ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಜಾರ ಅಭಿವೃದ್ಧಿ ನಿಗಮ ರಚನೆಗೆ ಆಗ್ರಹ

ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
Last Updated 20 ಜನವರಿ 2021, 11:25 IST
ಅಕ್ಷರ ಗಾತ್ರ

ವಿಜಯಪುರ: ನದಾಫ/ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿ ರಚನೆ ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದಿಂದ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಕೆ.ನದಾಫ್‌ ಮಾತನಾಡಿ, ನದಾಫ, ಪಿಂಜಾರ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಸಮಾಜದ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ಸರ್ಕಾರವು ನಿಗಮ, ಮಂಡಳಿ ರಚಿಸುವ ಅವಶ್ಯತೆ ಇದೆ ಎಂದರು.

ಹಲವಾರು ವರ್ಷಗಳಿಂದ ನಿರಂತರವಾಗಿ ಈ ಬೇಡಿಕೆಗಳನ್ನು ಪೂರೈಸಲು ವಿನಂತಿಸುತ್ತಾ ಬಂದಿದ್ದರೂ ಇದುವರೆಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ನದಾಫ್‌ ಮತ್ತು ಪಿಂಜಾರ ಸಮಾಜ ಅತಿ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜದಲ್ಲಿ ಶೇ 95 ರಷ್ಟು ಜನ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಯೋಜನೆಗಳು ಸಮಾಜಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂದು ಹೇಳಿದರು.

ಒಂದು ವೇಳೆ ನಮ್ಮ ಬೇಡಿಕೆ ಕಡೆಗಣಿಸಿದಲ್ಲಿ ರಾಜ್ಯದಾದ್ಯಂತ ಧರಣಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ವಕೀಲರಾದ ಮೀರಾ ನದಾಫ್‌, ಅಯೂಬ್‌ಖಾನ್‌ ಪಿ. ನದಾಫ್‌, ಪರೀದ ಮೌಲಾಸಾಬ ನದಾಫ್‌, ಪೀರಸಾಬ್‌ ಅಮೀನಸಾಬ್‌ ನದಾಫ್‌, ಮೈಹಿಬೂಬ್‌ ರುಕ್ಮೋದ್ದೀನ್‌ ಹತ್ತಳ್ಳಿ, ಮೌಲಾಸಾಬ್‌ ನದಾಫ್‌, ಮಕ್ತುಮಸಾಬ್‌ ನದಾಫ್‌, ದಾವಲಮಲೀಕ್‌ ನದಾಫ್‌, ರಾಜಾಭಕ್ಷಿ ನದಾಫ್‌, ಅಲ್ಲಿಸಾಬ್‌ ನದಾಫ್‌, ಇಸ್ಮಾಯಿಲಸಾಬ್‌ ನದಾಫ್‌, ಡಾ. ಬಂದೇನವಾಜ್‌ ಕೊರಬು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT