ಬಜೆಟ್ ಘೋಷಣೆಗೊಂಡ ನಂತರ ಶಾಸಕರು ದೂರವಾಣಿ ಮೂಲಕ 'ಪ್ರಜಾವಾಣಿ ಪ್ರತಿನಿಧಿ' ಜೊತೆಗೆ ಮಾತನಾಡಿ, ಬೃಹತ್ ಐದು ಗ್ಯಾರಂಟಿಗಳ ಆರ್ಥಿಕ ಹೊರೆ ಮಧ್ಯೆದಲ್ಲಿಯೂ ಸಾಮಾಜಿಕ ನ್ಯಾಯದಡಿ ರಾಜ್ಯದ ಜನತೆ ಮೆಚ್ಚುವಂತಹ ಎಲ್ಲ ರಂಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದೊಂದು ಕರ್ನಾಟಕ ಮಾದರಿ ಅಭಿವೃದ್ದಿಯ ಹೊಸ ಹೆಜ್ಜೆಯ ಬಜೆಟ್ ಆಗಿದೆ. ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಮನಗೂಳಿ ಪ್ರತಿಕ್ರಿಯಿಸಿದ್ದಾರೆ.