<p><strong>ವಿಜಯಪುರ:</strong> ಇಲ್ಲಿನ ಕನಕದಾಸ ಬಡಾವಣೆಯಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಏಕೈಕ ಈಜುಗೊಳಕ್ಕೆ ನೀರಿನ ಕೊರತೆ ಎದುರಾಗಿದೆ. ಪರಿಣಾಮ ಬೇಸಿಗೆಯ ಈ ದಿನಗಳಲ್ಲಿ ಬಿಸಿಲಿನ ತಾಪದಿಂದ ಪಾರಾಗಲು ಒಂದಷ್ಟು ದಿನ ಈಜಬೇಕು, ಮಕ್ಕಳಿಗೆ ಈಜು ಕಲಿಸಬೇಕು ಎಂಬುವವರಿಗೆ ನಿರಾಶೆ ಮೂಡಿಸಿದೆ. </p>.<p>ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಈಜುಗೊಳಕ್ಕೆ ಅಗತ್ಯ ಇರುವಷ್ಟು ನೀರು ಪೂರೈಸಲು ಮಹಾನಗರ ಪಾಲಿಕೆ ಮತ್ತು ಜಲಮಂಡಳಿ ನಿರಾಕರಿಸಿವೆ. ಹೀಗಾಗಿ ಈ ಬೇಸಿಗೆಯಲ್ಲಿ ಹೊಸಬರಿಗೆ ಈಜುಗೊಳಕ್ಕೆ ಅವಕಾಶ ಲಭಿಸುತ್ತಿಲ್ಲ. ಆದರೆ, ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವವರಿಗೆ ಮಾತ್ರ ಈಜುಗೊಳಕ್ಕೆ ಪ್ರವೇಶ ಮುಕ್ತವಾಗಿದೆ. </p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ರಾಜಶೇಖರ ದೈವಾಡಿ, ‘ಈಜುಗೊಳಕ್ಕೆ ಸದ್ಯ ಮೂರು ನಳಗಳ ಸಂಪರ್ಕ ಇದೆ. ಈ ನಳಗಳಿಂದ 2.5ಯಿಂದ 3 ಇಂಚು ನೀರು ಬರುತ್ತದೆ. ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ 230 ಜನರಿಗೆ ಯಾವುದೇ ತೊಂದರೆ ಇಲ್ಲ. ಅವರಿಗೆ ಅಗತ್ಯ ಇರುವಷ್ಟು ನೀರು ಸಾಕಾಗುತ್ತಿದೆ. ಆದರೆ, ಹೊಸದಾಗಿ ಬರುವವರಿಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ’ ಎಂದರು.</p>.<p>‘ಈಜುಗೊಳವನ್ನು ಪ್ರತಿದಿನ ಬ್ಯಾಕ್ ವಾಶ್ ಮಾಡಬೇಕಾಗುತ್ತದೆ. ಇದಕ್ಕೆ ನೀರು ಹೆಚ್ಚು ಬಳಕೆಯಾಗುತ್ತದೆ. ಆದರೆ, ಪಾಲಿಕೆಯಿಂದ ಅಷ್ಟು ನೀರು ಪೂರೈಕೆಯಾಗುತ್ತಿಲ್ಲ. ಇದಕ್ಕಾಗಿ ಹೊಸದಾಗಿ 4 ಇಂಚಿನ ಪೈಪ್ ಅಳವಡಿಸಲು ಯೋಜನೆ ಸಿದ್ಧವಾಗುತ್ತಿದೆ. ಇದಕ್ಕೆ ಜಲಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳು ಒಪ್ಪಿದ್ದಾರೆ. ಇದು ಸಾಧ್ಯವಾದರೆ ಈಗಿನ ಸಮಸ್ಯೆ ನಿವಾರಣೆಯಾಗಲಿದೆ' ಎಂದರು.</p>.<p>‘ಟ್ಯಾಂಕರ್ ನೀರು ಅಥವಾ ಕೊಳವೆಬಾವಿ ನೀರು ಬಳಸಿದರೆ ಈಜುಗೊಳದ ಫಿಲ್ಟರ್ ಸಿಸ್ಟಂಗೆ ಈ ಗಡಸು ನೀರಿನಿಂದ ತೊಂದರೆಯಾಗುತ್ತದೆ. ಕೊಳದಲ್ಲಿ ಪಾಚಿಕಟ್ಟುವುದು, ಗ್ಯಾಲರಿ, ಜಾಲರಿಗೆ ತುಕ್ಕು ಹಿಡಿಯುತ್ತದೆ. 