<p><strong>ವಿಜಯಪುರ</strong>: ನಯನಗಳಿಗೆ ತಂಪು, ಕರಣಗಳಿಗೆ ಇಂಪು ನೀಡುವ ಜಲ ವೈಭವ... ಈ ಸೌಂದರ್ಯಕ್ಕೆ ಇಂಬು ನೀಡುವ ತೆಂಗಿನ ವೃಕ್ಷ ರಾಶಿ...ವಿದೇಶಿ ಪ್ರವಾಸಿ ತಾಣಗಳನ್ನು ನೆನಪಿಸುವ ವಾಕಿಂಗ್ ಟ್ರ್ಯಾಕ್...ಜೊತೆಗೆ ಬೆಳಕಿನ ಸ್ಪರ್ಶ ನೀಡುವ ಕಂದೀಲು ಮಾದರಿಯ ವಿದ್ಯುತ್ ದೀಪಗಳ ತೋರಣ...</p>.<p>ಇದೇನೂ ಸ್ವರ್ಗದ ಸೌಂದರ್ಯ ವಿವರಣೆಯೋ, ವಿಶೇಷಣವೋ ಎಂದು ನೀವೊಂದುಕೊಂಡರೆ ಅದು ತಪ್ಪು....!</p>.<p>ಈಗ ಕಸದಿಂದಲೇ ಆವರಿಸಿದ ಗಗನ್ ಮಹಲ್ ಕಂದಕದಲ್ಲಿ ಬೋಟಿಂಗ್ ವ್ಯವಸ್ಥೆ ನಿರ್ಮಾಣಕ್ಕಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ನೀಡಿರುವ ನೀಲ ನಕ್ಷೆ.</p>.<p>ಇಲಾಖೆ ರೂಪಿಸಿರುವ ನೀಲನಕ್ಷೆ ನೋಡಿದಾಗ ಒಂದು ಕ್ಷಣ ಪ್ರತಿಯೊಬ್ಬರು ಮಂತ್ರ ಮುಗ್ಧವಾಗುವುದಂತೂ ಸತ್ಯ. ಆದರೆ, ಇದು ಸಾಕಾರ ರೂಪಕ್ಕೆ ಬರಲು ಒಂದೇ ಮೆಟ್ಟಿಲು ಬಾಕಿ ಇದೆ. ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆಯಾದರೆ ಕೆಲವೇ ದಿನಗಳಲ್ಲಿ ಈ ಸ್ವರ್ಗ ರೂಪಕ ವಿಜಯಪುರದಲ್ಲಿ ಮೈತಳೆಯುವುದರಲ್ಲಿ ಎರಡು ಮಾತಿಲ್ಲ.</p>.<p><strong>ದೋಣಿ ವಿಹಾರಕ್ಕೂ ಮುನ್ನಾ:</strong></p>.<p>ಗಗನ್ ಮಹಲ್ ಕೋಟೆಗೊಡೆಗೆ ಹೊಂದಿಕೊಂಡಿರುವ ಕೊಳದಲ್ಲಿ ದೋಣಿ ವಿಹಾರ ಹಾಗೂ ಅದಕ್ಕೆ ಪೂರಕವಾಗಿ ಉದ್ಯಾನ ಪ್ರಗತಿಯ ಪ್ರಸ್ತಾವನೆ ಇಂದು ನಿನ್ನೆಯದಲ್ಲ, ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಲೇ ಇದೆ.</p>.<p>ಆದರೆ, ಈ ವಿಷಯವನ್ನು ಈ ಬಾರಿ ಪ್ರವಾಸೋದ್ಯಮ ಇಲಾಖೆ ಮಾತ್ರ ಗಂಭೀರವಾಗಿ ಪರಿಗಣಿಸಿ ಗಗನ್ ಮಹಲ್ ಕಂದಕಕ್ಕೆ ದೋಣಿ ವಿಹಾರ ಆರಂಭಿಸುವಂತೆ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.</p>.