<p><strong>ವಿಜಯಪುರ: </strong>ನಗರದ ಮನಗೂಳಿ ಅಗಸಿ ಸಮೀಪದ ಸ್ಮಶಾನದ ಬಳಿ ಇರುವ ಬಿಡಿಎ ಕಾಂಪ್ಲೆಕ್ ಎದುರು ಬುಧವಾರ ರಾತ್ರಿ ಶೂಟ್ಔಟ್ ಪ್ರಕರಣ ನಡೆದಿದ್ದು, ಘಟನೆಯಿಂದ ಗುಮ್ಮಟನಗರಿ ಜನ ಬೆಚ್ಚಿಬಿದ್ದಿದ್ದಾರೆ.</p>.<p>ಹಣಕಾಸಿನ ವಿಷಯವಾಗಿ ವ್ಯಕ್ತಿಗಳಿಬ್ಬರು ತಮ್ಮ ಸಂಬಂಧಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಜೊತೆಗೆ ಮತ್ತೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.</p>.<p>ಘಟನೆಯಲ್ಲಿ ಪದ್ದು ರಾಠೋಡ ಎಂಬುವವರ ಎದೆಗೆ ಒಂದು ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೇಗಂ ತಲಾಬ್ ತಾಂಡಾದ ಸಿವಿಲ್ ಗುತ್ತಿಗೆದಾರ ಅಶೋಕ ರಾಠೋಡ ಎಂಬುವವರ ಕೈಗೆ ಚಾಕುವಿನಿಂದ ಇರಿಯಲಾಗಿದೆ.</p>.<p>ಪ್ರಕರಣದ ಸಂಬಂಧ ಮನಗೂಳಿ ಅಗಸಿಯ ತುಳಸಿರಾಮ ಹರಿಜನ ಮತ್ತು ವಿಕಾಸ ಹಾಗೂ ಇನ್ನಿಬ್ಬರು ಆರೋಪಿಗಳ ವಿರುದ್ಧ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕಾಂಗ್ರೆಸ್ ಮುಖಂಡ ಮಹಾದೇವ ಬೈರಗೊಂಡ ಮೇಲೆ ನಡೆದ ಶೂಟ್ಔಟ್ ಪ್ರಕರಣದ ಬೆನ್ನೆಲ್ಲೇ ನಗರದಲ್ಲಿ ಮತ್ತೊಂದು ಶೂಟ್ಔಟ್ ಪ್ರಕರಣ ನಡೆದಿರುವುದು ಜನರನ್ನು ಆತಂಕ್ಕೆ ದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ನಗರದ ಮನಗೂಳಿ ಅಗಸಿ ಸಮೀಪದ ಸ್ಮಶಾನದ ಬಳಿ ಇರುವ ಬಿಡಿಎ ಕಾಂಪ್ಲೆಕ್ ಎದುರು ಬುಧವಾರ ರಾತ್ರಿ ಶೂಟ್ಔಟ್ ಪ್ರಕರಣ ನಡೆದಿದ್ದು, ಘಟನೆಯಿಂದ ಗುಮ್ಮಟನಗರಿ ಜನ ಬೆಚ್ಚಿಬಿದ್ದಿದ್ದಾರೆ.</p>.<p>ಹಣಕಾಸಿನ ವಿಷಯವಾಗಿ ವ್ಯಕ್ತಿಗಳಿಬ್ಬರು ತಮ್ಮ ಸಂಬಂಧಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಜೊತೆಗೆ ಮತ್ತೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.</p>.<p>ಘಟನೆಯಲ್ಲಿ ಪದ್ದು ರಾಠೋಡ ಎಂಬುವವರ ಎದೆಗೆ ಒಂದು ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೇಗಂ ತಲಾಬ್ ತಾಂಡಾದ ಸಿವಿಲ್ ಗುತ್ತಿಗೆದಾರ ಅಶೋಕ ರಾಠೋಡ ಎಂಬುವವರ ಕೈಗೆ ಚಾಕುವಿನಿಂದ ಇರಿಯಲಾಗಿದೆ.</p>.<p>ಪ್ರಕರಣದ ಸಂಬಂಧ ಮನಗೂಳಿ ಅಗಸಿಯ ತುಳಸಿರಾಮ ಹರಿಜನ ಮತ್ತು ವಿಕಾಸ ಹಾಗೂ ಇನ್ನಿಬ್ಬರು ಆರೋಪಿಗಳ ವಿರುದ್ಧ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕಾಂಗ್ರೆಸ್ ಮುಖಂಡ ಮಹಾದೇವ ಬೈರಗೊಂಡ ಮೇಲೆ ನಡೆದ ಶೂಟ್ಔಟ್ ಪ್ರಕರಣದ ಬೆನ್ನೆಲ್ಲೇ ನಗರದಲ್ಲಿ ಮತ್ತೊಂದು ಶೂಟ್ಔಟ್ ಪ್ರಕರಣ ನಡೆದಿರುವುದು ಜನರನ್ನು ಆತಂಕ್ಕೆ ದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>