<p><strong>ವಿಜಯಪುರ</strong>: ಬಡ ಮಕ್ಕಳಿಗೆ ನವೋದಯ, ಕಿತ್ತೂರುರಾಣಿ ಚನ್ನಮ್ಮ, ಸೈನಿಕ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆಗಳಿಗೆ ಸಹಾಯಕವಾಗಲು ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಚ್.ಟಿ. ಬಿದರಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಎಲ್.ಎಚ್. ಬಿದರಿ ಹೇಳಿದರು.</p>.<p>ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.5 ರಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಯೋಜನವಾಗುವ ಸದುದ್ದೇಶದಿಂದ ಉಚಿತ ಶಿಕ್ಷಣ, ಊಟ ನೀಡಲಾಗುತ್ತಿದೆ. ಸಮಾಜದ ಕಟ್ಟ ಕಡೆಯ ಮಗುವಿಗೆ ಈ ಪ್ರಯೋಜನ ತಲುಪಬೇಕು. ಶಿಬಿರದಲ್ಲಿ ಮಕ್ಕಳ ಸರ್ವೋತಮುಖ ಅಭಿವೃದ್ಧಿಯೇ ನಮ್ಮ ಗುರಿ. ಮುಂಬರುವ ದಿನಗಳಲ್ಲಿ ಶಿಬಿರವನ್ನು ವಸತಿ ಸಹಿತ ಮಾಡುತ್ತೇವೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೂ ಸಹಾಯವಾಗಲಿದೆ ಎಂದರು.</p>.<p>ಶಾಲಾ ಮುಖ್ಯಶಿಕ್ಷಕ ಬಿ.ಸಿ.ಚಲವಾದಿ ಮಾತನಾಡಿ, ಸಮಾಜದಲ್ಲಿ ತಾವು ಬೆಳೆದು ಮತ್ತೊಬ್ಬರನ್ನು ಬೆಳೆಸಬೇಕು. ಆ ಸದುದ್ದೇಶದಿಂದ ಬೇಸಿಗೆ ಶಿಬಿರ ಪ್ರಾರಂಭಸಿದ್ದಾರೆ ಎಂದರು.</p>.<p>ಶಿಕ್ಷಕರಾದ ಸಂಗಮೇಶ ಅರ್ಜುಣಗಿ, ಪರಶುರಾಮ ಹೊನ್ನಕಸ್ತೂರಿ, ಎಂ.ಬಿ. ಕರಡಿ, ಎಸ್.ಬಿ. ಹಿರೇಮಠ, ಎಸ್.ಜಿ. ಬಿರಾದಾರ, ಎಸ್.ವ್ಹಿ. ಹುಗ್ಗಿ, ಬಿ.ಎಸ್. ಬೇನೂರ, ಪಿ.ಎಸ್ ದಂದರಗಿ, ವಿ.ಎಸ್. ಪತ್ತಾರ ಮುಂತಾದವರು ಇದ್ದರು.</p>.<p>ವಿಜಯಪುರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ. ನಂ5 ರಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಗುರುವಾರ ನಡೆದ ಉಚಿತ ಬೇಸಿಗೆ ಶಿಬಿರದಲ್ಲಿ ಡಾ.ಎಲ್.ಎಚ್ ಬಿದರಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಬಡ ಮಕ್ಕಳಿಗೆ ನವೋದಯ, ಕಿತ್ತೂರುರಾಣಿ ಚನ್ನಮ್ಮ, ಸೈನಿಕ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆಗಳಿಗೆ ಸಹಾಯಕವಾಗಲು ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಚ್.ಟಿ. ಬಿದರಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಎಲ್.ಎಚ್. ಬಿದರಿ ಹೇಳಿದರು.</p>.<p>ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.5 ರಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಯೋಜನವಾಗುವ ಸದುದ್ದೇಶದಿಂದ ಉಚಿತ ಶಿಕ್ಷಣ, ಊಟ ನೀಡಲಾಗುತ್ತಿದೆ. ಸಮಾಜದ ಕಟ್ಟ ಕಡೆಯ ಮಗುವಿಗೆ ಈ ಪ್ರಯೋಜನ ತಲುಪಬೇಕು. ಶಿಬಿರದಲ್ಲಿ ಮಕ್ಕಳ ಸರ್ವೋತಮುಖ ಅಭಿವೃದ್ಧಿಯೇ ನಮ್ಮ ಗುರಿ. ಮುಂಬರುವ ದಿನಗಳಲ್ಲಿ ಶಿಬಿರವನ್ನು ವಸತಿ ಸಹಿತ ಮಾಡುತ್ತೇವೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೂ ಸಹಾಯವಾಗಲಿದೆ ಎಂದರು.</p>.<p>ಶಾಲಾ ಮುಖ್ಯಶಿಕ್ಷಕ ಬಿ.ಸಿ.ಚಲವಾದಿ ಮಾತನಾಡಿ, ಸಮಾಜದಲ್ಲಿ ತಾವು ಬೆಳೆದು ಮತ್ತೊಬ್ಬರನ್ನು ಬೆಳೆಸಬೇಕು. ಆ ಸದುದ್ದೇಶದಿಂದ ಬೇಸಿಗೆ ಶಿಬಿರ ಪ್ರಾರಂಭಸಿದ್ದಾರೆ ಎಂದರು.</p>.<p>ಶಿಕ್ಷಕರಾದ ಸಂಗಮೇಶ ಅರ್ಜುಣಗಿ, ಪರಶುರಾಮ ಹೊನ್ನಕಸ್ತೂರಿ, ಎಂ.ಬಿ. ಕರಡಿ, ಎಸ್.ಬಿ. ಹಿರೇಮಠ, ಎಸ್.ಜಿ. ಬಿರಾದಾರ, ಎಸ್.ವ್ಹಿ. ಹುಗ್ಗಿ, ಬಿ.ಎಸ್. ಬೇನೂರ, ಪಿ.ಎಸ್ ದಂದರಗಿ, ವಿ.ಎಸ್. ಪತ್ತಾರ ಮುಂತಾದವರು ಇದ್ದರು.</p>.<p>ವಿಜಯಪುರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ. ನಂ5 ರಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಗುರುವಾರ ನಡೆದ ಉಚಿತ ಬೇಸಿಗೆ ಶಿಬಿರದಲ್ಲಿ ಡಾ.ಎಲ್.ಎಚ್ ಬಿದರಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>