<p>ಆಗ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪ್ರಧಾನ ನಿರ್ದೇಶಕ (ಡೈರೆಕ್ಟರ್ ಜನರಲ್) ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡಲು ಸಭೆಯೊಂದನ್ನು ಕರೆದು, ಪ್ರವಾಸೋದ್ಯಮ ಇಲಾಖೆಯ ಡಿಟಿಸಿ ಅನೀಲಕುಮಾರ ಹಾಗೂ ವಾಸ್ತುಶಿಲ್ಪ ತಜ್ಞ ಸತೀಶ ಅವರು ಯಾವ ರೀತಿ ಈ ಭಾಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಬಗ್ಗೆ ₹1.5 ಕೋಟಿ ಮೊತ್ತದ ಕಾಮಗಾರಿಯ ಇಂಚಿಂಚು ವಿವರವನ್ನು ಒದಗಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ ತಿಳಿಸಿದರು.</p>.<p>ಪ್ರಾಜೆಕ್ಟ್ ಕುರಿತು ಮಾಹಿತಿ ಪಡೆದ ಪುರಾತತ್ವ ಇಲಾಖೆ ಪರೋಕ್ಷ ಅಸ್ತು ಎಂದು ಷರತ್ತೊಂದನ್ನು ವಿಧಿಸಿತ್ತು. ಪೂರಕವಾಗಿ ಸೌಲಭ್ಯ ಕಲ್ಪಿಸಿದ ನಂತರ ದೋಣಿ ವಿಹಾರಕ್ಕೆ ಅನುಮತಿ ನೀಡುವ ಬಗ್ಗೆ ಕಳೆದ ಜುಲೈ 18 ರಂದು ಈ ಯೋಜನೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.</p>.<p>ಇನ್ನು ಪುರಾತತ್ವ ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಪುರಾತತ್ವ ಸರ್ವೇಕ್ಷಣಾ ಇಲಾಖೆ (ದಕ್ಷಿಣ ವಲಯ)ದ ಪ್ರಾದೇಶಿಕ ನಿರ್ದೇಶಕರು ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆಯೂ ನಡೆಸಿಯಾಗಿದೆ, ಈಗ ಸರ್ಕಾರಿ ಹಂತದಲ್ಲಿ ಈ ಅಭಿವೃದ್ಧಿ ಕಾಮಗಾರಿಗೆ ₹1.5 ಕೋಟಿ ಬಿಡುಗಡೆಯಾಗಬೇಕಿದ್ದು, ಈ ಅನುದಾನ ಬಿಡುಗಡೆಯಾದರೆ ಗಗನ್ ಮಹಲ್ ಆವರಣದಲ್ಲಿ ದೋಣಿ ವಿಹಾರ ಆರಂಭಗೊಳ್ಳಲಿದೆ ಎಂದರು.</p>.<p>ಕೇವಲ ದೋಣಿ ವಿಹಾರಕ್ಕಷ್ಟೇ ಪ್ರವಾಸೋದ್ಯಮ ಇಲಾಖೆ ಈ ಪ್ರಾಜೆಕ್ಟ್ ಸೀಮಿತಗೊಳಿಸಿಲ್ಲ, ಕೋಟೆಗೋಡೆಯಲ್ಲಿ ಲೇಸರ್ ಶೋ ವೈಭವನ್ನು ಅರಳಿಸಿ ಅದಕ್ಕೆ ಧ್ವನಿ-ಬೆಳಕಿನ ವ್ಯವಸ್ಥೆ ಕಲ್ಪಿಸುವ ವಿಶೇಷ ಯೋಜನೆಯೂ ಅದರಲ್ಲಿ ಸೇರ್ಪಡೆಯಾಗಿದೆ ಎಂದು ಹೇಳಿದರು. </p>.<p><strong>ಗಗನ್ ಮಹಲ್ನಲ್ಲಿ ದೋಣಿ ವಿಹಾರಕ್ಕೆ ನಿಯಮಾವಳಿಗಳನ್ನು ವಿಧಿಸಿ ಪುರಾತತ್ವ ಇಲಾಖೆ ಒಪ್ಪಿಗೆ ನೀಡಿದೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಡಿಪಿಆರ್ ರಚಿಸಿದ್ದು ₹1.5 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ </strong></p><p><strong> -ಅರವಿಂದ ಹೂಗಾರ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ನಯನಗಳಿಗೆ ತಂಪು, ಕರಣಗಳಿಗೆ ಇಂಪು ನೀಡುವ ಜಲ ವೈಭವ... ಈ ಸೌಂದರ್ಯಕ್ಕೆ ಇಂಬು ನೀಡುವ ತೆಂಗಿನ ವೃಕ್ಷ ರಾಶಿ...