<p><strong>ತಾಂಬಾ:</strong> ಕೆಲ ವರ್ಷಗಳಿಂದ ಮಳೆರಾಯನ ಮುನಿಸಿನಿಂದ ಜಿಲ್ಲೆಯ ರೈತರು ಬಸವಳಿದಿದ್ದಾರೆ. ಆದರೆ, ಇಲ್ಲೊಬ್ಬ ರೈತ ಬರಗಾಲದ ಬವಣೆಯ ಮಧ್ಯೆಯೇ ಬರಡು ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಲಾಭದಾಯಕ ಪಪ್ಪಾಯಿ ಬೆಳೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ.</p>.<p>ತಾಂಬಾ ಗ್ರಾಮದ ಪ್ರಗತಿಪರ ರೈತ ಗುರಲಿಂಗಪ್ಪ (ಬಾಬು) ಸಂಗಪ್ಪ ಅವಟಿ ಈ ಸಾಧನೆ ಮಾಡಿದವರು. ಇವರ ಈ ದುಡಿಮೆ ಯುವ ರೈತರಿಗೆ ಮಾದರಿಯಾಗಿದೆ.</p>.<p>ಬರಡು ಭೂಮಿಯಲ್ಲಿ ಏನೂ ಬೆಳೆಯಲಾಗದು ಎಂದು ಅರಿತು ಕೂಲಿ ಕೆಲಸದತ್ತ ಮುಖ ಮಾಡಿದ್ದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಬರಡು ಭೂಮಿಯಲ್ಲೇ ಕೃಷಿ ಕೈಗೊಂಡು, ಇದೀಗ ಬಂಪರ್ ಫಸಲು ಪಡೆಯುತ್ತಿದ್ದೇನೆ’ ಎಂದು ಹೇಳಿದಾಗ ಅವರ ಮೊಗದಲ್ಲಿ ಸಾಧನೆ ಎದ್ದು ಕಾಣುತ್ತಿತ್ತು.</p>.<p>ಮೂರು ಎಕರೆ ಜಮೀನಿನಲ್ಲಿ ಇವರು ಪಪ್ಪಾಯಿ ಬಳೆದಿದ್ದಾರೆ. ಈಗಾಗಲೇ ಅದರಲ್ಲಿ ಸಂತೃಪ್ತಿ ಎನ್ನುವಷ್ಟು ಲಾಭ ಪಡೆದಿದ್ದಾರೆ. ಮೊದಲು ಒಂದು ಟನ್ಗೆ ₹8ರಿಂದ 12 ಸಾವಿರ ದರ ಇತ್ತು. ಆದರೆ, ಈಗ ಒಂದು ಟನ್ಗೆ ₹20ರಿಂದ ₹23ಸಾವಿರ ದರ ಇದೆ.</p>.<p>ಪಪ್ಪಾಯಿ ಬೆಳೆಗಾಗಿ ಇದೇ ಗ್ರಾಮದಲ್ಲಿರುವ ಇನ್ನೊಂದು ಭೂಮಿಯಲ್ಲಿ ಕೊಳವೆ ಬಾವಿ ಕೊರಸಿ, ಅಲ್ಲಿಂದ ಪೈಪ್ಲೈನ್ ಮಾಡಿಕೊಂಡಿದ್ದಾರೆ. ಒಂದು ಸಲ ಸಸಿಗಳನ್ನು ನೆಟ್ಟರೆ ಅಂದಾಜು ನೂರು ಟನ್ ಫಸಲು ಕೈಸೇರುತ್ತದೆ. ಹೀಗಾಗಿ ಧಾರಣಿ ಕುಸಿದರೂ ತೊಡಗಿಸಿದ ಬಂಡವಾಳಕ್ಕೆ ಮೋಸವಿಲ್ಲ.</p>.<p>‘ಒಂದೊಂದು ಹಣ್ಣು 2 ರಿಂದ 3 ಕೆ.ಜಿ ತೂಗುತ್ತವೆ. ಪ್ರಸ್ತುತ ಮಾರುಕಟ್ಟಿಯಲ್ಲಿ ಒಂದು ಕೆ.ಜಿ.