಿಸಿದ್ದೇವೆ’ ಎಂದರು.</p>.<p>‘ಎಂಟು ಅಡಿ ಫೈಬರ್ ಗಣೇಶನ ಮೂರ್ತಿಗೆ ₹1.70 ಲಕ್ಷ ನೀಡಿ ತಂದಿದ್ದೇವೆ. ಇದನ್ನು ಹತ್ತಾರು ವರ್ಷ ಪ್ರತಿಷ್ಠಾಪಿಸಬಹುದಾಗಿದ್ದು, ಅನುಕೂಲವಾಗಿದೆ. ನೋಡಲು ಬಹಳ ಸುಂದರವಾಗಿದೆ’ ಎಂದು ಹೇಳಿದರು.</p>.<p>‘ನಗರದ ಗ್ಯಾಂಗ್ಬಾವಡಿ ಬಳಿ ಇರುವ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ಫೈಬರ್ ಗಣೇಶನ ಮೂರ್ತಿ ಇಡುತ್ತೇವೆ. ಅಲ್ಲಿ ಪ್ರತಿ ಸಂಕಷ್ಟಿಯಂದು ಪೂಜೆ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.</p>.<p>ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಇನ್ನು ಮುಂದೆ ಪರಿಸರಕ್ಕೆ ಮಾರಕವಾದ ಪಿಒಪಿ ಬೃಹತ್ ಗಣೇಶನ ಮೂರ್ತಿಗಳ ಬದಲು ಫೈಬರ್ ಮೂರ್ತಿಗಳನ್ನು ತಂದು ಕೂರಿಸುವುದು ಖರ್ಚು–ವೆಚ್ಚ, ಪರಿಸರ ಮಾಲಿನ್ಯ ತಡೆ ದೃಷ್ಟಿಯಿಂದ ಉತ್ತಮ.</p>.<p>– ಅಪ್ಪು ಪಟ್ಟಣಶೆಟ್ಟಿ, ಅಧ್ಯಕ್ಷ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ</p>.<p>ವಿಸರ್ಜನೆಯಾದ ಪಿಒಪಿ, ಮಣ್ಣಿನ ಗಣೇಶನ ಮೂರ್ತಿಗಳನ್ನು ವಿಲೇವಾರಿ ಮಾಡುವಾಗ ಎಸೆಯುವುದು, ಕೃತಕ ಹೊಂಡಗಳಲ್ಲಿ ಮುಚ್ಚುವುದು ಮಾಡುವಾಗ ಭಕ್ತರ ಭಾವನೆಗೆ ದಕ್ಕೆಯಾಗುತ್ತಿತ್ತು. ಫೈಬರ್ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಇದಕ್ಕೆ ಮುಕ್ತಿ ದೊರೆಯಲಿದೆ.</p>.<p>– ವಿಜಯ್ ಜೋಶಿ, ಸದಸ್ಯ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>