ವಿದೇಶಿ ಪ್ರವಾಸಿ ತಾಣಗಳನ್ನು ನೆನಪಿಸುವ ವಾಕಿಂಗ್ ಟ್ರ್ಯಾಕ್...ಜೊತೆಗೆ ಬೆಳಕಿನ ಸ್ಪರ್ಶ ನೀಡುವ ಕಂದೀಲು ಮಾದರಿಯ ವಿದ್ಯುತ್ ದೀಪಗಳ ತೋರಣ...</p>.<p>ಇದೇನೂ ಸ್ವರ್ಗದ ಸೌಂದರ್ಯ ವಿವರಣೆಯೋ, ವಿಶೇಷಣವೋ ಎಂದು ನೀವೊಂದುಕೊಂಡರೆ ಅದು ತಪ್ಪು....!</p>.<p>ಈಗ ಕಸದಿಂದಲೇ ಆವರಿಸಿದ ಗಗನ್ ಮಹಲ್ ಕಂದಕದಲ್ಲಿ ಬೋಟಿಂಗ್ ವ್ಯವಸ್ಥೆ ನಿರ್ಮಾಣಕ್ಕಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ನೀಡಿರುವ ನೀಲ ನಕ್ಷೆ.</p>.<p>ಇಲಾಖೆ ರೂಪಿಸಿರುವ ನೀಲನಕ್ಷೆ ನೋಡಿದಾಗ ಒಂದು ಕ್ಷಣ ಪ್ರತಿಯೊಬ್ಬರು ಮಂತ್ರ ಮುಗ್ಧವಾಗುವುದಂತೂ ಸತ್ಯ. ಆದರೆ, ಇದು ಸಾಕಾರ ರೂಪಕ್ಕೆ ಬರಲು ಒಂದೇ ಮೆಟ್ಟಿಲು ಬಾಕಿ ಇದೆ. ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆಯಾದರೆ ಕೆಲವೇ ದಿನಗಳಲ್ಲಿ ಈ ಸ್ವರ್ಗ ರೂಪಕ ವಿಜಯಪುರದಲ್ಲಿ ಮೈತಳೆಯುವುದರಲ್ಲಿ ಎರಡು ಮಾತಿಲ್ಲ.</p>.<p><strong>ದೋಣಿ ವಿಹಾರಕ್ಕೂ ಮುನ್ನಾ:</strong></p>.<p>ಗಗನ್ ಮಹಲ್ ಕೋಟೆಗೊಡೆಗೆ ಹೊಂದಿಕೊಂಡಿರುವ ಕೊಳದಲ್ಲಿ ದೋಣಿ ವಿಹಾರ ಹಾಗೂ ಅದಕ್ಕೆ ಪೂರಕವಾಗಿ ಉದ್ಯಾನ ಪ್ರಗತಿಯ ಪ್ರಸ್ತಾವನೆ ಇಂದು ನಿನ್ನೆಯದಲ್ಲ, ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಲೇ ಇದೆ.</p>.<p>ಆದರೆ, ಈ ವಿಷಯವನ್ನು ಈ ಬಾರಿ ಪ್ರವಾಸೋದ್ಯಮ ಇಲಾಖೆ ಮಾತ್ರ ಗಂಭೀರವಾಗಿ ಪರಿಗಣಿಸಿ ಗಗನ್ ಮಹಲ್ ಕಂದಕಕ್ಕೆ ದೋಣಿ ವಿಹಾರ ಆರಂಭಿಸುವಂತೆ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.</p>.