ಗೆ ₹15 ಧಾರಣೆ ಇದೆ. ಎಕರೆಗೆ ಕನಿಷ್ಠ ₹20 ರಿಂದ 24 ಸಾವಿರ ಖರ್ಚಾಗುತ್ತದೆ. ಇದನ್ನು ತೆಗೆದು ₹2 ರಿಂದ 3 ಲಕ್ಷ ಲಾಭ ಪಡೆಯಬಹುದು’ ಎಂದು ಖುಷಿಯಿಂದಲೇ ಹೇಳಿದರು.</p>.<p>ತಡವಲಗಾದ ಪ್ರಗತಿಪರ ರೈತ ಮಳಸಿದ್ದಪ್ಪ ಇಂಡಿ ಅವರ ಸಲಹೆ ಪಡೆದಿರುವ ಗುರಲಿಂಗಪ್ಪ, ಮೊದಲ ಯತ್ನದಲ್ಲೇ ಲಾಭ ಗಳಿಸಿದ್ದಾರೆ. ಈ ಭಾಗದಲ್ಲಿ ಅಪರೂಪವಾಗಿರುವ ಪಪ್ಪಾಯಿ ವೀಕ್ಷಿಸಲು ಸುತ್ತಲಿನ ಹಳ್ಳಿಗಳ ರೈತರು ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದಾರೆ.</p>.<p>‘ನನ್ನ ಸಂಬಂಧಿಕರೊಬ್ಬರು ಪಪ್ಪಾಯಿ ಬೆಳೆದಿದ್ದರು. ನನಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾನೂ ಪಪ್ಪಾಯಿ ಕೃಷಿ ಕೈಗೊಂಡೆ. ಕೃಷಿಯಿಂದ ವಿಮುಖರಾಗುತ್ತಿರುವ ಯುವಕರು ನನ್ನಂತೆ ಸ್ವಾವಲಂಬಿ ಬದುಕು ರೂಪಿಸಿಕೊಂಡರೆ ಖುಷಿಯಾಗುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಂಬಾ:</strong> ಕೆಲ ವರ್ಷಗಳಿಂದ ಮಳೆರಾಯನ ಮುನಿಸಿನಿಂದ ಜಿಲ್ಲೆಯ ರೈತರು ಬಸವಳಿದಿದ್ದಾರೆ. ಆದರೆ, ಇಲ್ಲೊಬ್ಬ ರೈತ ಬರಗಾಲದ ಬವಣೆಯ ಮಧ್ಯೆಯೇ ಬರಡು ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಲಾಭದಾಯಕ ಪಪ್ಪಾಯಿ ಬೆಳೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ.</p>.<p>ತಾಂಬಾ ಗ್ರಾಮದ ಪ್ರಗತಿಪರ ರೈತ ಗುರಲಿಂಗಪ್ಪ (ಬಾಬು) ಸಂಗಪ್ಪ ಅವಟಿ ಈ ಸಾಧನೆ ಮಾಡಿದವರು. ಇವರ ಈ ದುಡಿಮೆ ಯುವ ರೈತರಿಗೆ ಮಾದರಿಯಾಗಿದೆ.</p>.<p>ಬರಡು ಭೂಮಿಯಲ್ಲಿ ಏನೂ ಬೆಳೆಯಲಾಗದು ಎಂದು ಅರಿತು ಕೂಲಿ ಕೆಲಸದತ್ತ ಮುಖ ಮಾಡಿದ್ದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಬರಡು ಭೂಮಿಯಲ್ಲೇ ಕೃಷಿ ಕೈಗೊಂಡು, ಇದೀಗ ಬಂಪರ್ ಫಸಲು ಪಡೆಯುತ್ತಿದ್ದೇನೆ’ ಎಂದು ಹೇಳಿದಾಗ ಅವರ ಮೊಗದಲ್ಲಿ ಸಾಧನೆ ಎದ್ದು ಕಾಣುತ್ತಿತ್ತು.