ದಲಿತ ಸಂಘರ್ಷ ಸಮಿತಿ ಪ್ರಮುಖ ಚಂದ್ರಕಾಂತ ಸಿಂಗೆ ಮಾತನಾಡಿ, ‘ಗ್ರಾಮದ ಯುವಕರು ಶಿವಲಿಂಗ ಯಾತನೂರ, ಸಿದ್ದು ಬಡಿಗೇರ, ಗುರು ಚಾವರ ನೇತೃತ್ವದಲ್ಲಿ ಹಲವಾರು ವರ್ಷಗಳ ಹಿಂದೆಯೇ ಗಾಂಧಿ ವೃತ್ತ ನಿರ್ಮಿಸಿ ಅಲ್ಲಿ ಚಿಕ್ಕ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ವೃತ್ತದಲ್ಲಿ ನಿಂತುಕೊಂಡಿರುವ ಗಾಂಧೀಜಿ ಪುತ್ಥಳಿ ಸ್ಥಾಪಿಸುವಂತೆ ಶಾಸಕ ಮನಗೂಳಿಯವರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಒಂದು ಸುಂದರ ವೃತ್ತ ನಿರ್ಮಾಣಗೊಂಡು ಪ್ರತಿಮೆ ಅನಾವರಣಗೊಂಡಿದೆ’ ಎಂದು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.