<p><strong>ಮುದ್ದೇಬಿಹಾಳ :</strong> ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳದ ಎಸ್.ಎಸ್.ಶಿವಾಚಾರ್ಯರ ಸ್ವಾತಂತ್ರ್ಯ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ ಕಾಲೇಜು ತಂಡ ವಿಜಯಪುರ ತಂಡ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.</p>.<p>ಈ ಕಾಲೇಜಿನ ಮೂವರು ಆಟಗಾರರು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ ಹಾಗೂ ಅನೀಲ ತಳಗೇರಿ ಆಯ್ಕೆಯಾದ ಕ್ರೀಡಾಪಟುಗಳು.</p>.<p>ಸ್ಪರ್ಧೆಯಲ್ಲಿ ಸಂದೀಪ ಚವ್ಹಾಣ ಅತ್ಯುತ್ತಮ ದಾಳಿಗಾರನಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ವಿಜಯಪೂರ ಜಿಲ್ಲೆಯ ಪಿಯು ಡಿಡಿ ಚಂದ್ರಶೇಖರ ಹೊಸಮನಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕಾಲೇಜಿನ ಕಾರ್ಯದರ್ಶಿ ರವಿ ನಾಯಕ, ಕಾಲೇಜಿನ ಪ್ರಾಚಾರ್ಯರಾದ ಆಯ್.ಎ.ಬಿರಾದಾರ , ತರಬೇತಿದಾರ ಬಸವರಾಜ ಚಿನ್ನಾಪೂರ, ತಂಡದ ಮ್ಯಾನೇಜರ ಚೇತನ ರಾಠೋಡ, ಸಿಬ್ಬಂದಿ ಅಭಿನಂದಿಸಿದ್ದಾರೆ.</p>.<p>ರಾಜ್ಯಮಟ್ಟದ ತಂಡದಲ್ಲಿ ವಿಜಯಪುರ ಜಿಲ್ಲಾ ತಂಡವನ್ನು ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ, ಅನೀಲ ತಳಗೇರಿ, ಶಿವ ರಾಠೋಡ,ಭರತ ಕಾಂಬಳೆ, ಸಂಪತ್ ತೊರ್ಲಿ, ದರ್ಶನ ಹುಗ್ಗಿನ್ನವರ, ಆಕಾಶ ಪೂಜಾರಿ, ಅಬ್ದುಲರಜಾಕ ಮಕಾನದಾರ, ಪ್ರಜ್ವಲ ಈಟಿ, ಸಂದೀಪ ಗಾಯಕವಾಡ, ದೇವಾಂಶ ದಯನ್ನವರ ಪ್ರತಿನಿಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ :</strong> ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳದ ಎಸ್.ಎಸ್.ಶಿವಾಚಾರ್ಯರ ಸ್ವಾತಂತ್ರ್ಯ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ ಕಾಲೇಜು ತಂಡ ವಿಜಯಪುರ ತಂಡ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.</p>.<p>ಈ ಕಾಲೇಜಿನ ಮೂವರು ಆಟಗಾರರು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ ಹಾಗೂ ಅನೀಲ ತಳಗೇರಿ ಆಯ್ಕೆಯಾದ ಕ್ರೀಡಾಪಟುಗಳು.</p>.<p>ಸ್ಪರ್ಧೆಯಲ್ಲಿ ಸಂದೀಪ ಚವ್ಹಾಣ ಅತ್ಯುತ್ತಮ ದಾಳಿಗಾರನಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ವಿಜಯಪೂರ ಜಿಲ್ಲೆಯ ಪಿಯು ಡಿಡಿ ಚಂದ್ರಶೇಖರ ಹೊಸಮನಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕಾಲೇಜಿನ ಕಾರ್ಯದರ್ಶಿ ರವಿ ನಾಯಕ, ಕಾಲೇಜಿನ ಪ್ರಾಚಾರ್ಯರಾದ ಆಯ್.ಎ.ಬಿರಾದಾರ , ತರಬೇತಿದಾರ ಬಸವರಾಜ ಚಿನ್ನಾಪೂರ, ತಂಡದ ಮ್ಯಾನೇಜರ ಚೇತನ ರಾಠೋಡ, ಸಿಬ್ಬಂದಿ ಅಭಿನಂದಿಸಿದ್ದಾರೆ.</p>.<p>ರಾಜ್ಯಮಟ್ಟದ ತಂಡದಲ್ಲಿ ವಿಜಯಪುರ ಜಿಲ್ಲಾ ತಂಡವನ್ನು ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ, ಅನೀಲ ತಳಗೇರಿ, ಶಿವ ರಾಠೋಡ,ಭರತ ಕಾಂಬಳೆ, ಸಂಪತ್ ತೊರ್ಲಿ, ದರ್ಶನ ಹುಗ್ಗಿನ್ನವರ, ಆಕಾಶ ಪೂಜಾರಿ, ಅಬ್ದುಲರಜಾಕ ಮಕಾನದಾರ, ಪ್ರಜ್ವಲ ಈಟಿ, ಸಂದೀಪ ಗಾಯಕವಾಡ, ದೇವಾಂಶ ದಯನ್ನವರ ಪ್ರತಿನಿಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>