<p>ಆಗ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪ್ರಧಾನ ನಿರ್ದೇಶಕ (ಡೈರೆಕ್ಟರ್ ಜನರಲ್) ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡಲು ಸಭೆಯೊಂದನ್ನು ಕರೆದು, ಪ್ರವಾಸೋದ್ಯಮ ಇಲಾಖೆಯ ಡಿಟಿಸಿ ಅನೀಲಕುಮಾರ ಹಾಗೂ ವಾಸ್ತುಶಿಲ್ಪ ತಜ್ಞ ಸತೀಶ ಅವರು ಯಾವ ರೀತಿ ಈ ಭಾಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಬಗ್ಗೆ ₹1.5 ಕೋಟಿ ಮೊತ್ತದ ಕಾಮಗಾರಿಯ ಇಂಚಿಂಚು ವಿವರವನ್ನು ಒದಗಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ ತಿಳಿಸಿದರು.</p>.<p>ಪ್ರಾಜೆಕ್ಟ್ ಕುರಿತು ಮಾಹಿತಿ ಪಡೆದ ಪುರಾತತ್ವ ಇಲಾಖೆ ಪರೋಕ್ಷ ಅಸ್ತು ಎಂದು ಷರತ್ತೊಂದನ್ನು ವಿಧಿಸಿತ್ತು. ಪೂರಕವಾಗಿ ಸೌಲಭ್ಯ ಕಲ್ಪಿಸಿದ ನಂತರ ದೋಣಿ ವಿಹಾರಕ್ಕೆ ಅನುಮತಿ ನೀಡುವ ಬಗ್ಗೆ ಕಳೆದ ಜುಲೈ 18 ರಂದು ಈ ಯೋಜನೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.</p>.<p>ಇನ್ನು ಪುರಾತತ್ವ ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಪುರಾತತ್ವ ಸರ್ವೇಕ್ಷಣಾ ಇಲಾಖೆ (ದಕ್ಷಿಣ ವಲಯ)ದ ಪ್ರಾದೇಶಿಕ ನಿರ್ದೇಶಕರು ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆಯೂ ನಡೆಸಿಯಾಗಿದೆ, ಈಗ ಸರ್ಕಾರಿ ಹಂತದಲ್ಲಿ ಈ ಅಭಿವೃದ್ಧಿ ಕಾಮಗಾರಿಗೆ ₹1.5 ಕೋಟಿ ಬಿಡುಗಡೆಯಾಗಬೇಕಿದ್ದು, ಈ ಅನುದಾನ ಬಿಡುಗಡೆಯಾದರೆ ಗಗನ್ ಮಹಲ್ ಆವರಣದಲ್ಲಿ ದೋಣಿ ವಿಹಾರ ಆರಂಭಗೊಳ್ಳಲಿದೆ ಎಂದರು.</p>.<p>ಕೇವಲ ದೋಣಿ ವಿಹಾರಕ್ಕಷ್ಟೇ ಪ್ರವಾಸೋದ್ಯಮ ಇಲಾಖೆ ಈ ಪ್ರಾಜೆಕ್ಟ್ ಸೀಮಿತಗೊಳಿಸಿಲ್ಲ, ಕೋಟೆಗೋಡೆಯಲ್ಲಿ ಲೇಸರ್ ಶೋ ವೈಭವನ್ನು ಅರಳಿಸಿ ಅದಕ್ಕೆ ಧ್ವನಿ-ಬೆಳಕಿನ ವ್ಯವಸ್ಥೆ ಕಲ್ಪಿಸುವ ವಿಶೇಷ ಯೋಜನೆಯೂ ಅದರಲ್ಲಿ ಸೇರ್ಪಡೆಯಾಗಿದೆ ಎಂದು ಹೇಳಿದರು. </p>.<p><strong>ಗಗನ್ ಮಹಲ್ನಲ್ಲಿ ದೋಣಿ ವಿಹಾರಕ್ಕೆ ನಿಯಮಾವಳಿಗಳನ್ನು ವಿಧಿಸಿ ಪುರಾತತ್ವ ಇಲಾಖೆ ಒಪ್ಪಿಗೆ ನೀಡಿದೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಡಿಪಿಆರ್ ರಚಿಸಿದ್ದು ₹1.5 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ </strong></p><p><strong> -ಅರವಿಂದ ಹೂಗಾರ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>