<p><strong>ಸಿಂದಗಿ</strong>: ರಾಜ್ಯದ ತೋಟಗಾರಿಕೆ ಸಚಿವರಾಗಿದ್ದ ನನ್ನ ತಂದೆ ದಿವಂಗತ ಎಂ.ಸಿ.ಮನಗೂಳಿ ಅವರ ಕನಸಿನ ಕೂಸು ಆಲಮೇಲ ತೋಟಗಾರಿಕೆ ಕಾಲೇಜಿಗೆ ಮಂಜೂರಾತಿ ಪ್ರಸ್ತುತ ಬಜೆಟ್ ನಲ್ಲಿ ಘೋಷಣೆಯಾಗಿರುವುದು ಅಪಾರ ಸಂತಸ ತರಿಸಿದೆ. ಮತಕ್ಷೇತ್ರದ ಜನತೆಯ ಬಹು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.</p>.<p>ಬಜೆಟ್ ಘೋಷಣೆಗೊಂಡ ನಂತರ ಶಾಸಕರು ದೂರವಾಣಿ ಮೂಲಕ 'ಪ್ರಜಾವಾಣಿ ಪ್ರತಿನಿಧಿ' ಜೊತೆಗೆ ಮಾತನಾಡಿ, ಬೃಹತ್ ಐದು ಗ್ಯಾರಂಟಿಗಳ ಆರ್ಥಿಕ ಹೊರೆ ಮಧ್ಯೆದಲ್ಲಿಯೂ ಸಾಮಾಜಿಕ ನ್ಯಾಯದಡಿ ರಾಜ್ಯದ ಜನತೆ ಮೆಚ್ಚುವಂತಹ ಎಲ್ಲ ರಂಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದೊಂದು ಕರ್ನಾಟಕ ಮಾದರಿ ಅಭಿವೃದ್ದಿಯ ಹೊಸ ಹೆಜ್ಜೆಯ ಬಜೆಟ್ ಆಗಿದೆ. ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಮನಗೂಳಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ</strong>: ರಾಜ್ಯದ ತೋಟಗಾರಿಕೆ ಸಚಿವರಾಗಿದ್ದ ನನ್ನ ತಂದೆ ದಿವಂಗತ ಎಂ.ಸಿ.ಮನಗೂಳಿ ಅವರ ಕನಸಿನ ಕೂಸು ಆಲಮೇಲ ತೋಟಗಾರಿಕೆ ಕಾಲೇಜಿಗೆ ಮಂಜೂರಾತಿ ಪ್ರಸ್ತುತ ಬಜೆಟ್ ನಲ್ಲಿ ಘೋಷಣೆಯಾಗಿರುವುದು ಅಪಾರ ಸಂತಸ ತರಿಸಿದೆ. ಮತಕ್ಷೇತ್ರದ ಜನತೆಯ ಬಹು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.</p>.<p>ಬಜೆಟ್ ಘೋಷಣೆಗೊಂಡ ನಂತರ ಶಾಸಕರು ದೂರವಾಣಿ ಮೂಲಕ 'ಪ್ರಜಾವಾಣಿ ಪ್ರತಿನಿಧಿ' ಜೊತೆಗೆ ಮಾತನಾಡಿ, ಬೃಹತ್ ಐದು ಗ್ಯಾರಂಟಿಗಳ ಆರ್ಥಿಕ ಹೊರೆ ಮಧ್ಯೆದಲ್ಲಿಯೂ ಸಾಮಾಜಿಕ ನ್ಯಾಯದಡಿ ರಾಜ್ಯದ ಜನತೆ ಮೆಚ್ಚುವಂತಹ ಎಲ್ಲ ರಂಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದೊಂದು ಕರ್ನಾಟಕ ಮಾದರಿ ಅಭಿವೃದ್ದಿಯ ಹೊಸ ಹೆಜ್ಜೆಯ ಬಜೆಟ್ ಆಗಿದೆ. ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಮನಗೂಳಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>