<p><strong>ಆಲಮೇಲ(ವಿಜಯಪುರ):</strong> ಕುಮಾರಸ್ವಾಮಿ ಅವರು ಬಿಜೆಪಿಯಿಂದ ಹಣ ಪಡೆದು ಸಿಂದಗಿ ಮತ್ತು ಹಾನಗಲ್ನಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ನೀಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದರು.</p>.<p>ಆಲಮೇಲ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿಯೊಂದಿಗೆ ಅಪರೋಕ್ಷವಾಗಿ ಕೈ ಜೋಡಿಸುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಬಿಜೆಪಿಯಿಂದ ಸೂಟ್ ಕೇಸ್ ಪಡೆದು ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.</p>.<p>ಮುಸ್ಲಿಮರ ಮೇಲೆ ಕುಮಾರಸ್ವಾಮಿಗೆ ಕಾಳಜಿಯಲ್ಲ, ಬದಲಾಗಿ ಅವರು ನಿಲ್ಲಿಸುತ್ತಾ ಬಂದಿರುವ ಎಲ್ಲಾ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸೋಲುಂಡು ದಿವಾಳಿಯಾಗಿದ್ದಾರೆ. ಆ ಮೂಲಕ ಒಳಗೊಳಗೆ ಮುಸ್ಲಿಂರನ್ನು ಮಣಿಸುವುದು ಅವರ ಕಾರ್ಯ ಎಂದರು.</p>.<p>ಸಿಂದಗಿಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಠಿಕಾಣಿ ಹೊಡಿದ್ದು ಏಕೆ, ಹಾನಗಲ್ಗೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಿಂದಗಿಯಲ್ಲೂ ಬಿಜೆಪಿ ಅಭ್ಯರ್ಥಿಯಿಂದ ಸೂಟ್ ಕೇಸ್ ಪಡೆದಿದ್ದಾರೆ. ಅದಕ್ಕಾಗಿ ಇಲ್ಲಿ ಠಿಕಾಣಿ ಹಾಕಿದ್ದಾರೆ ಎಂದು ಹರಿಹಾಯ್ದರು.</p>.<p>ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ ಏನು ಮಾಡಿದ್ದಾರೆ? ಇದ್ದ ಶಾದಿಭಾಗ್ಯ ಸೇರಿದಂತೆ ಎಲ್ಲವೂ ಕಸಿದುಕೊಂಡಿದ್ದಾರೆ. ಅಲ್ಲದೇ, ಒಂದು ವರ್ಷವು ಹಜ್ ಕಾರ್ಯಕ್ರಮಕ್ಕೆ ಬರಲಿಲ್ಲ ಇದೇನಾ ನಿಮ್ಮಲ್ಲಿರುವ ಮುಸ್ಲಿಂ ರ ಮೇಲಿನ ಕಾಳಜಿ, ಅವರ ಡೊಂಬರಾಟ ಇಲ್ಲಿ ನಡೆಯೊಲ್ಲ, ಇಲ್ಲಿನ ಮುಸ್ಲಿಂರು ಬಹಳ ಜಾಣರಿದ್ದಾರೆ. ಬಿಜೆಪಿ ಗೆಲ್ಲಿಸಲು ನೀವು ಹೂಡಿರುವ ಆಟ ಗೊತ್ತಿದೆ. ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.</p>.<p>ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಶಾಂತಿ ಹೆಚ್ಚಾಗಿದೆ, ಜನರನ್ನು ವಂಚಿಸುತ್ತಿದ್ದಾರೆ, ಅವರು ದೇಶಕ್ಕೆ ಅಚ್ಚೇ ದಿನ ಮಾಡುವ ಮಾತನಾಡುತ್ತಲೇ ಇದ್ದಾರೆ ಯಾರಿಗೆ ಅಚ್ಚೇದಿನ ಬಂದಿದೆ ಹೇಳಿ ಎಂದರು.</p>.<p>ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ, ಬೀದರ ಶಾಸಕ ರಹೀಂ ಖಾನ್, ಮಾಜಿ ಶಾಸಕ ಹಸನಸಾಬ್ ದೊಟ್ಟಿಹಾಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೈಬೂಬ, ಸಾಧಿಕ ಸುಂಬಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮೇಲ(ವಿಜಯಪುರ):</strong> ಕುಮಾರಸ್ವಾಮಿ ಅವರು ಬಿಜೆಪಿಯಿಂದ ಹಣ ಪಡೆದು ಸಿಂದಗಿ ಮತ್ತು ಹಾನಗಲ್ನಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ನೀಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದರು.