<p><strong>ಆಲಮೇಲ: </strong>ಕೋಲ್ಕತದಲ್ಲಿ ನಡೆದ ಟ್ರೈನಿ ವ್ಯೆದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಭಾರತೀಯ ವ್ಯೆದ್ಯಕೀಯ ಸಂಘದ ಸಿಂದಗಿ, ಆಲಮೇಲ ಶಾಖೆಯ ವ್ಯೆದ್ಯರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದರು.<br></p>.<p>‘ಕರ್ತವ್ಯದಲ್ಲಿರುವಾಗಲೇ ಕೋಲ್ಕತದ ಟ್ರೈನಿ ವ್ಯೆದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಹಂತಕರನ್ನು ಬಂಧಿಸುವಲ್ಲಿ ಪಶ್ಚಿಮ ಬಂಗಾಲದ ಸರ್ಕಾರ ವಿಫಲವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವೆಂದು ಪರಿಗಣಿಸಿ ಅತ್ಯಾಚಾರಿ, ಕೊಲೆಗಡುಕರನ್ನು ಬಂಧಿಸಿ ಗಲ್ಲಿಗೇರಿಸಬೇಕು’ ಎಂದು ಪ್ರತಿಭಟನಾಕಾರಕು ಆಗ್ರಹಿಸಿದರು.</p>.<p>ನಂತರ ಪಾದಯಾತ್ರೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಸುರೇಶ್ ಚಾವಲರ್ ಅವರಿಗೆ ಮನವಿ ಸಲ್ಲಿಸಿದರು. ಡಾ.ಸಂದೀಪ ಪಾಟೀಲ ಮಾತನಾಡಿ, ‘ಪದೇ-ಪದೇ ವ್ಯೆದ್ಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳಾಗುತ್ತಿರುವುದು ನಾಚಿಕೆಯ ಸಂಗತಿ, ಸರ್ಕಾರಗಳು ವ್ಯೆದ್ಯರಿಗೆ ಕಾನೂನಿನಡಿ ಸೂಕ್ತ ರಕ್ಷಣೆ ಒದಗಿಸಬೇಕು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದರು.</p>.<p>ತಹಶೀಲ್ದಾರ್ ಸುರೇಶ ಚಾವಲರ್ ಮನವಿ ಸ್ವೀಕರಿಸಿದರು. ಡಾ. ಮಂಜುಷಾ ಪಾಟೀಲ, ಡಾ.ಪ್ರಮೋದ ಮಹಾಜನ, ಡಾ.ಪವನ ಜೋಶಿ, ಡಾ.ಚಂದ್ರಕಾಂತ ಬಾವಿಕಟ್ಟಿ, ಡಾ.ಬಸವರಾಜ ಬಂಟನೂರ, ಡಾ.ಕರಬಸ್ಸು ತಾಳಿಕೋಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮೇಲ: </strong>ಕೋಲ್ಕತದಲ್ಲಿ ನಡೆದ ಟ್ರೈನಿ ವ್ಯೆದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಭಾರತೀಯ ವ್ಯೆದ್ಯಕೀಯ ಸಂಘದ ಸಿಂದಗಿ, ಆಲಮೇಲ ಶಾಖೆಯ ವ್ಯೆದ್ಯರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದರು.<br></p>.<p>‘ಕರ್ತವ್ಯದಲ್ಲಿರುವಾಗಲೇ ಕೋಲ್ಕತದ ಟ್ರೈನಿ ವ್ಯೆದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಹಂತಕರನ್ನು ಬಂಧಿಸುವಲ್ಲಿ ಪಶ್ಚಿಮ ಬಂಗಾಲದ ಸರ್ಕಾರ ವಿಫಲವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವೆಂದು ಪರಿಗಣಿಸಿ ಅತ್ಯಾಚಾರಿ, ಕೊಲೆಗಡುಕರನ್ನು ಬಂಧಿಸಿ ಗಲ್ಲಿಗೇರಿಸಬೇಕು’ ಎಂದು ಪ್ರತಿಭಟನಾಕಾರಕು ಆಗ್ರಹಿಸಿದರು.</p>.<p>ನಂತರ ಪಾದಯಾತ್ರೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಸುರೇಶ್ ಚಾವಲರ್ ಅವರಿಗೆ ಮನವಿ ಸಲ್ಲಿಸಿದರು. ಡಾ.ಸಂದೀಪ ಪಾಟೀಲ ಮಾತನಾಡಿ, ‘ಪದೇ-ಪದೇ ವ್ಯೆದ್ಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳಾಗುತ್ತಿರುವುದು ನಾಚಿಕೆಯ ಸಂಗತಿ, ಸರ್ಕಾರಗಳು ವ್ಯೆದ್ಯರಿಗೆ ಕಾನೂನಿನಡಿ ಸೂಕ್ತ ರಕ್ಷಣೆ ಒದಗಿಸಬೇಕು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದರು.</p>.<p>ತಹಶೀಲ್ದಾರ್ ಸುರೇಶ ಚಾವಲರ್ ಮನವಿ ಸ್ವೀಕರಿಸಿದರು. ಡಾ. ಮಂಜುಷಾ ಪಾಟೀಲ, ಡಾ.ಪ್ರಮೋದ ಮಹಾಜನ, ಡಾ.ಪವನ ಜೋಶಿ, ಡಾ.ಚಂದ್ರಕಾಂತ ಬಾವಿಕಟ್ಟಿ, ಡಾ.ಬಸವರಾಜ ಬಂಟನೂರ, ಡಾ.ಕರಬಸ್ಸು ತಾಳಿಕೋಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>