10 ವರ್ಷ ಬಾಳಿಕೆ ಬರಬಹುದಾದ ಈಜುಗೊಳ ಕೇವಲ ಒಂದು ವರ್ಷದಲ್ಲೇ ಹಾಳಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.</p>.<p>‘ಈಜುಗೊಳದ ನೀರು ಶುದ್ಧೀಕರಿಸಲು ಆಲಂ ಜಲ್, ಫೌಡರ್ ಹೆಚ್ಚು ಹಾಕಿದರೆ ಈಜುಗಾರರಿಗೆ ಕಣ್ಣು ಉರಿ ಬರುತ್ತದೆ, ಮಕ್ಕಳಿಗೆ ಅಲರ್ಜಿ ಆಗುತ್ತದೆ. ಹೀಗಾಗಿ ಹೊಸದಾಗಿ ಅವಕಾಶ ನೀಡುವುದನ್ನು ಬಂದ್ ಮಾಡಿದ್ದೇವೆ’ ಎಂದು ಹೇಳಿದರು.</p>.<p>‘ಈಜುಗೊಳ 6 ಲಕ್ಷ ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ. ದಿನವೊಂದಕ್ಕೆ 1 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಅಗತ್ಯ ಇರುವಷ್ಟು ನೀರು ಲಭಿಸಿದರೆ ಪ್ರತಿದಿನ 400 ಜನರಿಗೆ ಈಜಲು ಅವಕಾಶ ಕಲ್ಪಿಸಬಹುದು’ ಎಂದು ತಿಳಿಸಿದರು.</p>.<div><blockquote>ಸದ್ಯದ ಸ್ಥಿತಿಯಲ್ಲಿ ಈಜುಗೊಳ ನಿರ್ವಹಿಸಬಹುದು . ಹೊಸದಾಗಿ 300 ಜನ ಈಜಲು ಅವಕಾಶ ಕೇಳುತ್ತಿದ್ದಾರೆ. ಅವರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ </blockquote><span class="attribution">-ರಾಜಶೇಖರ ದೈವಾಡಿ ಉಪ ನಿರ್ದೇಶಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಇಲ್ಲಿನ ಕನಕದಾಸ ಬಡಾವಣೆಯಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಏಕೈಕ ಈಜುಗೊಳಕ್ಕೆ ನೀರಿನ ಕೊರತೆ ಎದುರಾಗಿದೆ. ಪರಿಣಾಮ ಬೇಸಿಗೆಯ ಈ ದಿನಗಳಲ್ಲಿ ಬಿಸಿಲಿನ ತಾಪದಿಂದ ಪಾರಾಗಲು ಒಂದಷ್ಟು ದಿನ ಈಜಬೇಕು, ಮಕ್ಕಳಿಗೆ ಈಜು ಕಲಿಸಬೇಕು ಎಂಬುವವರಿಗೆ ನಿರಾಶೆ ಮೂಡಿಸಿದೆ. </p>.<p>ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಈಜುಗೊಳಕ್ಕೆ ಅಗತ್ಯ ಇರುವಷ್ಟು ನೀರು ಪೂರೈಸಲು ಮಹಾನಗರ ಪಾಲಿಕೆ ಮತ್ತು ಜಲಮಂಡಳಿ ನಿರಾಕರಿಸಿವೆ. ಹೀಗಾಗಿ ಈ ಬೇಸಿಗೆಯಲ್ಲಿ ಹೊಸಬರಿಗೆ ಈಜುಗೊಳಕ್ಕೆ ಅವಕಾಶ ಲಭಿಸುತ್ತಿಲ್ಲ. ಆದರೆ, ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವವರಿಗೆ ಮಾತ್ರ ಈಜುಗೊಳಕ್ಕೆ ಪ್ರವೇಶ ಮುಕ್ತವಾಗಿದೆ. </p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ರಾಜಶೇಖರ ದೈವಾಡಿ, ‘ಈಜುಗೊಳಕ್ಕೆ ಸದ್ಯ ಮೂರು ನಳಗಳ ಸಂಪರ್ಕ ಇದೆ. ಈ ನಳಗಳಿಂದ 2.5ಯಿಂದ 3 ಇಂಚು ನೀರು ಬರುತ್ತದೆ. ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ 230 ಜನರಿಗೆ ಯಾವುದೇ ತೊಂದರೆ ಇಲ್ಲ. ಅವರಿಗೆ ಅಗತ್ಯ ಇರುವಷ್ಟು ನೀರು ಸಾಕಾಗುತ್ತಿದೆ. ಆದರೆ, ಹೊಸದಾಗಿ ಬರುವವರಿಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ’ ಎಂದರು.</p>.<p>‘ಈಜುಗೊಳವನ್ನು ಪ್ರತಿದಿನ ಬ್ಯಾಕ್ ವಾಶ್ ಮಾಡಬೇಕಾಗುತ್ತದೆ. ಇದಕ್ಕೆ ನೀರು ಹೆಚ್ಚು ಬಳಕೆಯಾಗುತ್ತದೆ. ಆದರೆ, ಪಾಲಿಕೆಯಿಂದ ಅಷ್ಟು ನೀರು ಪೂರೈಕೆಯಾಗುತ್ತಿಲ್ಲ. ಇದಕ್ಕಾಗಿ ಹೊಸದಾಗಿ 4 ಇಂಚಿನ ಪೈಪ್ ಅಳವಡಿಸಲು ಯೋಜನೆ ಸಿದ್ಧವಾಗುತ್ತಿದೆ. ಇದಕ್ಕೆ ಜಲಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳು ಒಪ್ಪಿದ್ದಾರೆ. ಇದು ಸಾಧ್ಯವಾದರೆ ಈಗಿನ ಸಮಸ್ಯೆ ನಿವಾರಣೆಯಾಗಲಿದೆ' ಎಂದರು.</p>.<p>‘ಟ್ಯಾಂಕರ್ ನೀರು ಅಥವಾ ಕೊಳವೆಬಾವಿ ನೀರು ಬಳಸಿದರೆ ಈಜುಗೊಳದ ಫಿಲ್ಟರ್ ಸಿಸ್ಟಂಗೆ ಈ ಗಡಸು ನೀರಿನಿಂದ ತೊಂದರೆಯಾಗುತ್ತದೆ. ಕೊಳದಲ್ಲಿ ಪಾಚಿಕಟ್ಟುವುದು, ಗ್ಯಾಲರಿ, ಜಾಲರಿಗೆ ತುಕ್ಕು ಹಿಡಿಯುತ್ತದೆ. 10 ವರ್ಷ ಬಾಳಿಕೆ ಬರಬಹುದಾದ ಈಜುಗೊಳ ಕೇವಲ ಒಂದು ವರ್ಷದಲ್ಲೇ ಹಾಳಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.</p>.<p>‘ಈಜುಗೊಳದ ನೀರು ಶುದ್ಧೀಕರಿಸಲು ಆಲಂ ಜಲ್, ಫೌಡರ್ ಹೆಚ್ಚು ಹಾಕಿದರೆ ಈಜುಗಾರರಿಗೆ ಕಣ್ಣು ಉರಿ ಬರುತ್ತದೆ, ಮಕ್ಕಳಿಗೆ ಅಲರ್ಜಿ ಆಗುತ್ತದೆ. ಹೀಗಾಗಿ ಹೊಸದಾಗಿ ಅವಕಾಶ ನೀಡುವುದನ್ನು ಬಂದ್ ಮಾಡಿದ್ದೇವೆ’ ಎಂದು ಹೇಳಿದರು.</p>.<p>‘ಈಜುಗೊಳ 6 ಲಕ್ಷ ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ. ದಿನವೊಂದಕ್ಕೆ 1 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಅಗತ್ಯ ಇರುವಷ್ಟು ನೀರು ಲಭಿಸಿದರೆ ಪ್ರತಿದಿನ 400 ಜನರಿಗೆ ಈಜಲು ಅವಕಾಶ ಕಲ್ಪಿಸಬಹುದು’ ಎಂದು ತಿಳಿಸಿದರು.</p>.<div><blockquote>ಸದ್ಯದ ಸ್ಥಿತಿಯಲ್ಲಿ ಈಜುಗೊಳ ನಿರ್ವಹಿಸಬಹುದು . ಹೊಸದಾಗಿ 300 ಜನ ಈಜಲು ಅವಕಾಶ ಕೇಳುತ್ತಿದ್ದಾರೆ. ಅವರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ </blockquote><span class="attribution">-ರಾಜಶೇಖರ ದೈವಾಡಿ ಉಪ ನಿರ್ದೇಶಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>