ತಾಲ್ಲೂಕಿನಲ್ಲಿ ಕಳೆದ 2 ದಿವಸಗಳ ಹಿಂದೆ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹಳಗುಣಕಿ, ಹೊರ್ತಿ, ಹಿರೇಬೇವನೂರ, ಮೆಹರುನಗರ, ಚಿಕ್ಕಬೇವನೂರ, ಇಂಡಿ, ದೇಗಿನಾಳ, ಮಸಳಿ ಕೆಡಿ, ಬಸನಾಳ, ಆಳೂರ, ಲಚ್ಯಾಣ, ಬೈರುಣಗಿ ಮತ್ತು ಬೂದಿಹಾಳ ಗ್ರಾಮಗಳಲ್ಲಿ 1 ಹೆಕ್ಟೇರ್ ದ್ರಾಕ್ಷಿ, 1 ಹೆಕ್ಟೇರ್ ದಾಳಿಂಬೆ, 10.05 ಹೆಕ್ಟೇರ್ ಲಿಂಬೆ, 2.40 ಹೆಕ್ಟೇರ್ ಬಾಳೆ ಬೆಳೆಗೆ ಹಾನಿಯಾಗಿದ್ದು, ಒಟ್ಟು ಸುಮಾರು ₹3 ಲಕ್ಷ ಹಾನಿಯಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕಳಿಸಿಕೊಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ತಿಳಿಸಿದ್ದಾರೆ.