</p>.<p>ಆಲಮೇಲ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿಯೊಂದಿಗೆ ಅಪರೋಕ್ಷವಾಗಿ ಕೈ ಜೋಡಿಸುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಬಿಜೆಪಿಯಿಂದ ಸೂಟ್ ಕೇಸ್ ಪಡೆದು ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.</p>.<p>ಮುಸ್ಲಿಮರ ಮೇಲೆ ಕುಮಾರಸ್ವಾಮಿಗೆ ಕಾಳಜಿಯಲ್ಲ, ಬದಲಾಗಿ ಅವರು ನಿಲ್ಲಿಸುತ್ತಾ ಬಂದಿರುವ ಎಲ್ಲಾ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸೋಲುಂಡು ದಿವಾಳಿಯಾಗಿದ್ದಾರೆ. ಆ ಮೂಲಕ ಒಳಗೊಳಗೆ ಮುಸ್ಲಿಂರನ್ನು ಮಣಿಸುವುದು ಅವರ ಕಾರ್ಯ ಎಂದರು.</p>.<p>ಸಿಂದಗಿಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಠಿಕಾಣಿ ಹೊಡಿದ್ದು ಏಕೆ, ಹಾನಗಲ್ಗೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಿಂದಗಿಯಲ್ಲೂ ಬಿಜೆಪಿ ಅಭ್ಯರ್ಥಿಯಿಂದ ಸೂಟ್ ಕೇಸ್ ಪಡೆದಿದ್ದಾರೆ. ಅದಕ್ಕಾಗಿ ಇಲ್ಲಿ ಠಿಕಾಣಿ ಹಾಕಿದ್ದಾರೆ ಎಂದು ಹರಿಹಾಯ್ದರು.</p>.<p>ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ ಏನು ಮಾಡಿದ್ದಾರೆ? ಇದ್ದ ಶಾದಿಭಾಗ್ಯ ಸೇರಿದಂತೆ ಎಲ್ಲವೂ ಕಸಿದುಕೊಂಡಿದ್ದಾರೆ. ಅಲ್ಲದೇ, ಒಂದು ವರ್ಷವು ಹಜ್ ಕಾರ್ಯಕ್ರಮಕ್ಕೆ ಬರಲಿಲ್ಲ ಇದೇನಾ ನಿಮ್ಮಲ್ಲಿರುವ ಮುಸ್ಲಿಂ ರ ಮೇಲಿನ ಕಾಳಜಿ, ಅವರ ಡೊಂಬರಾಟ ಇಲ್ಲಿ ನಡೆಯೊಲ್ಲ, ಇಲ್ಲಿನ ಮುಸ್ಲಿಂರು ಬಹಳ ಜಾಣರಿದ್ದಾರೆ. ಬಿಜೆಪಿ ಗೆಲ್ಲಿಸಲು ನೀವು ಹೂಡಿರುವ ಆಟ ಗೊತ್ತಿದೆ. ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.</p>.<p>ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಶಾಂತಿ ಹೆಚ್ಚಾಗಿದೆ, ಜನರನ್ನು ವಂಚಿಸುತ್ತಿದ್ದಾರೆ, ಅವರು ದೇಶಕ್ಕೆ ಅಚ್ಚೇ ದಿನ ಮಾಡುವ ಮಾತನಾಡುತ್ತಲೇ ಇದ್ದಾರೆ ಯಾರಿಗೆ ಅಚ್ಚೇದಿನ ಬಂದಿದೆ ಹೇಳಿ ಎಂದರು.</p>.<p>ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ, ಬೀದರ ಶಾಸಕ ರಹೀಂ ಖಾನ್, ಮಾಜಿ ಶಾಸಕ ಹಸನಸಾಬ್ ದೊಟ್ಟಿಹಾಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೈಬೂಬ, ಸಾಧಿಕ ಸುಂಬಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>