</p>.<p>ಮೂರು ಎಕರೆ ಜಮೀನಿನಲ್ಲಿ ಇವರು ಪಪ್ಪಾಯಿ ಬಳೆದಿದ್ದಾರೆ. ಈಗಾಗಲೇ ಅದರಲ್ಲಿ ಸಂತೃಪ್ತಿ ಎನ್ನುವಷ್ಟು ಲಾಭ ಪಡೆದಿದ್ದಾರೆ. ಮೊದಲು ಒಂದು ಟನ್ಗೆ ₹8ರಿಂದ 12 ಸಾವಿರ ದರ ಇತ್ತು. ಆದರೆ, ಈಗ ಒಂದು ಟನ್ಗೆ ₹20ರಿಂದ ₹23ಸಾವಿರ ದರ ಇದೆ.</p>.<p>ಪಪ್ಪಾಯಿ ಬೆಳೆಗಾಗಿ ಇದೇ ಗ್ರಾಮದಲ್ಲಿರುವ ಇನ್ನೊಂದು ಭೂಮಿಯಲ್ಲಿ ಕೊಳವೆ ಬಾವಿ ಕೊರಸಿ, ಅಲ್ಲಿಂದ ಪೈಪ್ಲೈನ್ ಮಾಡಿಕೊಂಡಿದ್ದಾರೆ. ಒಂದು ಸಲ ಸಸಿಗಳನ್ನು ನೆಟ್ಟರೆ ಅಂದಾಜು ನೂರು ಟನ್ ಫಸಲು ಕೈಸೇರುತ್ತದೆ. ಹೀಗಾಗಿ ಧಾರಣಿ ಕುಸಿದರೂ ತೊಡಗಿಸಿದ ಬಂಡವಾಳಕ್ಕೆ ಮೋಸವಿಲ್ಲ.</p>.<p>‘ಒಂದೊಂದು ಹಣ್ಣು 2 ರಿಂದ 3 ಕೆ.ಜಿ ತೂಗುತ್ತವೆ. ಪ್ರಸ್ತುತ ಮಾರುಕಟ್ಟಿಯಲ್ಲಿ ಒಂದು ಕೆ.ಜಿ.ಗೆ ₹15 ಧಾರಣೆ ಇದೆ. ಎಕರೆಗೆ ಕನಿಷ್ಠ ₹20 ರಿಂದ 24 ಸಾವಿರ ಖರ್ಚಾಗುತ್ತದೆ. ಇದನ್ನು ತೆಗೆದು ₹2 ರಿಂದ 3 ಲಕ್ಷ ಲಾಭ ಪಡೆಯಬಹುದು’ ಎಂದು ಖುಷಿಯಿಂದಲೇ ಹೇಳಿದರು.</p>.<p>ತಡವಲಗಾದ ಪ್ರಗತಿಪರ ರೈತ ಮಳಸಿದ್ದಪ್ಪ ಇಂಡಿ ಅವರ ಸಲಹೆ ಪಡೆದಿರುವ ಗುರಲಿಂಗಪ್ಪ, ಮೊದಲ ಯತ್ನದಲ್ಲೇ ಲಾಭ ಗಳಿಸಿದ್ದಾರೆ. ಈ ಭಾಗದಲ್ಲಿ ಅಪರೂಪವಾಗಿರುವ ಪಪ್ಪಾಯಿ ವೀಕ್ಷಿಸಲು ಸುತ್ತಲಿನ ಹಳ್ಳಿಗಳ ರೈತರು ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದಾರೆ.</p>.<p>‘ನನ್ನ ಸಂಬಂಧಿಕರೊಬ್ಬರು ಪಪ್ಪಾಯಿ ಬೆಳೆದಿದ್ದರು. ನನಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾನೂ ಪಪ್ಪಾಯಿ ಕೃಷಿ ಕೈಗೊಂಡೆ. ಕೃಷಿಯಿಂದ ವಿಮುಖರಾಗುತ್ತಿರುವ ಯುವಕರು ನನ್ನಂತೆ ಸ್ವಾವಲಂಬಿ ಬದುಕು ರೂಪಿಸಿಕೊಂಡರೆ ಖುಷಿಯಾಗುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>